ಅಂಡರ್ವಲ್ಡ್ ಡಾನ್ ದಾವೂದ್ ಕಾರು ಸುಟ್ಟು ಭಸ್ಮ
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರಿಗೆ ಸೇರಿದ ಕಾರೊಂದನ್ನು ಇತ್ತೀಚೆಗಷ್ಟೇ ಹರಾಜಿಡಗಿಡಲಾಗಿತ್ತು. ಈ ಸಂದರ್ಭದಲ್ಲಿ ದಾವೂದ್ ಕಾರನ್ನು ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಖರೀದಿಸಿರುವುದು ಬಹಳಷ್ಟು ಆಸಕ್ತಿ ಕೆರಳಿಸಿತ್ತು.
Also Read: ದಾವೂದ್ ಕಾರು ಖರೀದಿಸಿದ ಹಿಂದೂ ಸ್ವಾಮಿ
ಈಗ ಎಲ್ಲ ಕುತೂಹಲಕ್ಕೆ ವಿರಾಮ ಹಾಡಿರುವ ಹಿಂದೂ ಮಹಾಸಭಾ, ಅಂಡರ್ ವಲ್ಡ್ ಡಾನ್ ದಾವೂದ್ ಕಾರನ್ನು ಬೆಂಕಿ ಹಚ್ಚಿ ಸುಟ್ಟು ಭಸ್ಮ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬರೋಬ್ಬರಿ 3.2 ಲಕ್ಷ ರುಪಾಯಿಗಳನ್ನು ಪಾವತಿಸಿ ದಾವೂದ್ ಅವರ ಹ್ಯುಂಡೈ ಅಸೆಂಟ್ ಕಾರನ್ನು ಹಿಂದೂ ಮಹಾಸಭಾ ಅಧ್ಯಕ್ಷರಾಗಿರುವ ಸ್ವಾಮಿ ಚಕ್ರಪಾಣಿ ಅವರು ಖರೀದಿಸಿದ್ದರು.

ಈ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುವ ಚಕ್ರಪಾಣಿ, ಸಾಧ್ಯವಾದ್ದಲ್ಲಿ ಹ್ಯುಂಡೈ ಕಾರನ್ನು ಆ್ಯಂಬುಲೆನ್ಸ್ ಮಾಡುತ್ತೇನೆ. ಇಲ್ಲವಾದ್ದಲ್ಲಿ ಕಾರಿನ ಮೇಲೆ ದಾವೂದ್ ಫೋಟೋ ಇಟ್ಟು ಸುಡುವುದಾಗಿ ಎಚ್ಚರಿಸಿದ್ದರು.

ಈಗ ಕೊಟ್ಟ ಮಾತಿನಂತೆ ಕೆಚ್ಚೆದೆಯ ನಿರ್ಧಾರ ತೆಗೆದುಕೊಂಡಿರುವ ಹಿಂದೂ ಮಹಾಸಭಾ ಅಧ್ಯಕ್ಷರು ಕಾರು ಸುಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಚಕ್ರಪಾಣಿ ಮುಂದಾಳತ್ವದಲ್ಲಿ ದೆಹಲಿಯ ಗಾಜಿಯಾಬಾದ್ ನ ಇದ್ರಂಪುರಂನಲ್ಲಿ ಒಂದೂಗೂಡಿದ ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಕರ್ತರು ದಾವೂದ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.

ದಾವೂದ್ ಫೋಟೋವನ್ನಿಟ್ಟು ಕಾರನ್ನು ಸುಡುವ ಮೂಲಕ ದೇಶಕ್ಕೆ ವ್ಯಾಪಿಸಿರುವ ಭಯೋತ್ಪಾದನೆಗೆ ಅಂತಿಮ ಸಂಸ್ಕಾರ ಮಾಡುತ್ತಿದ್ದೇನೆ ಎಂದು ಚಕ್ರಪಾಣಿ ವಿವರಿಸಿದರು.


Click it and Unblock the Notifications








