ಕಂದಕದಲ್ಲಿದ್ದ ಕಾರ್ ಅನ್ನು ಹೊರಕ್ಕೆಳೆದ ಗಜರಾಜ..!
ಭಾರತವು ವಿಶ್ವದಲ್ಲಿಯೇ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿದೆ. ಭಾರತದ ಹೆಚ್ಚಿನ ರಾಜ್ಯಗಳು ಪರ್ವತ ಹಾಗೂ ಅರಣ್ಯಗಳಲ್ಲಿ ರಸ್ತೆಗಳನ್ನು ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ. ಹೆಚ್ಚಿನ ರಸ್ತೆಗಳು ಇಳಿಜಾರಿನಂತಿವೆ. ನಮ್ಮ ಪಕ್ಕದ ಕೇರಳ ರಾಜ್ಯ ಸಹ ಇಂತಹ ರಸ್ತೆಗಳನ್ನು ಹೊಂದಿದೆ.

ಕೇರಳದ ಬಹುಪಾಲು ರಸ್ತೆಗಳು ಬೆಟ್ಟ ಗುಡ್ಡಗಳಿಂದ ಕೂಡಿವೆ. ಈ ರಸ್ತೆಗಳು ಒರಟು, ಒರಟಾಗಿವೆ. ಈ ಕಾರಣಕ್ಕೆ ಇಲ್ಲಿ ಅಪಘಾತಗಳು ಹೆಚ್ಚು. ಇದನ್ನು ದೃಢಪಡಿಸುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಮಾರುತಿ 800 ಕಾರೊಂದು ರಸ್ತೆಬದಿಯಲಿದ್ದ ಕಂದಕಕ್ಕೆ ಅಪ್ಪಳಿಸಿದೆ. ಕಂದಕ ತುಂಬಾ ಆಳವಾಗಿದ್ದರಿಂದ ಮಾರುತಿ 800 ಕಾರು ಮತ್ತೆ ಮೇಲೆ ಬರಲು ಸಾಧ್ಯವಾಗಿಲ್ಲ. ಕಾರ್ ಅನ್ನು ಮೇಲೆತ್ತಲು ಆನೆಯನ್ನು ಕರೆಸಲಾಯಿತು.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಥಳಕ್ಕೆ ಬಂದ ಆನೆ ಮಾರುತಿ 800 ಕಾರ್ ಅನ್ನು ಹೊರತೆಗೆದಿದೆ. ಕೇರಳದ ಬಹುತೇಕ ಜನರು ಮಾರುತಿ 800 ಕಾರ್ ಅನ್ನು ಬಳಸುತ್ತಾರೆ. ಮಾರುತಿ 800 ಫ್ರಂಟ್-ವೀಲ್ ಡ್ರೈವ್ ಕಾರ್ ಆಗಿರುವುದು ಹಾಗೂ ಹೆಚ್ಚಿನ ಮೈಲೇಜ್ ನೀಡುವುದು ಇದಕ್ಕೆ ಮುಖ್ಯ ಕಾರಣ.

ಕೇರಳದ ಹೆಚ್ಚಿನ ರಸ್ತೆಗಳು ಇಳಿಜಾರುಗಳಿಂದ ಕೂಡಿವೆ. ಈ ರಸ್ತೆಗಳಲ್ಲಿ ವ್ಹೀಲ್ ಮೌಂಟ್ ಕಾರುಗಳು ಹೆಚ್ಚು ಅನುಕೂಲಕರವಾಗಿವೆ. ಈ ಕಾರಣಕ್ಕೆ ಮಾರುತಿ 800 ಕಾರುಗಳು ಜನರ ನೆಚ್ಚಿನ ಆಯ್ಕೆಯಾಗಿವೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಅಂತಹ ಮಾರುತಿ 800 ಕಾರೊಂದು ಕಂದಕದಲ್ಲಿತ್ತು. ಆ ಕಾರ್ ಅನ್ನು ಮೇಲೆತ್ತಲು ಪಳಗಿದ ಆನೆಯನ್ನು ಕರೆತರಲಾಯಿತು. ಆನೆ ಮಾರುತಿ 800 ಕಾರ್ ಅನ್ನು ಮೇಲಕ್ಕೆಳೆಯುವ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ಆನಂದ್ಕ್ಲಿಕ್ಸ್ ಅಪ್ಲೋಡ್ ಮಾಡಿದೆ.

ಪಳಗಿದ ಆನೆ 300ರಿಂದ 500 ಕೆಜಿ ತೂಕವನ್ನು ಸುಲಭವಾಗಿ ಹೊರಬಲ್ಲದು. ಈ ಘಟನೆಯಲ್ಲಿಯೂ ಕಂದಕದಲ್ಲಿದ್ದ ಕಾರ್ ಅನ್ನು ಆನೆಯು ಹಗ್ಗದ ಸಹಾಯದಿಂದ ಹೊರಕ್ಕೆಳೆದಿದೆ. ಕಂದಕಗಳಲ್ಲಿ ಸಿಲುಕಿದ್ದ ವಾಹನಗಳನ್ನು ಆನೆಗಳು ಹೊರಕ್ಕೆಳೆಯುತ್ತಿರುವುದು ಇದೇ ಮೊದಲಲ್ಲ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಈ ಹಿಂದೆಯೂ ಕಂದಕಲ್ಲಿದ್ದ ಹಲವಾರು ವಾಹನಗಳನ್ನು ಆನೆಗಳು ಹೊರಕ್ಕೆ ಎಳೆದಿದ್ದವು. ಟ್ರಕ್ಗಳಿಂದ ಸ್ಕಾರ್ಪಿಯೋ ಕಾರುಗಳವರೆಗೆ ಹಲವು ರೀತಿಯ ವಾಹನಗಳನ್ನು ಹೊರಕ್ಕೆ ತಂದಿದ್ದವು. ಆನೆಗಳನ್ನು ಸಾಂಸ್ಕೃತಿಕ ಉದ್ದೇಶಗಳಿಗಾಗಿ ಹೆಚ್ಚಾಗಿ ಸಾಕಲಾಗುತ್ತದೆ.

ಆನೆಗಳನ್ನು ಭಾರತದ ಇತರ ರಾಜ್ಯಗಳಿಗಿಂತ ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಕಲಾಗುತ್ತದೆ. ಕೇರಳದಲ್ಲಿ ಆನೆಗಳು ಜನರ ಜೀವನದೊಂದಿಗೆ ಬೆರೆತು ಹೋಗಿವೆ. ಆದರೆ ಕೆಲವೊಮ್ಮೆ ಅವು ನಿಯಂತ್ರಣಕ್ಕೆ ಬಾರದೇ ಮಾವುತರನ್ನೇ ಕೊಂದು ಹಾಕಿವೆ.


Click it and Unblock the Notifications