ರಿಯಾಯಿತಿ ನೀಡಿದ್ದರ ಪರಿಣಾಮ ವಾಹನ ತಯಾರಕ ಸಂಸ್ಥೆಗಳಿಗೆ ಆಗಿರುವ ನಷ್ಟ ರೂ 12 ಸಾವಿರ ಕೋಟಿ ಅಷ್ಟೇ !!
ಭಾರತದಲ್ಲಿ ಈಗಾಗಲೇ ಬಿಎಸ್-III ಎಂಜಿನ್ ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ನಿಷೇದ ಮಾಡಲಾಗಿದ್ದು, ಇದರ ಪರಿಣಾಮವಾಗಿ ರೂ. 5,000 ಕೋಟಿ ಮೌಲ್ಯದ ವಾಹನಗಳು ಮಾರಾಟವಾಗದೆ ಉಳಿದಿವೆ.
ಸುಪ್ರೀಂ ಕೋರ್ಟ್ ಏಪ್ರಿಲ್ 1ರಿಂದ ದೇಶದಲ್ಲಿ ಬಿಎಸ್-III ಎಂಜಿನ್ ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ನಿಷೇಧ ಮಾಡಿದ್ದು, ಇದರಿಂದಾಗಿ ಸರಿ ಸುಮಾರು ರೂ. 5,000 ಕೋಟಿಯಷ್ಟು ಬೆಲೆಬಾಳುವ ಬಿಎಸ್- III ವಾಹನಗಳು ಮಾರಾಟವಾಗದೆ ಹಾಗೆ ಉಳಿದಿದ್ದು, ಇದರಿಂದಾಗಿ ವಾಹನ ತಯಾರಕ ಕಂಪನಿಗಳು ಇಕ್ಕಟ್ಟಿಗೆ ಸಿಲುಕಿವೆ.

ವಾಹನ ತಯಾರಕರು ಬಿಎಸ್-III ವಾಹನಗಳ ಮೇಲೆ ಭಾರೀ ರಿಯಾಯಿತಿ ನೀಡಿದ ಹೊರತಾಗಿಯೂ ಹೆಚ್ಚು ಕಡಿಮೆ 5 ಸಾವಿರ ಕೋಟಿ ನಷ್ಟ ಸಂಭವಿಸಿರುವುದು, ಕಂಪನಿಗಳಿಗೆ ದೊಡ್ಡ ಮಟ್ಟದ ಹಿನ್ನಡೆ ಉಂಟು ಮಾಡಿದೆ.

ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ ಬಿಎಸ್-III ವಾಹನಗಳ ಮಾರಾಟ ಮತ್ತು ನೋಂದಣಿ ಮೇಲಿನ ನಿಷೇಧದಿಂದಾಗಿ ಆಟೋ ತಯಾರಕ ಸಂಸ್ಥೆಗಳಿಗೆ 20,000 ಕೋಟಿ ರೂ ನಷ್ಟವಾಗಿದೆ ಎನ್ನಲಾಗಿದೆ.

ಏಪ್ರಿಲ್ 1ರ ಒಳಗಾಗಿ ಬಿಎಸ್-III ವಾಹನಗಳನ್ನು ಮಾರಾಟ ಮಾಡಲೇ ಬೇಕು ಎಂಬ ಇಕ್ಕಟಿಗೆ ಸಿಲುಕಿ ಹೋಂಡಾ, ಬಜಾಜ್ ಸೇರಿ ಮತ್ತಿತರ ಕಂಪನಿಗಳು ವಾಹನಗಳ ಮೇಲೆ ಭಾರಿ ರಿಯಾಯಿತಿ ನೀಡಿದ್ದವು.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ರೀತಿಯ ರಿಯಾಯಿತಿ ನೀಡಿದ್ದರ ಪರಿಣಾಮ ವಾಹನ ತಯಾರಕ ಸಂಸ್ಥೆಗಳಿಗೆ ಆಗಿರುವ ನಷ್ಟ ರೂ 1,2000 ಕೋಟಿ ಅಷ್ಟೇ !!

ವ್ಯವಹಾರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಆಟೋ ಮೊಬೈಲ್ ಕ್ಷೇತ್ರದ ಹೂಡಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯವನ್ನು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ ಸಂಸ್ಥೆ (SIAM) ವ್ಯಕ್ತಪಡಿಸಿದೆ.

ಎಸ್ಐಎಎಂ ಮಹಾನಿರ್ದೇಶಕ ವಿಷ್ಣು ಮಾಥುರ್ ಹೇಳುವ ಪ್ರಕಾರ, ಸದ್ಯ 1.2 ಲಕ್ಷ ಬಿಎಸ್-III ವಾಹನಗಳು ಮಾರಾಟವಾಗದೆ ಉಳಿದಿದ್ದು, ಈ 1.2 ಲಕ್ಷ ಬಿಎಸ್-III ವಾಹನಗಳ ಬೆಲೆ ರೂ. 5,000 ಎನ್ನಲಾಗಿದೆ.

ಈ ರಿಯಾಯತಿ ನೀಡುವ ಸ್ಪರ್ಧೆಯಲ್ಲಿ ಹೆಚ್ಚಿನ ಮಟ್ಟದ ಯಶಸ್ಸು ಸಾಧಿಸಿದ್ದು ಕೇವಲ ದ್ವಿಚಕರ ವಾಹನಗಳು ಎನ್ನುವುದನ್ನು ಎಸ್ಐಎಎಂ ಮಹಾನಿರ್ದೇಶಕ ವಿಷ್ಣು ಮಾಥುರ್ ಒಪ್ಪಿಕೊಳ್ಳುತ್ತಾರೆ.

ಇನ್ನು ಆದೇಶದ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ಈ ಬಿಎಸ್ III ಎಂಜಿನ್ ಹೊಂದಿರುವ ವಾಹನಗಳಿಂದ ಪರಿಸರಕ್ಕೆ ಆಗುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಬೆಂಚ್, ವಾಣಿಜ್ಯ ಹಿತಾಸಕ್ತಿಗಿಂತ ಲಕ್ಷಾಂತರ ಜನರ ಆರೋಗ್ಯದ ಹಿತಾಸಕ್ತಿ ಮುಖ್ಯ ಎಂಬ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್ ಮಾರ್ಚ್ 31ರ ಬಳಿಕ ಬಿಎಸ್ III (ಭಾರತ್ ಸ್ಟೇಜ್ III) ಎಂಜಿನ್ ಹೊಂದಿರುವ ವಾಹನಗಳ ನೋಂದಣಿ ಪ್ರಕ್ರಿಯೆ ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿ ತೀರ್ಪನ್ನು ನೀಡಿತ್ತು.


Click it and Unblock the Notifications








