Just In
- 52 min ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 2 hrs ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 3 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ರೆಂಟಲ್ ಸೇವೆಯನ್ನಾರಂಭಿಸಿದ ಉಬರ್ ಇಂಡಿಯಾ
ಉಬರ್ ಕಂಪನಿಯು ಭಾರತದಲ್ಲಿ ಆಟೋ ರೆಂಟಲ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರು, ದೆಹಲಿ ಎನ್ಸಿಆರ್, ಹೈದರಾಬಾದ್, ಚೆನ್ನೈ, ಪುಣೆಯಲ್ಲಿ ಈ ಆಟೋ ರೆಂಟಲ್ ಸೇವೆಯನ್ನು ಆರಂಭಿಸಲಾಗಿದೆ. ಆಟೋ ರೆಂಟಲ್ ಸೇವೆಯಲ್ಲಿ ಗ್ರಾಹಕರು ಉಬರ್ ಕಾರನ್ನು ಚಾಲಕನೊಂದಿಗೆ ಕೆಲವು ಗಂಟೆಗಳ ಅವಧಿಗೆ ಕಾಯ್ದಿರಿಸಬಹುದು.
ಉಬರ್ ಈ ಸೇವೆಗೆ ಪ್ರತಿ ಗಂಟೆಗೆ ರೂ.169 ಅಥವಾ 10 ಕಿ.ಮೀಗಳಿಗೆ ರೂ.169 ನಿಗದಿಪಡಿಸಿದೆ. ಆಟೋ ರೆಂಟಲ್ ಅಡಿಯಲ್ಲಿ ಗ್ರಾಹಕರು ಕೆಲ ಗಂಟೆಗಳವರೆಗೆ ಉಬರ್ ಕ್ಯಾಬ್ಗಳನ್ನು ಕಾಯ್ದಿರಿಸಬಹುದು. ಗ್ರಾಹಕರು ಗರಿಷ್ಠ 8 ಗಂಟೆಗಳ ಕಾಲ ಕ್ಯಾಬ್ಗಳನ್ನು ಕಾಯ್ದಿರಿಸಬಹುದು. ಹೊರ ಊರುಗಳಿಗೆ ತೆರಳಿ ಅಲ್ಲಿಯೇ ತಂಗುವ ಕ್ಯಾಬ್ ಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ.
ಇದರಲ್ಲಿ ಇಂಟರ್ ಸಿಟಿ ಸೇವೆಗಳನ್ನು ಮಾತ್ರ ನೀಡಲಾಗುವುದು. ಈ ಸೇವೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದೆ ಎಂದು ಉಬರ್ ಇಂಡಿಯಾ ಮಾರ್ಕೆಟಿಂಗ್ ಮುಖ್ಯಸ್ಥರಾದ ನಿತೀಶ್ ಭೂಷಣ್ ತಿಳಿಸಿದ್ದಾರೆ. ಈ ಸೇವೆಯು ಗ್ರಾಹಕರಿಗೆ ಫ್ಲೆಕ್ಸಿಬಲ್ ರೈಡ್ ಗಳ ಅನುಭವವನ್ನು ನೀಡುತ್ತದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಸ್ನೇಹಿತರೊಂದಿಗೆ ಶಾಪಿಂಗ್, ಪಾರ್ಟಿ ಅಥವಾ ಪಿಕ್ ನಿಕ್ ಗಳಿಗೆ ಹೋಗುವವರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ. ಈ ಸೇವೆಯಲ್ಲಿ ಕ್ಯಾಬ್ಗಳನ್ನು ಅನೇಕ ಸ್ಥಳಗಳಲ್ಲಿ ನಿಲ್ಲಿಸಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕಗಳು ಅನ್ವಯಿಸುವುದಿಲ್ಲ.
ಕರೋನಾ ವೈರಸ್ ನಿಂದ ಉಂಟಾದ ನಷ್ಟದ ಕಾರಣಕ್ಕೆ ಉಬರ್ ಕಂಪನಿಯು 600 ತಾತ್ಕಾಲಿಕ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದೆ. ವಜಾಗೊಂಡವರಲ್ಲಿ ಚಾಲಕರು, ಹಾಗೂ ಇನ್ನಿತರ ಸಿಬ್ಬಂದಿಗಳು ಸೇರಿದ್ದಾರೆ ಎಂದು ಕಂಪನಿ ಹೇಳಿದೆ. ಭಾರತ ಸೇರಿದಂತೆ ಬೇರೆ ದೇಶಗಳಲ್ಲಿಯೂ ನೌಕರರನ್ನು ವಜಾಗೊಳಿಸಲಾಗಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್
ಮುಂದಿನ ಆರು ತಿಂಗಳವರೆಗೆ ನೌಕರರಿಗೆ ವೈದ್ಯಕೀಯ ವಿಮಾ ರಕ್ಷಣೆಯೊಂದಿಗೆ 70 ದಿನಗಳ ಸಂಬಳ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಉಬರ್ ಕಂಪನಿಯು ವಿಶ್ವಾದ್ಯಂತ 6,700 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಕರೋನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಕ್ಯಾಬ್ ಸೇವೆಗೆ ತೊಂದರೆಯುಂಟಾಗಿದೆ. ದೇಶದ ಹಲವು ನಗರಗಳಲ್ಲಿ ಲಾಕ್ಡೌನ್ನಿಂದ ವಿನಾಯಿತಿ ದೊರೆತಿದ್ದರೂ ಪ್ರಯಾಣಿಕರು ಕ್ಯಾಬ್ ಗಳಲ್ಲಿ ಸಂಚರಿಸುತ್ತಿಲ್ಲ. ವೈರಸ್ ಸೋಂಕಿನ ಭೀತಿಯಿಂದ ಜನರು ಕ್ಯಾಬ್ ಹಾಗೂ ಬಸ್ಗಳಲ್ಲಿ ಸಂಚರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.