Just In
- 6 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 9 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 9 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 10 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್
ಖ್ಯಾತ ಕ್ಯಾಬ್ ಕಂಪನಿಯಾದ ಉಬರ್, ದೆಹಲಿ ಸರ್ಕಾರದ ಜೊತೆಗೂಡಿ ದೆಹಲಿಯಲ್ಲಿ 10,000 ಆಟೋ ರಿಕ್ಷಾಗಳಿಗೆ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾಗಿದೆ. ಕರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಈ ಸೆಫ್ಟಿ ಸ್ಕ್ರೀನ್'ಗಳು ಆಟೋ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.
ಎಲ್ಲಾ ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಉಚಿತವಾಗಿ ಅಳವಡಿಸಲಾಗುವುದು. ಉಬರ್ ಕಂಪನಿಯು ದೆಹಲಿ ಸರ್ಕಾರದ ಸಹಯೋಗದೊಂದಿಗೆ ಕರೋನಾ ಲಸಿಕೆ ಪಡೆಯುವ ಬಗ್ಗೆ ಆಟೋ ಚಾಲಕರಲ್ಲಿ ಅರಿವು ಮೂಡಿಸುತ್ತಿದೆ. ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಇನ್ನೂ ಅನೇಕ ತಪ್ಪು ಕಲ್ಪನೆಗಳಿವೆ ಎಂದು ಕಂಪನಿ ಹೇಳಿದೆ.
ಉಬರ್ ಕಂಪನಿಯು ಈ ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸಕ್ಕೆ ಮುಂದಾಗಿದೆ. ಆಟೋ ಚಾಲಕರು ಉಚಿತ ಲಸಿಕೆಗಳನ್ನು ಪಡೆಯಲು ಉಬರ್ ಕಂಪನಿಯು ನೆರವಾಗುತ್ತಿದೆ. ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಅಳವಡಿಸುವ ಬಗ್ಗೆ ದೆಹಲಿ ಸರ್ಕಾರದ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಜನರು ಮನೆಗಳಿಂದ ಹೊರ ಬರುತ್ತಿದ್ದಾರೆ. ಆಟೋ ರಿಕ್ಷಾಗಳು ನಗರದ ಜೀವನಾಡಿಯಾಗಿವೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ದೆಹಲಿಯ ಎಲ್ಲಾ ಆಟೋ ಚಾಲಕರಿಗೆ ನೆರವು ನೀಡಲಾಗುತ್ತಿದೆ. ಆಟೋದಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸುವುದರಿಂದ, ಚಾಲಕ ಹಾಗೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದು. ಇದರಿಂದ ಆಟೋದಲ್ಲಿ ಸುರಕ್ಷಿತ ಪ್ರಯಾಣ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಅವರು ಉಬರ್ ಕಂಪನಿಯ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕರೋನಾ ಲಸಿಕೆ ಪಡೆಯುವ ಮೂಲಕ ದೆಹಲಿಯಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೈ ಜೋಡಿಸುವಂತೆ ನಾವು ಆಟೋ ಚಾಲಕರಿಗೆ ಮನವಿ ಮಾಡುತ್ತೇವೆ ಎಂದು ಗೆಹ್ಲೋಟ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಬರ್ ಇಂಡಿಯಾ ಹಾಗೂ ದಕ್ಷಿಣ ಏಷ್ಯಾದ ಮುಖ್ಯಸ್ಥ ರಾಜೀವ್ ಅಗರ್ವಾಲ್, ಚಾಲಕರು ಹಾಗೂ ಪ್ರಯಾಣಿಕರ ಸುರಕ್ಷತೆ ನಮಗೆ ಮುಖ್ಯವಾಗಿದೆ. ದೆಹಲಿಯ ಆಟೋ ರಿಕ್ಷಾಗಳನ್ನು ಸುರಕ್ಷಿತವಾಗಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.
ಈ ಅಭಿಯಾನದ ಮೂಲಕ ದೆಹಲಿ ನಗರವನ್ನು ಸುರಕ್ಷಿತವಾಗಿಸಲು ಪ್ರಯತ್ನಿಸುತ್ತಿದ್ದೇವೆ. ಆಟೋ ರಿಕ್ಷಾಗಳನ್ನು ಸುರಕ್ಷಿತಗೊಳಿಸುವುದರಿಂದ ದೆಹಲಿಯಲ್ಲಿ ಮತ್ತೊಮ್ಮೆ ಸಾರಿಗೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿದರು.
ಕಳೆದ ವರ್ಷ ಕರೋನಾ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಉಬರ್ ಕಂಪನಿಯು ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಅಳವಡಿಸಿತ್ತು. ಸೆಫ್ಟಿ ಸ್ಕ್ರೀನ್'ಗಳನ್ನು ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ಹಾಳೆಯಿಂದ ತಯಾರಿಸಲಾಗಿದೆ.
ಈ ಸೆಫ್ಟಿ ಸ್ಕ್ರೀನ್'ಗಳನ್ನು ಆಟೋ ರಿಕ್ಷಾಗಳಲ್ಲಿ ಚಾಲಕನ ಹಿಂದೆ ಅಳವಡಿಸಲಾಗುತ್ತದೆ. ಇದರಿಂದ ಪ್ರಯಾಣಿಕರ ಹಾಗೂ ಚಾಲಕನ ನಡುವೆ ನೇರ ಸಂಪರ್ಕವಿಲ್ಲದಂತಾಗುತ್ತದೆ. ಚಾಲಕ ಹಾಗೂ ಪ್ರಯಾಣಿಕರ ನಡುವೆ ನೇರ ಸಂಪರ್ಕ ತಪ್ಪುವುದರಿಂದ ಆಟೋ ರಿಕ್ಷಾಗಳಲ್ಲಿ ಕರೋನಾ ಸೋಂಕು ಹರಡುವ ಅಪಾಯ ಕಡಿಮೆಯಾಗುತ್ತದೆ.
ಉಬರ್ ತನ್ನ ಪ್ಲಾಟ್ಫಾರಂನಲ್ಲಿರುವ 1.60 ಲಕ್ಷ ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಅಳವಡಿಸಿದೆ. ಉಬರ್ ಕಂಪನಿಯು ತನ್ನ ಚಾಲಕ ಪಾಲುದಾರರಿಗೆ ರೂ.18.5 ಕೋಟಿಗಳ ಪ್ರೋತ್ಸಾಹಕ ಪ್ಯಾಕೇಜ್ ಘೋಷಿಸಿದೆ.
ಉಬರ್ನ 37,000 ಚಾಲಕರು ಈಗಾಗಲೇ ಕರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 1.50 ಲಕ್ಷ ಚಾಲಕರು ಕರೋನಾ ಲಸಿಕೆಯ ಎರಡೂ ಡೋಸ್'ಗಳನ್ನು ಪಡೆಯಲಿದ್ದಾರೆ ಎಂದು ಕಂಪನಿ ಅಂದಾಜು ಮಾಡಿದೆ.