Just In
- 21 min ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 29 min ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 41 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 2 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶಗಳಿಂದ ಹಿಂದಿರುಗಿದ ಭಾರತೀಯರಿಗೆ ಶಾಕ್ ಕೊಟ್ಟ ಸರ್ಕಾರ
ವಿದೇಶದಿಂದ ದೆಹಲಿಗೆ ಬಂದು ನೋಯ್ಡಾ ಅಥವಾ ಗಾಜಿಯಾಬಾದ್ಗೆ ಹೋಗಲು ಬಯಸುವವರಿಗೆ ಉತ್ತರ ಪ್ರದೇಶ ಸರ್ಕಾರವು ಭಾರೀ ಶಾಕ್ ನೀಡಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಹಿಂದಿರುಗುವ ಭಾರತೀಯರಿಗೆ ಉತ್ತರ ಪ್ರದೇಶ ಸರ್ಕಾರವು ಟ್ಯಾಕ್ಸಿ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಜೇಬಿಗೆ ಭರ್ಜರಿ ಕತ್ತರಿ ಹಾಕಿದೆ.
ನೋಯ್ಡಾ, ಗಾಜಿಯಾಬಾದ್ ಸೇರಿದಂತೆ 250 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಜನರನ್ನು ಟ್ಯಾಕ್ಸಿಯಲ್ಲಿ ಕರೆದೊಯ್ಯಲಿದೆ. ಈ ಟ್ಯಾಕ್ಸಿಗಳ ಕನಿಷ್ಠ ಶುಲ್ಕವನ್ನು ರೂ.10,000ಗಳಿಗೆ ನಿಗದಿಪಡಿಸಿದೆ. ಈ ಟ್ಯಾಕ್ಸಿಗಳನ್ನು ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮ (ಯುಪಿಎಸ್ಆರ್ಟಿಸಿ) ನಡೆಸುತ್ತಿದೆ. ಈ ಬೆಲೆ ಸೆಡಾನ್ ಕಾರುಗಳಿಗೆ ಅನ್ವಯಿಸಲಿದೆ. ಎಸ್ಯುವಿಯನ್ನು ಕಾಯ್ದಿರಿಸಿದರೆ ರೂ.12,000ಗಳನ್ನು ಪಾವತಿಸಬೇಕಾಗುತ್ತದೆ.
ಶುಲ್ಕದ ಬಗ್ಗೆ ಹೇಳುವುದಾದರೆ, ಸೆಡಾನ್ ಕಾರಿನಲ್ಲಿ ಪ್ರತಿ ಕಿ.ಮೀಗೆ ರೂ.40 ಹಾಗೂ ಎಸ್ಯುವಿಗಳಿಗೆ ಪ್ರತಿ ಕಿ.ಮೀಗೆ ರೂ.50 ನಿಗದಿಪಡಿಸಲಾಗಿದೆ. ಪ್ರತಿ ಟ್ಯಾಕ್ಸಿಯಲ್ಲಿ, ಚಾಲಕನನ್ನು ಹೊರತುಪಡಿಸಿ ಇಬ್ಬರು ಮಾತ್ರ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಈ ಮಾರ್ಗದಲ್ಲಿ ಬಸ್ಗಳ ಸೇವೆಯನ್ನು ಸಹ ನೀಡಲಾಗಿದೆ. ಸಾಮಾನ್ಯ ಬಸ್ನಲ್ಲಿ ಒಬ್ಬರಿಗೆ ರೂ.1000 ಶುಲ್ಕ ವಿಧಿಸಿದರೆ, ಎಸಿ ಬಸ್ನಲ್ಲಿ ಒಬ್ಬರಿಗೆ ರೂ.1,320 ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು 100 ಕಿಲೋಮೀಟರ್ಗಳಿಗೆ ನಿಗದಿಪಡಿಸಲಾಗಿದೆ. 100 ಕಿಲೋಮೀಟರ್ಗಿಂತ ಹೆಚ್ಚು ಪ್ರಯಾಣ ಬೆಳೆಸಿದರೆ ಶುಲ್ಕವು ಡಬಲ್ ಆಗಲಿದೆ.
ಬಸ್ನಲ್ಲಿ 26 ಪ್ರಯಾಣಿಕರಿಗೆ ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ಯುಪಿಎಸ್ಆರ್ಟಿಸಿ ಮೇ 9ರಂದು ನೋಯ್ಡಾ ಹಾಗೂ ಗಾಜಿಯಾಬಾದ್ನಲ್ಲಿರುವ ಆರ್ಟಿಒ ಕಚೇರಿಗಳಿಗೆ ಹೊಸ ದರಗಳ ಬಗ್ಗೆ ನೋಟೀಸ್ ಕಳುಹಿಸಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶಗಳಿಂದ ಹಿಂದಿರುಗುವ ಭಾರತೀಯರನ್ನು ಮೊದಲು ದೆಹಲಿಯಲ್ಲಿರುವ ವಿಶೇಷ ಕ್ವಾರಂಟೈನ್ ಸೆಂಟರ್ಗಳಲ್ಲಿ 14 ದಿನಗಳವರೆಗೆ ಇರಿಸಲಾಗುವುದು. ನಂತರ ಅವರಿಗೆ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ.
ವಂದೇ ಭಾರತ್ ಮಿಷನ್ನ ಮೊದಲ ಹಂತದಲ್ಲಿ ಇದುವರೆಗೂ 14,800 ಭಾರತೀಯರನ್ನು ವಿದೇಶಗಳಿಂದ ಕರೆತರಲಾಗಿದೆ. ಎರಡನೇ ಹಂತವು ಮೇ 16ರಿಂದ 22ರವರೆಗೆ ನಡೆಯಲಿದೆ.
ಎರಡನೇ ಹಂತದಲ್ಲಿ ಉಕ್ರೇನ್, ಕಿರ್ಗಿಸ್ತಾನ್, ಅರ್ಮೇನಿಯಾ, ಬೆಲಾರಸ್, ಜಾರ್ಜಿಯಾ, ಕಜಕಿಸ್ತಾನ್, ನೈಜೀರಿಯಾ ಸೇರಿದಂತೆ 31 ದೇಶಗಳಲ್ಲಿರುವ 30,000 ಭಾರತೀಯ ಪ್ರಜೆಗಳನ್ನು 149 ವಿಮಾನಗಳಲ್ಲಿ ವಾಪಸ್ ಕರೆತರಲಾಗುವುದು.
ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಭಾರತಕ್ಕೆ ಮರಳಿ ಕರೆತರಲು ಏರ್ ಇಂಡಿಯಾ ನಡೆಸುತ್ತಿರುವ ವಂದೇ ಭಾರತ್ ಮಿಷನ್ ಅಭಿಯಾನದಡಿಯಲ್ಲಿ ಮೊದಲ ಐದು ದಿನಗಳಲ್ಲಿ 6,037 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಭಾರತೀಯ ವಿಮಾನಯಾನ ಇಲಾಖೆ ಹೇಳಿದೆ.