ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಮುಂಬೈನ ನಿವಾಸಿಗಳು ಪ್ರತಿ ವರ್ಷದ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಭಾರೀ ಮಳೆಯ ಕಾರಣಕ್ಕೆ ಪ್ರತಿದಿನ ಪ್ರವಾಹ ಉಂಟಾಗುತ್ತಿದೆ. ಕಳೆದ ವರ್ಷವೂ ಸಹ ಹಲವಾರು ವಾಹನಗಳು ಪ್ರವಾಹದ ಕಾರಣಕ್ಕೆ ಹಾನಿಯಾಗಿದ್ದವು. ಈ ವರ್ಷ ಪ್ರವಾಹದಿಂದ ತಮ್ಮ ವಾಹನಗಳನ್ನು ಕಾಪಾಡಿಕೊಳ್ಳಲು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಅದು ಮುಂಬೈನಲ್ಲಿರುವ ಫ್ಲೈ ಒವರ್‍‍ಗಳ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸುವುದು. ಇಂಡಿಯಾ ಟುಡೆ ಸೋಷಿಯಲ್‌ ಅಪ್‍‍‍ಲೋಡ್ ಮಾಡಿರುವ ವೀಡಿಯೊದಲ್ಲಿ ಫ್ಲೈಓವರ್‌ನ ಬಲ ಭಾಗದಲ್ಲಿ ನಿಲ್ಲಿಸಿರುವ ಹಲವು ವಾಹನಗಳನ್ನು ಕಾಣಬಹುದು. ರಸ್ತೆಗಳಲ್ಲಿ ಮಳೆಯಿಂದ ಉಂಟಾಗುವ ಪ್ರವಾಹದಿಂದ ತಮ್ಮ ವಾಹನಗಳನ್ನು ರಕ್ಷಿಸಲು ತಮ್ಮ ವಾಹನಗಳನ್ನು ಫ್ಲೈ ಓವರ್ ಮೇಲೆ ನಿಲ್ಲಿಸಿದ್ದಾರೆ.

ಈ ವರ್ಷವೂ ಸಹ ಹಲವಾರು ವಾಹನಗಳು ಪ್ರವಾಹಕ್ಕೆ ಸಿಲುಕಿ ರಸ್ತೆಗಳಲ್ಲಿ ಸಿಲುಕಿಕೊಂಡಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಏರುತ್ತಿರುವ ನೀರಿನಲ್ಲಿ ಸಿಲುಕಿಕೊಂಡಿವೆ. ಫ್ಲೈಓವರ್‌ನಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಹೆಚ್ಚುತ್ತಿರುವ ನೀರಿನ ಮಟ್ಟದಿಂದ ವಾಹನಗಳನ್ನು ರಕ್ಷಿಸಿಕೊಳ್ಳಬಹುದು.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಈ ನಿರ್ಧಾರವನ್ನು ಎಲ್ಲರೂ ಒಟ್ಟಾರೆಯಾಗಿ ತೆಗೆದುಕೊಂಡಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ಆದರೆ, ಬಹುತೇಕ ಎಲ್ಲಾ ನಿವಾಸಿಗಳು ತಮ್ಮ ವಾಹನಗಳನ್ನು ಸಾಂತಾ ಕ್ರೂಜ್ - ಚೆಂಬೂರ್ ರಸ್ತೆಯಲ್ಲಿರುವ ಫ್ಲೈಓವರ್ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಪ್ರತಿ ವರ್ಷವೂ, ಪ್ರವಾಹದಿಂದಾಗಿ ಭಾರತದಲ್ಲಿ ಅನೇಕ ವಾಹನಗಳು ಹಾನಿಯನ್ನು ಎದುರಿಸುತ್ತವೆ. ಕೇರಳದ ಜನರು ವಾಹನಗಳನ್ನು ಪ್ರವಾಹದ ನೀರಿನಿಂದ ರಕ್ಷಿಸಲು, ವಾಹನಗಳ ಕೆಳಗೆ ಇಟ್ಟಿಗೆಗಳನ್ನು ಇಡುತ್ತಿದ್ದಾರೆ. ಕೆಲವೊಮ್ಮೆ ಇಟ್ಟಿಗೆಗಳು ಕರಗಿ ವಾಹನಗಳು ಕೆಳಗೆ ಕುಸಿಯುವ ಸಾಧ್ಯತೆಗಳಿರುತ್ತವೆ.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ನಿಲುಗಡೆ ಮಾಡಿರುವ ವಾಹನಗಳು ಪ್ರವಾಹದ ನೀರಿನಿಂದ ಹಾನಿಗೊಳಗಾಗುವುದಿಲ್ಲವಾದರೂ, ಕ್ಯಾಬಿನ್ ಅನ್ನು ಸ್ವಚ್ಛಗೊಳಿಸಲು, ಎಂಜಿನ್ ಅನ್ನು ಸ್ವಚ್ಛಗೊಳಿಸಲು ಹಾಗೂ ವೈರ್‍‍ಗಳನ್ನು ಬದಲಿಸಲು, ರಿಪೇರಿಗಾಗಿ ಸಾಕಷ್ಟು ಖರ್ಚಾಗುತ್ತದೆ.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಪ್ರವಾಹದಿಂದ ಉಂಟಾಗುವ ಹಾನಿಯಿಂದ ತಪ್ಪಿಸಿಕೊಳ್ಳಲು, ಪ್ರವಾಹದಿಂದ ಕೂಡಿದ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸದೇ ಇರುವುದು ಉತ್ತಮವಾದ ಯೋಜನೆಯಾಗಿದೆ. ಈ ವೀಡಿಯೊದಲ್ಲಿ ಕಾಣುವಂತೆ ವಾಹನಗಳನ್ನು ಫ್ಲೈ ಓವರಿನ ಬಲಭಾಗದಲ್ಲಿ ನಿಲ್ಲಿಸಲಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಈ ಬಲಭಾಗವು ವಾಹನಗಳು ವೇಗವಾಗಿ ಚಲಿಸುವ ಲೇನ್ ಹಾಗೂ ಓವರ್‍‍‍ಟೇಕ್ ಮಾಡುವ ಲೇನ್ ಆಗಿದೆ. ಮುಂಬೈನ ಸಂಚಾರಿ ಪೊಲೀಸರು ತಮ್ಮ ವಾಹನಗಳನ್ನು ಫ್ಲೈ ಓವರ್ ಮೇಲೆ ನಿಲ್ಲಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಸಹ ಮುಂಬೈನಲ್ಲಿ ಹಲವಾರು ವಾಹನಗಳು ನೀರಿನಲ್ಲಿ ಸಿಲುಕಿರುವ ವೀಡಿಯೊಗಳು ವೈರಲ್ ಆಗಿವೆ.

MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಟಾಪ್ ಎಂಡ್ ಮಾದರಿಯ ಕಾರುಗಳು ನೀರಿನಲ್ಲಿ ಸಿಲುಕಿರುವ ವೀಡಿಯೊಗಳು ಹೆಚ್ಚಿನ ಪ್ರಮಾಣದಲ್ಲಿ ವೈರಲ್ ಆಗಿವೆ. ಈ ಮೊದಲು ಮಹೀಂದ್ರಾ ಸ್ಕಾರ್ಪಿಯೋದಲ್ಲಿದ್ದ ಇಬ್ಬರು, ನೀರು ನಿಂತುಕೊಂಡಿದ್ದ ಅಂಡರ್‌ಪಾಸ್ ದಾಟಲು ಪ್ರಯತ್ನಿಸಿ ವಾಹನದೊಳಗೆ ಸಿಲುಕಿಕೊಂಡಿದ್ದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ನೀರಿನ ಮಟ್ಟವೂ ವಿಪರೀತವಾಗಿ ಏರಿದ ನಂತರ ವಾಹನವು ಸ್ಥಗಿತಗೊಂಡಿತು. ಕಾರಿನಲ್ಲಿದ್ದ ಎಲೆಕ್ಟ್ರಾನಿಕ್ ಭಾಗಗಳು ಫೇಲ್ ಆದ ಕಾರಣ, ಕಾರಿನಲ್ಲಿದ್ದವರಿಗೆ ಡೋರ್ ತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರಿಬ್ಬರೂ ಸುದೀರ್ಘ ಅವಧಿಯವರೆಗೆ ಕಾರಿನಲ್ಲೇ ಉಳಿಯುವಂತಾಯಿತು.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಪ್ರವಾಹದ ಸಮಯದಲ್ಲಿ ವಾಹನಗಳನ್ನು ಎತ್ತರದ ಜಾಗದಲ್ಲಿ ನಿಲ್ಲಿಸುವುದು ಒಳ್ಳೆಯದು. ಯಾವಾಗಲೂ ಈ ರೀತಿಯಾಗಿ ಮಾಡಲು ಸಾಧ್ಯವಿಲ್ಲದಿದ್ದರೂ, ವಾಹನಗಳನ್ನು ರಕ್ಷಿಸಲು ಇರುವ ಸುರಕ್ಷಿತ ಮಾರ್ಗವಿದು. ಇದರಿಂದಾಗಿ ವಾಹನದೊಳಗೆ ನೀರು ನಿಲ್ಲುವುದು ತಪ್ಪುತ್ತದೆ.

ಪ್ರವಾಹದಿಂದ ವಾಹನ ರಕ್ಷಿಸಲು ಹೊಸ ಪ್ಲಾನ್ ಮಾಡಿದ ಮುಂಬೈ ಜನತೆ..!

ಆದರೆ ಕೆಲವೊಮ್ಮೆ ಫ್ಲೈಓವರ್‌ಗಳು ಸಹ ಪ್ರವಾಹಕ್ಕೆ ಸಿಲುಕುತ್ತವೆ. ಕಳೆದ ವರ್ಷ, ಭಾರಿ ಮಳೆ ಸುರಿದ ಪರಿಣಾಮ, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಹೊಸದಾಗಿ ಉದ್ಘಾಟನೆಯಾದ ಎಲಿವೇಟೆಡ್ ರಸ್ತೆಯಲ್ಲಿ ಕನಿಷ್ಠ 3 ಅಡಿ ನೀರು ನಿಂತು ಪ್ರವಾಹ ಉಂಟಾಗಿತ್ತು.

Most Read Articles

Kannada
English summary
Mumbai residents park cars on a flyover to ESCAPE floods - Read in kannada
Story first published: Friday, September 6, 2019, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X