ಕಾರು ತೊಳೆಯಲು ಕಾವೇರಿ ನೀರು ಬಳಸಿದವರಿಗೆ 1.1 ಲಕ್ಷ ರೂ. ದಂಡ ವಿಧಿಸಿದ BWSSB

ತೀವ್ರ ನೀರಿನ ಅಭಾವದ ಮಧ್ಯೆ, BWSSB ನೀರು ವ್ಯರ್ಥವಾಗುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಕಳೆದ ಒಂದು ವಾರದಲ್ಲಿ, ತಮ್ಮ ಕಾರುಗಳನ್ನು ತೊಳೆಯಲು ಅಮೂಲ್ಯವಾದ ಕಾವೇರಿ ನೀರನ್ನು ಬಳಸಿಕೊಂಡು ವ್ಯರ್ಥ ಮಾಡಿದ ಆರೋಪದ ಮೇಲೆ 22 ಮಂದಿಯ ವಿರುದ್ಧ ಒಟ್ಟು 1.1 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.

ಬೇಸಿಗೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಈ ವರ್ಷ ತುಸು ಬೇಗನೇ ಇದರ ಪರಿಣಾಮ ಕಾಣಿಸತೊಡಗಿದೆ. ಸದ್ಯ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಅನವಶ್ಯಕವಾಗಿ ನೀರನ್ನು ಬಳಸಿದರೆ ದಂಡ ವಿಧಿಸುವುದಾಗಿ ಈ ಹಿಂದೆಯೇ ಎಚ್ಚರಿಸಿದೆ.

bwssb-fined-rs-1-1-lakh-for-22-residents-who-wasted-cauvery-water

BWSSB ಆದೇಶವನ್ನು ಉಲ್ಲಂಘಿಸಿದರೆ 5,000 ರೂ. ದಂಡವನ್ನು ವಿಧಿಸಲಾಗುತ್ತದೆ, ಪುನರಾವರ್ತಿತ ಉಲ್ಲಂಘನೆಗೆ 5,000 ರೂ. ಜೊತೆಗೆ ಪ್ರತಿ ದಿನಕ್ಕೆ 500 ರೂ. ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಸಾರ್ವಜನಿಕರು BWSSB ಆದೇಶಕ್ಕೆ ಸಹಕರಿಸುವಂತೆ ಕೋರಿ, ಯಾವುದೇ ಉಲ್ಲಂಘನೆಗಳನ್ನು ಕಂಡರೆ ಕಾಲ್‌ ಸೆಂಟರ್‌ಗೆ (1916)ಗೆ ಕರೆ ಮಾಡುವಂತೆ ನಾಗರಿಕರಿಗೆ ಮನವಿ ಮಾಡಿತ್ತು.

ಆದರೂ ಅಧಿಕಾರಿಗಳ ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ ನಗರದಾದ್ಯಂತ ನೀರಿನ ವ್ಯಾಪಕ ದುರುಪಯೋಗ ಮಾಡಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆಯ ಸೆಕ್ಷನ್ 109 ರ ಅಡಿಯಲ್ಲಿ, ಕಾರು ತೊಳೆಯುವುದು ಮತ್ತು ನೀರು ಹಾಕುವುದು ಮುಂತಾದ ಅಗತ್ಯವಲ್ಲದ ಉದ್ದೇಶಗಳಿಗಾಗಿ ಕಾವೇರಿ ನೀರನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳಿಗೆ 3,000 ರೂ.ಗಳಿಂದ 15,000 ರೂ.ಗಳವರೆಗೆ ದಂಡ ವಿಧಿಸಲಾಗಿದೆ.

bwssb-fined-rs-1-1-lakh-for-22-residents-who-wasted-cauvery-water

ಇದಲ್ಲದೆ, ವಾಹನ ತೊಳೆಯಲು ಬೋರ್ವೆಲ್ ಅಥವಾ ನಲ್ಲಿ ನೀರನ್ನು ಬಳಸುವವರಿಗೂ ದಂಡ ವಿಧಿಸಲಾಗಿದೆ. ನಗರವು ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದರೂ, ಕೆಲವು ನಿವಾಸಿಗಳು ಸಂರಕ್ಷಣಾ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ ಎಂಬ ಅಂಶವು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಪದೇ ಪದೇ ಮನವಿ ಮತ್ತು ಎಚ್ಚರಿಕೆಗಳ ಹೊರತಾಗಿಯೂ, ಕಾವೇರಿ ನೀರನ್ನು ಕುಡಿಯುವುದನ್ನು ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಬಳಸುವ ಅಭ್ಯಾಸವು ಮುಂದುವರೆದಿದೆ.

ಕಳೆದ ಎರಡು-ಮೂರು ವಾರಗಳಿಂದ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವು ನಗರದ ನೀರಿನ ಬಿಕ್ಕಟ್ಟನ್ನು ಎದುರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದೆ. ಮಾಲ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಕೂಡ ನೀರನ್ನು ಯಾವುದೇ ಕಾರಣಕ್ಕೂ ಸ್ವಚ್ಚತಾ ಕಾರ್ಯಗಳಿಗೆ ಬಳಸಬಾರದು, ಕೇವಲ ಕುಡಿಯಲು ಮಾತ್ರ ಬಳಸುವಂತೆ ಎಚ್ಚರಿಕೆ ನೀಡಲಾಗಿದೆ.

BWSSB ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರದ 1.40 ಕೋಟಿ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸುವುದು ಬಹಳ ಮುಖ್ಯ. ಬೇಸಿಗೆಯ ಶಾಖವು ತೀವ್ರಗೊಳ್ಳುತ್ತಿರುವುದರಿಂದ ಅಂತರ್ಜಲ ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ನಾಗರಿಕರಿಗೆ ಅದರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕುಡಿಯುವ ನೀರು ವ್ಯರ್ಥವಾಗುವುದನ್ನು ನಿಲ್ಲಿಸುವುದು ಅವಶ್ಯಕ" ಎಂದು BWSSB ತಿಳಿಸಿದೆ.

ನೀರಿನ ದುರುಪಯೋಗವ ಕಂಡರೆ, BWSSB ಟೋಲ್ ಫ್ರೀ ಸಂಖ್ಯೆಗೆ (1916) ಕರೆ ಮಾಡಿ ನಾಗರಿಕರು ದೂರುಗಳನ್ನು ಸಲ್ಲಿಸಬಹುದು. ಅತಿ ಹೆಚ್ಚು ಉಲ್ಲಂಘನೆಗಳು ದಾಖಲಾಗಿರುವ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಈ ಕ್ರಮವು ವಿಶೇಷವಾಗಿ ಕಠಿಣವಾಗಿದೆ. ಈ ವಲಯವೊಂದರಲ್ಲೇ 80,000 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದ್ದು, ವ್ಯರ್ಥ ನೀರಿನ ಅಭ್ಯಾಸಗಳನ್ನು ತಡೆಯಲು ಕಠಿಣ ಕ್ರಮಗಳ ಅಗತ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 26, 2024, 12:54 [IST]
English summary
Bwssb fined rs 1 1 lakh for 22 residents who wasted cauvery water
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+