Just In
- 3 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 4 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 5 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 5 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Movies Nannamma Superstar: ಬಿಗ್ ಬಾಸ್ ಸಂಗೀತಾ ಹೊಟ್ಟೆಗೆ ಏನ್ ತಿಂತಾರೆ? ಮೃದಿನಿಗೆ ಕಾಡಿದ ದೊಡ್ಡ ಪ್ರಶ್ನೆ
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಹೆಚ್ಎಐ) ದೆಹಲಿಯ ದ್ವಾರಕಾ ಎಕ್ಸ್ಪ್ರೆಸ್ ವೇಯನ್ನು ವಿಸ್ತರಿಸುತ್ತಿದೆ. ಈ ಎಕ್ಸ್ಪ್ರೆಸ್ವೇ ದೆಹಲಿ, ಹರಿಯಾಣ, ಚಂಡೀಗಢಕ್ಕೆ ಸಂಪರ್ಕ ನೀಡುತ್ತದೆ. ಈ ಎಕ್ಸ್ಪ್ರೆಸ್ ವೇಯ ವಿಸ್ತರಣೆ ಪೂರ್ತಿಯಾದ ನಂತರ ದೆಹಲಿಯಿಂದ ಚಂಡೀಗಢವನ್ನು 2 ಗಂಟೆಗಳಲ್ಲಿ ತಲುಪಬಹುದು.
ದೆಹಲಿ ಹಾಗೂ ಚಂಡೀಗಢ ನಡುವಿನ ಅಂತರ 260 ಕಿ.ಮೀಗಳಾಗಿದೆ. ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿ ದೆಹಲಿ ಹಾಗೂ ಚಂಡೀಗಢದ ದೂರವನ್ನು 20 ಕಿ.ಮೀಗಳಷ್ಟು ಇಳಿಸಲಿದೆ. ಈ ಎಕ್ಸ್ಪ್ರೆಸ್ ವೇಯನ್ನು 5 ಲೇನ್ಗಳಿಗೆ ವಿಸ್ತರಿಸಲಾಗುತ್ತಿದೆ. ಎಕ್ಸ್ಪ್ರೆಸ್ ವೇ ವಿಸ್ತರಣೆಯಾದ ನಂತರ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಬಹುದು.
ವಾಹನಗಳ ಗರಿಷ್ಠ ವೇಗದ ಮಿತಿ ಪ್ರತಿ ಗಂಟೆಗೆ 120 ಕಿ.ಮೀಗಳಾಗುವ ಕಾರಣಕ್ಕೆ ಪ್ರಯಾಣಿಕರು ಈ ಎರಡೂ ನಗರಗಳ ನಡುವೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದು. ಎನ್ಹೆಚ್ಎಐ ಅಧಿಕಾರಿಯೊಬ್ಬರ ಪ್ರಕಾರ, ಪ್ರಯಾಣಿಕರು ಅರ್ಬನ್ ಎಕ್ಸ್ ಟೆಂಷನ್ ರೋಡ್ ಮೂಲಕ ಬಹದ್ದೂರ್ಗಢದ ಕೆಎಂಪಿ ಎಕ್ಸ್ಪ್ರೆಸ್ ವೇ ತಲುಪಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಕೆಎಂಪಿ ಎಕ್ಸ್ಪ್ರೆಸ್ವೇನಲ್ಲಿ 10 ಕಿ.ಮೀ ಪ್ರಯಾಣಿಸಿದ ನಂತರ ದೆಹಲಿ-ಕತ್ರ ಎಕ್ಸ್ಪ್ರೆಸ್ ವೇ ಕಡೆಗೆ ತಿರುಗಬಹುದು. ದೆಹಲಿ-ಕತ್ರಾ ಎಕ್ಸ್ಪ್ರೆಸ್ವೇಯಲ್ಲಿ 80 ಕಿ.ಮೀ ಸಂಚರಿಸಿದ ನಂತರ ಹರಿಯಾಣ ಎಕ್ಸ್ಪ್ರೆಸ್ವೇನಲ್ಲಿರುವ ಅಂಬಾಲಾ ತಿರುವು ಸಿಗಲಿದೆ. ಈ ತಿರುವಿನ ಮೂಲಕ ಪ್ರಯಾಣಿಕರು ಚಂಡೀಗಢವನ್ನು ತಲುಪಬಹುದು.
ಎಕ್ಸ್ಪ್ರೆಸ್ವೇಯಲ್ಲಿರುವ ಎಲ್ಲಾ ಇಂಟರ್ ಚೇಂಜ್ ಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯುಂಟಾಗುವುದಿಲ್ಲ. ಎನ್ಹೆಚ್ಎಐ ದೆಹಲಿ ಹಾಗೂ ಮುಂಬೈ ನಗರಗಳ ನಡುವೆ ಡಿಎನ್ಡಿ ಎಕ್ಸ್ಪ್ರೆಸ್ ವೇ ನಿರ್ಮಿಸುತ್ತಿದೆ. ಈ ಎಕ್ಸ್ಪ್ರೆಸ್ ವೇ ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ
ಈ ಎಕ್ಸ್ಪ್ರೆಸ್ವೇನಲ್ಲಿ 60 ಕಿ.ಮೀಗಳವರೆಗೆ ಯಾವುದೇ ಸಿಗ್ನಲ್ ಟ್ರ್ಯಾಕ್ ನಿರ್ಮಿಸುತ್ತಿಲ್ಲ. ಇದರಿಂದಾಗಿ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಸಾಧ್ಯವಾಗಲಿದೆ. ಎನ್ಹೆಚ್ಎಐ ಈ ಎಲ್ಲ ಯೋಜನೆಗಳನ್ನು 2023ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ.
ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರು ಈಗಾಗಲೇ ಮುಂದಿನ 2 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ರಸ್ತೆ, ಹೆದ್ದಾರಿ ಹಾಗೂ ಎಕ್ಸ್ಪ್ರೆಸ್ ವೇಗಳ ನಿರ್ಮಾಣ ಕಾರ್ಯಕ್ಕಾಗಿ ರೂ.15 ಲಕ್ಷ ಕೋಟಿ ವಿನಿಯೋಗಿಸುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಕೋವಿಡ್ -19 ಸಂಕಷ್ಟದ ಸಮಯದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ.