Just In
- 1 hr ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 1 hr ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 1 hr ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 3 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದೆ ಈ ಸೇಫ್ಟಿ ಶೀಲ್ಡ್
ಕರೋನಾ ವೈರಸ್ ಇಡೀ ಜಗತ್ತನ್ನು ವ್ಯಾಪಿಸಿದೆ. ಕರೋನಾ ವೈರಸ್ ಕೆಲವೇ ತಿಂಗಳುಗಳಲ್ಲಿ ಹೋಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಯಾವುದೇ ಲಸಿಕೆಗಳು ಲಭ್ಯವಿಲ್ಲದ ಕಾರಣ ಕರೋನಾ ವೈರಸ್ನೊಂದಿಗೆ ಬದುಕುವುದು ಅನಿವಾರ್ಯವಾಗಿದೆ.
ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಿದೆ. ಅದರಲ್ಲೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವಾಗ ಹೆಚ್ಚು ಮುಂಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಭಾರತದಲ್ಲಿ ಮಾರ್ಚ್ 24ರಿಂದ ಲಾಕ್ಡೌನ್ ಜಾರಿಗೆ ಬಂದ ನಂತರ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿತ್ತು.
ಈಗ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸಲಾಗಿದೆ. ಆಟೋ, ಕ್ಯಾಬ್ಗಳ ಸೇವೆಯನ್ನು ಸಹ ಪುನರಾರಂಭಿಸಲಾಗಿದೆ. ಈ ಎಲ್ಲ ವಾಹನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ
ಕೆಲ ದಿನಗಳ ಹಿಂದೆ ಗೋವಾದ ಕ್ಯಾಬ್ ಚಾಲಕರು ತಮ್ಮ ಕಾರಿನಲ್ಲಿ ಪ್ಲಾಸ್ಟಿಕ್ ಸ್ಕ್ರೀನ್ ಅಳವಡಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿರುವ ಬಗ್ಗೆ ವರದಿಯಾಗಿತ್ತು. ಪ್ಲಾಸ್ಟಿಕ್ ಸ್ಕ್ರೀನ್ ಮೂಲಕ ಕಾರನ್ನು ಪ್ರತ್ಯೇಕ ಕ್ಯಾಬಿನ್ನಂತೆ ಮಾಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು.
ಈಗ ಚೆನ್ನೈ ಮೂಲದ ಇಬ್ಬರು ವ್ಯಕ್ತಿಗಳು ಕಾರುಗಳಲ್ಲಿ ಸೇಫ್ಟಿ ಶೀಲ್ಡ್ಗಳನ್ನು ಅಳವಡಿಸಿದ್ದಾರೆ. ಚೆನ್ನೈ ಮೂಲದ ಗವಾಸ್ಕರ್ ಹಾಗೂ ಸೆಲ್ವಂ ಎಂಬುವವರು ಜಂಟಿಯಾಗಿ ಜಾಟ್ ಕ್ರಿಯೇಷನ್ ಅನ್ನು ನಡೆಸುತ್ತಿದ್ದು, ಚೆನ್ನೈ ನಗರದ ಉತ್ತರ ಉಸ್ಮಾನ್ ರಸ್ತೆಯಲ್ಲಿ ಕಚೇರಿಯನ್ನು ಹೊಂದಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಕರೋನಾ ವೈರಸ್ ಸಮಸ್ಯೆ ಉಂಟಾಗುವ ಮೊದಲು ಗವಾಸ್ಕರ್ ಈವೆಂಟ್ ಮ್ಯಾನೇಜ್ಮೆಂಟ್ ಕೆಲಸಗಳನ್ನು ಮಾಡುತ್ತಿದ್ದರು. ಜೊತೆಗೆ ಮದುವೆಯಾಗಲು ಸಿದ್ದತೆಗಳನ್ನು ನಡೆಸುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ಗವಾಸ್ಕರ್ ಹಾಗೂ ಸೇಲ್ವಂ ಇಬ್ಬರೂ ನಷ್ಟವನ್ನು ಅನುಭವಿಸಿದರು. ಪರಿಸ್ಥಿತಿಗೆ ಅನುಗುಣವಾಗಿ ಹೊಸ ವ್ಯವಹಾರವನ್ನು ಆರಂಭಿಸಿದರು.
ಕರೋನಾ ವೈರಸ್ನಿಂದ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಎದುರಾಗಿದೆ. ಈ ಕಾರಣಕ್ಕೆ ಅವರಿಬ್ಬರು ಟೆಂಪೊ ಟ್ರಾವೆಲರ್ ಹಾಗೂ ಕಾರುಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸುವ ವ್ಯವಹಾರವನ್ನು ಆರಂಭಿಸಲು ನಿರ್ಧರಿಸಿದರು.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಪಾರದರ್ಶಕವಾಗಿರುವ ಪಿವಿಸಿ ಸೀಟ್ ಮೂಲಕ ಕಾರು ಹಾಗೂ ಟೆಂಪೊ ಟ್ರಾವೆಲರ್ ವಾಹನಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸುತ್ತಿದ್ದಾರೆ. ಅದೂ ಸಹ ಕಡಿಮೆ ಬೆಲೆಯಲ್ಲಿ. ಈ ಬಗ್ಗೆ ಮಾತನಾಡಿರುವ ಗವಾಸ್ಕರ್ರವರು, ಬೇರೆ ರಾಜ್ಯಗಳಲ್ಲಿ ಹಲವರು ಸೇಫ್ಟಿ ಶೀಲ್ಡ್ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಕಾರಣ ನಾವು ಸಹ ಚೆನ್ನೈನಲ್ಲಿ ಈ ಕೆಲಸಕ್ಕೆ ಮುಂದಾದೆವು.
ಚೆನ್ನೈನಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾಬ್ಗಳಿರುವ ಕಾರಣಕ್ಕೆ ತಡ ಮಾಡದೇ ಕೆಲಸವನ್ನು ಆರಂಭಿಸಿದೆವು ಎಂದು ಹೇಳಿದರು. ಅವರು ಜನಪ್ರಿಯ ಟ್ರಾವೆಲ್ಸ್ ಕಂಪನಿಗಳ ವಾಹನಗಳಲ್ಲಿ ಸೇಫ್ಟಿ ಶೀಲ್ಡ್ಗಳನ್ನು ಅಳವಡಿಸುತ್ತಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ನಮ್ಮ ಕಂಪನಿಯಲ್ಲಿ 20 ಜನರು ಕೆಲಸ ಮಾಡುತ್ತಿದ್ದು, ಸರ್ಕಾರ ಹೊರಡಿಸಿರುವ ಎಲ್ಲ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದ್ದೇವೆ. ಪರ್ಯಾಯ ವ್ಯವಹಾರಕ್ಕೆ ಹೊಂದಿಕೊಳ್ಳಲು ಈ ಹೊಸ ಉದ್ಯಮವನ್ನು ಆರಂಭಿಸಿದ್ದೇವೆ. ಸದ್ಯಕ್ಕೆ ದಿನಕ್ಕೆ 150 ವಾಹನಗಳಿಗೆ ಸೇಫ್ಟಿ ಶೀಲ್ಡ್ ಅಳವಡಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸಾಮಾನ್ಯ ಕಾರುಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸಲು 15ರಿಂದ 20 ನಿಮಿಷಗಳು ಬೇಕಾಗುತ್ತವೆ. ಟೆಂಪೊ ಟ್ರಾವೆಲರ್ನಂತಹ ದೊಡ್ಡ ವಾಹನಗಳಿಗೆ 30ರಿಂದ 45 ನಿಮಿಷ ಬೇಕಾಗುತ್ತದೆ. ಸಣ್ಣ ಕಾರುಗಳನ್ನು ನಾಲ್ಕು ಕ್ಯಾಬಿನ್ಗಳಾಗಿ ಹಾಗೂ ದೊಡ್ಡ ಕಾರುಗಳನ್ನು 6 ಕ್ಯಾಬಿನ್ಗಳಾಗಿ ವಿಂಗಡಿಸಲಾಗುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಇದರಿಂದಾಗಿ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ವಾಹನಗಳಲ್ಲಿ ಸೇಫ್ಟಿ ಶೀಲ್ಡ್ ಅಳವಡಿಸಲು ಕನಿಷ್ಠ ರೂ.600ರಿಂದ ಗರಿಷ್ಠ ರೂ.4,500ಗಳವರೆಗೆ ಶುಲ್ಕ ವಿಧಿಸಲಾಗುತ್ತದೆ.