ವಾಹನಗಳಿಗೆ ಇಂಧನ ಫುಲ್ಟ್ಯಾಂಕ್ ಮಾಡಿಸದಂತೆ ಸರ್ಕಾರ ಸಲಹೆ... ಕಾರಣ ಇಲ್ಲಿದೆ!
ಭಾರತದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆಗಳು ಏರಿಕೆಯಾಗಿವೆ. ಇದರಿಂದ ಕೆಲವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವರು ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳದೇ ತಮ್ಮ ವಾಹನಗಳಿಗೆ ಟ್ಯಾಂಕ್ ತುಂಬಿ ಹರಿಯುವಷ್ಟರ ಮಟ್ಟಿಗೆ ಇಂಧನ ತುಂಬಿಸಿಕೊಳ್ಳುತ್ತಾರೆ. ಇದೀಗ ವಾಹನಗಳಿಗೆ ಹೆಚ್ಚು ಇಂಧನ ತುಂಬಿಸುವವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಮಾರ್ಚ್ 6, 2023 ರ ಹೊಸ ಸುತ್ತೋಲೆಯಲ್ಲಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ವಾಹನ ಮಾಲೀಕರಿಗೆ ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸದಂತೆ ಸೂಚಿಸಿದೆ. ವಾಹನಗಳಲ್ಲಿ ಒದಗಿಸಿರುವ ಇಂಧನ ಟ್ಯಾಂಕ್ನ ಪೂರ್ಣ ಸಾಮರ್ಥ್ಯದ ಶೇ.15ರಿಂದ ಶೇ.20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಂಧನ ತುಂಬಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವಾಹನ ಬಳಕೆದಾರರ ಯೋಗ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯವು ಈ ಸೂಚನೆಗಳನ್ನು ನೀಡಿದೆ.

ನಿಮ್ಮ ಕಾರು, ಸ್ಕೂಟರ್ ಅಥವಾ ಮೋಟಾರ್ಸೈಕಲ್ ಅನ್ನು ಸಂಪೂರ್ಣವಾಗಿ ತುಂಬಲು ನೀವು ಪೆಟ್ರೋಲ್ ಬಂಕ್ಗೆ ಭೇಟಿ ನೀಡಿದ್ದರೆ, ನಿಮ್ಮ ವಾಹನವು ಕ್ಲೈಮ್ ಮಾಡಿದ ಇಂಧನ ಟ್ಯಾಂಕ್ ಸಾಮರ್ಥ್ಯಕ್ಕಿಂತ ಹೆಚ್ಚು ಪೆಟ್ರೋಲ್/ಡೀಸೆಲ್ ಅನ್ನು ಹೀರಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಅಕ್ಕಪಕ್ಕದ ಕೆಲವು ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ವಿಪರೀತವಾಗಿದೆ. ಅದರಲ್ಲೂ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದೂ ಕಂಡರಿಯದ ಮಟ್ಟಕ್ಕೆ ಏರಿಕೆಯಾಗಿದೆ.
ಇಂತಹ ಪರಿಸ್ಥಿತಿ ಭಾರತದಲ್ಲಿ ಉಂಟಾಗಬಹುದೇ ಎಂದು ಭಯಪಡುವ ಅಗತ್ಯವಿಲ್ಲ. ಆದರೆ ಹೆಚ್ಚುತ್ತಿರುವ ತಾಪಮಾನವನ್ನು ಪರಿಗಣಿಸಿ ವಾಹನಗಳನ್ನು ಸಂಪೂರ್ಣವಾಗಿ ತುಂಬಿಸದಂತೆ ಎಚ್ಚರಿಕೆ ನೀಡಲಾಗಿದೆ. ದೇಶದ ಎಲ್ಲಾ ಪೆಟ್ರೋಲ್ ಬಂಕ್ಗಳು ಭೂಗತ ಇಂಧನ ಸಂಗ್ರಹ ಟ್ಯಾಂಕ್ ಅನ್ನು ಹೊಂದಿವೆ. ಭೂಗತ ತಾಪಮಾನವು ವಾತಾವರಣಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಈ ಸ್ಥಿತಿಯಲ್ಲಿ ವಾಹನದಲ್ಲಿ ಇಂಧನವನ್ನು ತುಂಬಿಸಿದರೆ, ಅದು ಹೊರಗಿನ ತಾಪಮಾನಕ್ಕೆ ವಿಸ್ತರಿಸಲು ಪ್ರಾರಂಭಿಸುತ್ತದೆ. ಇದು ತುಂಬಾ ಅಪಾಯಕಾರಿ.

ಇಂತಹ ವಾತಾವರಣದಲ್ಲಿ ವಾಹನಗಳಲ್ಲಿನ ಇಂಧನ ಟ್ಯಾಂಕ್ನಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದಿದ್ದರೆ ಅದು ಸ್ಫೋಟಗೊಂಡು ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ ಎಂಜಿನ್ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ, ಅವು ಹೆಚ್ಚುವರಿ ಹೈಡ್ರೋಕಾರ್ಬನ್ಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿವೆ. ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬುವಾಗ ಇತರ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಣಾಮಗಳನ್ನು ತಪ್ಪಿಸಲು ಸರ್ಕಾರ ಪ್ರಸ್ತುತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಪೆಟ್ರೋಲ್ ವಾಹನಗಳಿಂದ ಆರಂಭಿಸಿ ಎಲೆಕ್ಟ್ರಿಕ್ ವಾಹನಗಳವರೆಗೆ ಕಳೆದ ವರ್ಷ ಹಲವು ಹಠಾತ್ ಅಪಘಾತಗಳು ಸಂಭವಿಸಿವೆ. ಈ ಬೆಂಕಿಯ ಹಿಂದಿನ ಕಾರಣಗಳಲ್ಲಿ ಅತಿಯಾದ ಶಾಖವೂ ಒಂದು. ಈ ವರ್ಷ ಬಿಸಿಲಿನ ಪ್ರಭಾವ ಕೊಂಚ ಹೆಚ್ಚಿರಲಿದೆ. ಮುಂಬರುವ ತಿಂಗಳುಗಳಲ್ಲಿ ಬಿಸಿಲಿನ ಪ್ರಭಾವ ಹಲವು ಪಟ್ಟು ಹೆಚ್ಚಲಿದೆ ಎನ್ನಲಾಗಿದೆ. ಈ ಹಂತದಲ್ಲಿ ಭಾರತೀಯ ವಾಹನ ಬಳಕೆದಾರರಿಗೆ ಕೇಂದ್ರ ಸಚಿವಾಲಯ ಈ ಸೂಚನೆ ನೀಡಿದೆ. ಮಾರ್ಚ್ 27 ರಿಂದ ಲೀಟರ್ ಪೆಟ್ರೋಲ್ ರೂ. 102.63, ಡೀಸೆಲ್ ರೂ. 94.24ಕ್ಕೆ ಮಾರಾಟವಾಗಿದೆ.

ಬೆಲೆಯೇ ಹೀಗಿರುವಾಗ ಎಲ್ಲಿಂದ ತುಂಬಿಸುವುದು ಎಂದು ಕೇಳುತ್ತಿದ್ದೀರಾ. ಪರಿಸ್ಥಿತಿ ಲೆಕ್ಕಿಸದೆ ಹಲವರು ಟ್ಯಾಂಕ್ ತುಂಬಿಸುತ್ತಿದ್ದಾರೆ. ಅವರಿಗಾಗಿ ಸರ್ಕಾರ ಈ ಸೂಚನೆ ನೀಡಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಪೆಟ್ರೋಲ್ ತಯಾರಕರಿಗೆ ಸರ್ಕಾರ ಆದೇಶ ನೀಡಿದೆ. ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸುವುದರಿಂದ ವಿವಿಧ ಅಪಾಯಗಳನ್ನು ಉಂಟುಮಾಡಬಹುದು ಮತ್ತು ಮೈಲೇಜ್ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಸಾರ್ವಜನಿಕರು ಸರ್ಕಾರದ ಸುತ್ತೋಲೆಯನ್ನು ಪಾಲಿಸುವುದು ಉತ್ತಮ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications