ಕಾರಿನ ಬೊನೆಟ್ನಲ್ಲಿ ಅಡಗಿದೆ 7 ಅಡಿ ಹೆಬ್ಬಾವು: ಮಳೆಗಾಲದಲ್ಲಿ ಮುಂಬೈ ಚಾಲಕರು ಈ ತಪ್ಪು ಮಾಡಬೇಡಿ!
ಮುಂಬೈನ ದಹಿಸರ್ನಲ್ಲಿ ಕಾರಿನ ಬೊನೆಟ್ ಒಳಗೆ ಏಳು ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮಳೆಗಾಲದ ತಂಪಾದ ವಾತಾವರಣದಿಂದ ಬಚಾವಾಗಲು ಹಾವುಗಳು ಮತ್ತು ಇಲಿಗಳು ಕಾರಿನ ಬೆಚ್ಚಗಿನ ಎಂಜಿನ್ ಭಾಗವನ್ನು ಆಶ್ರಯಿಸುತ್ತವೆ. ಅದರಲ್ಲೂ ಚರಂಡಿ ಪಕ್ಕದಲ್ಲಿ ಪಾರ್ಕ್ ಮಾಡಿದ ಕಾರುಗಳು ಇವುಗಳಿಗೆ ಅಡಗುತಾಣಗಳಾಗುತ್ತವೆ. ಇಂತಹ ಸಮಯದಲ್ಲಿ ಗಾಬರಿಯಾದರೆ ಮನುಷ್ಯರಿಗೂ, ಪ್ರಾಣಿಗಳಿಗೂ ಅಪಾಯ ಕಟಾಖಂಡಿತ. ಹಾಗಿದ್ದರೆ ಮುಂಬೈ ವಾಹನ ಸವಾರರು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಹಾಗೂ ಕೈಗೊಳ್ಳಬೇಕಾದ ಎಚ್ಚರಿಕಾ ಕ್ರಮಗಳು ಇಲ್ಲಿವೆ.
ಕಾರಿನ ಬೊನೆಟ್ ಒಳಗೆ ಹಾವುಗಳು ಏಕೆ ಸೇರಿಕೊಳ್ಳುತ್ತವೆ ಗೊತ್ತಾ? ಮಳೆಯ ರಾತ್ರಿಗಳಲ್ಲಿ ಎಂಜಿನ್ನಿಂದ ಹೊರಸೂಸುವ ಬಿಸಿಗೆ ಹಾವುಗಳು ಆಕರ್ಷಿತವಾಗುತ್ತವೆ. ಇನ್ನು ಕಾರಿನ ಪ್ಲಾಸ್ಟಿಕ್ ಕವರ್ಗಳ ಒಳಗೆ ಅಡಗಿಕೊಳ್ಳುವ ಇಲಿಗಳನ್ನು ಬೇಟೆಯಾಡಲು ಹಾವುಗಳು ಅಲ್ಲಿಗೆ ಬರುತ್ತವೆ. ಕಾರಿನ ಸುತ್ತ ಬೆಳೆದಿರುವ ಉದ್ದನೆಯ ಹುಲ್ಲು, ಕಸದ ರಾಶಿ ಮತ್ತು ಕಟ್ಟಡದ ತ್ಯಾಜ್ಯಗಳು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ರಾಜಕಾಲುವೆ ಅಥವಾ ಚರಂಡಿಗಳ ಪಕ್ಕದಲ್ಲಿ ಕಾರು ನಿಲ್ಲಿಸುವುದರಿಂದ ಹಾವುಗಳು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ, ಸದಾ ಕಸವಿಲ್ಲದ, ಬೆಳಕಿರುವ ಮತ್ತು ಗಿಡಗಂಟಿಗಳಿಲ್ಲದ ಜಾಗದಲ್ಲೇ ಕಾರು ಪಾರ್ಕ್ ಮಾಡಿ. ಈ ಒಂದು ಜಾಗರೂಕತೆ ನಿಮ್ಮನ್ನು ದೊಡ್ಡ ಅಪಾಯದಿಂದ ಪಾರು ಮಾಡಬಹುದು.

ಮಳೆಗಾಲದಲ್ಲಿ ಮುಂಬೈ ಚಾಲಕರಿಗೆ ಅಗತ್ಯ ಮುನ್ನೆಚ್ಚರಿಕೆಗಳು
ಕಾರಿನ ಲಾಕ್ ತೆಗೆಯುವ ಮೊದಲು, ಸ್ವಲ್ಪ ದೂರ ನಿಂತು ಟಾರ್ಚ್ ಹಿಡಿದು ಕಾರಿನ ತಳಭಾಗ ಮತ್ತು ವೀಲ್ ಆರ್ಚ್ಗಳನ್ನು ಚೆನ್ನಾಗಿ ಪರಿಶೀಲಿಸಿ. ಅಡಗಿರುವ ಪ್ರಾಣಿಗಳನ್ನು ಹೆದರಿಸಿ ಹೊರಗೆ ತರಲು ಒಮ್ಮೆ ಚಪ್ಪಾಳೆ ತಟ್ಟಿ, ಸ್ವಲ್ಪ ಹೊತ್ತು ಕಾಯಿರಿ. ಕಾರಿನ ಬಾಗಿಲನ್ನು ನಿಧಾನವಾಗಿ ತೆಗೆದು, ಒಳಗಡೆಯಿಂದ ಏನಾದರೂ ಸದ್ದು ಬರುತ್ತಿದೆಯೇ ಎಂದು ಆಲಿಸಿ. ಕಾರಿನ ಸಣ್ಣಪುಟ್ಟ ಸಂದಿಗಳಲ್ಲಿ ಅಥವಾ ಬಂಪರ್ ಕೆಳಗೆ ಎಂದಿಗೂ ಕೈ ಹಾಕಬೇಡಿ. ಅನುಮಾನಾಸ್ಪದವಾಗಿ ಏನಾದರೂ ಕಂಡರೆ ಎಂಜಿನ್ ಸ್ಟಾರ್ಟ್ ಮಾಡಬೇಡಿ. ರಾತ್ರಿ ವೇಳೆ ಬೆಳಕಿರುವ ಜಾಗದಲ್ಲೇ ಕಾರಿನ ಮುಂಭಾಗ ಹೊರಗಿರುವಂತೆ ಪಾರ್ಕ್ ಮಾಡಿ.
ಎಂಜಿನ್ನಲ್ಲಿ ಹಾವು ಕಂಡರೆ ಏನು ಮಾಡಬೇಕು? ಏನು ಮಾಡಬಾರದು?
ಕಾರಿನಲ್ಲಿ ಹಾವು ಕಾಣಿಸಿಕೊಂಡರೆ ತಕ್ಷಣ ಹಿಂದಕ್ಕೆ ಬನ್ನಿ. ಮಕ್ಕಳನ್ನು ದೂರವಿರಿಸಿ ಮತ್ತು ಸಾಕಿದ ಪ್ರಾಣಿಗಳನ್ನು ಮನೆಯೊಳಗೆ ಸುರಕ್ಷಿತವಾಗಿರಿಸಿ. ಯಾವುದೇ ಕಾರಣಕ್ಕೂ ಕಾರು ಸ್ಟಾರ್ಟ್ ಮಾಡುವುದು, ಮುಂದೆ ಹಿಮದೆಗೆಯುವುದು ಅಥವಾ ಹಾರ್ನ್ ಮಾಡುವುದನ್ನು ಮಾಡಬೇಡಿ. ಫಿನೈಲ್, ಡೀಸಲ್ ಅಥವಾ ನೀರು ಸುರಿಯುವುದು ಮತ್ತು ಕೋಲಿನಿಂದ ಕೆಣಕುವ ಸಾಹಸಕ್ಕೆ ಕೈಹಾಕಬೇಡಿ. ಕಾರನ್ನು ಲಾಕ್ ಮಾಡಿ, ದೂರದಿಂದಲೇ ನಿಗಾ ವಹಿಸಿ. ತಕ್ಷಣವೇ ಅಧಿಕೃತ ರಕ್ಷಣಾಪಡೆಗೆ ಕರೆ ಮಾಡಿ. "ನೋಡು, ಹತ್ತಿರ ಹೋಗಬೇಡಿ, ಹಿಡಿಯಬೇಡಿ, ಫೋನ್ ಮಾಡಿ" ಎಂಬ ಸರಳ ಸೂತ್ರವನ್ನು ನೆನಪಿಟ್ಟುಕೊಳ್ಳಿ.
ಮುಂಬೈ ಮತ್ತು ಠಾಣೆಯಲ್ಲಿ ಯಾರನ್ನು ಸಂಪರ್ಕಿಸಬೇಕು?
ಮುಂಬೈ ಮತ್ತು ಠಾಣೆ ನಿವಾಸಿಗಳು ತಕ್ಷಣ ಸ್ಥಳೀಯ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಕೊಠಡಿ ಅಥವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು. ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದಿದ್ದರೆ, ಅಖಿಲ ಭಾರತ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ಹಾವು ರಕ್ಷಣೆಗೆ ಮನವಿ ಮಾಡಿ. ಪೊಲೀಸರು ತರಬೇತಿ ಪಡೆದ, ಪರವಾನಗಿ ಹೊಂದಿರುವ ಸ್ವಯಂಸೇವಕರನ್ನು ಸಂಪರ್ಕಿಸುತ್ತಾರೆ. ಹೌಸಿಂಗ್ ಸೊಸೈಟಿಗಳು ತಮ್ಮ ನೋಟಿಸ್ ಬೋರ್ಡ್ನಲ್ಲಿ ಪರಿಶೀಲಿಸಿದ ರಕ್ಷಣಾಪಡೆಯ ಸಂಖ್ಯೆಗಳನ್ನು ಹಾಕುವುದು ಒಳಿತು. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಪ್ರಕಾರ ಯಾವುದೇ ಅಧಿಕಾರವಿಲ್ಲದೆ ಸಂರಕ್ಷಿತ ವನ್ಯಜೀವಿಗಳನ್ನು ಹಿಡಿಯುವುದು ಅಥವಾ ಮುಟ್ಟುವುದು ಶಿಕ್ಷಾರ್ಹ ಅಪರಾಧವಾಗಿದೆ.
ಪಾರ್ಕಿಂಗ್ ಜಾಗದಲ್ಲಿ ಹಾವು ನಿಯಂತ್ರಣ: ಕಲ್ಪನೆಗಳು ಮತ್ತು ನೈಜ ಪರಿಹಾರಗಳು
ಮೌತ್ ಬಾಲ್ಸ್, ಬ್ಲೀಚಿಂಗ್ ಪೌಡರ್, ಖಾರದ ಪುಡಿ ಅಥವಾ ಹೊಗೆಯಿಂದ ಹಾವುಗಳು ಓಡಿಹೋಗುತ್ತವೆ ಎಂಬುದು ಕೇವಲ ಕಲ್ಪನೆ. ಇವುಗಳಿಂದ ಮನುಷ್ಯರಿಗೆ, ಸಾಕುಪ್ರಾಣಿಗಳಿಗೆ ಮತ್ತು ವಾಹನಗಳಿಗೆ ಹಾನಿಯಾಗಬಹುದು. ಬದಲಿಗೆ ಪಾರ್ಕಿಂಗ್ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕಸದ ರಾಶಿ ತೆರವುಗೊಳಿಸಿ, ಗಿಡಗಳನ್ನು ಕತ್ತರಿಸಿ ಮತ್ತು ಚರಂಡಿ ಸಂದಿಗಳನ್ನು ಮೆಶ್ನಿಂದ ಮುಚ್ಚಿ. ಇಲಿಗಳನ್ನು ಆಕರ್ಷಿಸುವ ಆಹಾರದ ತ್ಯಾಜ್ಯವನ್ನು ತೆರವುಗೊಳಿಸಿ. ಗ್ಯಾರೇಜ್ನಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿ ಬಾಗಿಲುಗಳ ಸಂದಿಗಳನ್ನು ಸರಿಯಾಗಿ ಮುಚ್ಚಿದರೆ ಹಾವುಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.


Click it and Unblock the Notifications
