ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಟ್ಟುಕೊಳ್ಳುವ ಇಸ್ರೋ ಸಾಧನೆಗಳು
ಭಾರತ ಸರಕಾರದ ಭಾಗವಾಗಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಇದರ ಮುಖ್ಯ ಉದ್ದೇಶ ಅಂತರಿಕ್ಷ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆಯು ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನು ನಿರ್ಮಿಸುತ್ತಿದೆ.
ಭಾರತೀಯ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋವನ್ನು 1969ರಲ್ಲಿ ಸ್ಥಾಪಿಸಲಾಯಿತು. 1975ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ವನ್ನು ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಸೇರಿಸಲಾಯಿತು.

ಡಾ ವಿಕ್ರಮ್ ಸಾರಾಭಾಯ್ ಭಾರತೀಯ ಬಾಹ್ಯಾಕಾಶ ಅಭಿಯಾನದ ಪಿತಾಮಹ ಆಗಿದ್ದಾರೆ. ಅವರನ್ನು ಗೌರವಿಸಲು ತಿರುವನಂತಪುರದ ತುಂಬಾ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು.

ಎಸ್ಎಲ್ವಿ-3 ಭಾರತದ ಮೊದಲ ದೇಶಿಯವಾಗಿ ನಿರ್ಮಿತ ಉಡಾವಣಾ ವಾಹಕವಾಗಿದೆ. ಈ ಯೋಜನೆಗೆ ದಿವಂಗತ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿರ್ದೇಶಕರಾಗಿದ್ದರು. 1980ರಲ್ಲಿ ರೋಹಿಣಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.

ಕಳೆದ 40 ವರ್ಷಗಳ ಇಸ್ರೋ ವ್ಯಯ ಮಾಡಿರುವ ಖರ್ಚು ಮಾಡಿರುವ ಒಟ್ಟು ಮೊತ್ತವು ನಾಸಾ ಒಂದು ವರ್ಷದಲ್ಲಿ ವ್ಯಯ ಮಾಡುತ್ತಿರುವುದಕ್ಕೆ ಅರ್ಧದಷ್ಟಗಿದೆ.

ಇಸ್ರೋ ಬಜೆಟ್, ಕೇಂದ್ರ ಸರಕಾರದ ವ್ಯಯ ಮಾಡುತ್ತಿರುವುದರ ಖರ್ಚಿನ ಶೇಕಡಾ 0.34ರಷ್ಟು ಮತ್ತು ನಿವ್ವಳ ದೇಶೀಯ ಉತ್ಪನ್ನದ ಶೇಕಡಾ 0.8 ರಷ್ಟು ಮಾತ್ರವಾಗಿದೆ.

ಭುವನ್ ಎಂಬ ವೆಬ್ ತಳಹದಿಯ ತ್ರಿಡಿ ಸ್ಯಾಟಲೆಟ್ ಚಿತ್ರಣ ಉಪಕರಣವನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು, ಇದು ಗೂಗಲ್ ಅರ್ಥ್ ಸಮಾನವಾದ ಭಾರತದ ಅವತಾರವಾಗಿದೆ.

ಭಾರತದೆಲ್ಲೆಡೆ ಇಸ್ರೋ 13 ಕೇಂದ್ರಗಳನ್ನು ಹೊಂದಿದೆ. ಇವುಗಳಲ್ಲಿ ಬೆಂಗಳೂರು, ತಿರುವನಂತಪುರ, ಶ್ರಿಹರಿಕೋಟ, ಅಹಮದಾಬಾದ್, ಮಹೇಂದ್ರಗಿರಿ ಪ್ರಮುಖವಾಗಿದೆ.

ನಾಸಾಗೆ ಸಮಾನವಾಗಿ ಬೆಳೆದು ನಿಂತಿರುವ ಇಸ್ರೋ ಈಗ 14 ಬಿಲಿಯನ್ ರುಪಾಯಿಗಳ ವಹಿವಾಟನ್ನು ಹೊಂದಿದೆ.

ಭಾರತದ ಚಂದ್ರಯಾನ ಯೋಜನೆಗೆ (ಚಂದ್ರಯಾನ I) ಸರಿ ಸುಮಾರು 390 ಕೋಟಿ ರುಪಾಯಿಗಳಷ್ಟು ಖರ್ಚಾಗಿತ್ತು. ಇದು ನಾಸಾ ಯೋಜನಾ ವೆಚ್ಚಕ್ಕಿಂತಲೂ ಒಂಬತ್ತು ಪಟ್ಟುಗಳಷ್ಟು ಕಡಿಮೆಯಾಗಿದೆ.

ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿ ಬಿಡುವುದಲ್ಲದೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಮಹತ್ತರ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಇದು ಮುಂದಿನ ವರ್ಷಗಳಲ್ಲಿ ನನಸಾಗಲಿದ್ದು, ಈ ನಿಟ್ಟಿನಲ್ಲಿ ನುರಿತ ತರಬೇತಿಯನ್ನು ನೀಡುತ್ತಿದೆ.

ಆ್ಯಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಇಸ್ರೋದ ವಾಣಿಜ್ಯ ವಹಿವಾಟುಗಳನ್ನು ನಿರ್ವಹಿಸುತ್ತದೆ. ಯುರೋಪ್, ಮಧ್ಯ ಪೂರ್ಪ ಮತ್ತು ದಕ್ಷಿಣ ಪೂರ್ವ ಏಷ್ಯಾದಲ್ಲಿ ಆ್ಯಂಟ್ರಿಕ್ಸ್ ಗೆ ಗಿರಾಕಿಗಳಿದ್ದಾರೆ. 'ಅಂತರಿಕ್ಷ' ಎಂಬ ಸಂಸ್ಕೃತ ಪದದಿಂದ ಆ್ಯಂಟ್ರಿಕ್ಸ್ ಎಂಬ ಹೆಸರನ್ನಿಡಲಾಗಿದೆ.

ತನ್ನ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಇಸ್ರೋ ಒಟ್ಟು 450 ಕೋಟಿ ರುಪಾಯಿಗಳನ್ನು ವ್ಯಯ ಮಾಡಿದೆ. ಅಂದರೆ ಪ್ರತಿ ಕೀ.ಮೀ. ಕೇವಲ 12 ರುಪಾಯಿ ಮಾತ್ರವಾಗಿದ್ದು, ಆಟೋ ರಿಕ್ಷಾ ಶುಲ್ಕಕ್ಕೆ ಸಮಾನವಾಗಿದೆ.

ಮಂಗಳಯಾನ ಯೋಜನೆಯಲ್ಲಿ ಅಮೆರಿಕ ಐದು ಬಾರಿ ವಿಫಲತೆಯನ್ನು ಅನುಭವಿಸಿದ್ದರೆ ಸೋವಿಯತ್ ಒಕ್ಕೂಟ ಎಂಟು ಬಾರಿ, ಚೀನಾ ಮತ್ತು ರಷ್ಯಾ ತಲಾ ಒಂದು ಬಾರಿ ವೈಫಲ್ಯವನ್ನು ಅನುಭವಿಸಿದೆ. ಆದರೆ ಭಾರತ ತನ್ನ ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸಿನ ತುತ್ತ ತುದಿಗೇರಿತ್ತು.

ಯಾವುದೇ ವೈಜ್ಞಾನಿಕ ಸಂಸ್ಥೆಯನ್ನು ಪರಿಗಣಿಸಿದಾಗ ಇಸ್ರೋದಲ್ಲಿ ಅತಿ ಹೆಚ್ಚು ಅವಿವಾಹಿತರು ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ತಮ್ಮ ಸೇವೆಯನ್ನು ಪೂರ್ಣವಾಗಿಯೂ ಇಸ್ರೋಗೆ ಮುಡಿಪಾಗಿಟ್ಟಿದ್ದಾರೆ.

ಸ್ವಂತ ಮಣ್ಣಿನಲ್ಲಿ ಉಪಗ್ರಹ ಅಭಿವೃದ್ಧಿಪಡಿಸಿ ಉಡವಣಾ ಮಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಆರು ರಾಷ್ಟ್ರಗಳ ಪೈಕಿ ಇಸ್ರೋ ಒಂದಾಗಿದೆ.

ಇಸ್ರೋ ಇದುವರೆಗೆ 23 ಸತತ ಯಶಸ್ವಿ ಪಿಎಸ್ ಎಲ್ ವಿ ಉಡಾವಣೆಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿವೆ.

ಇಸ್ರೋ ಇದುವರೆಗೆ ಭಾರತದ 65 ಉಪಗ್ರಹ ಹೊರತಾಗಿಯೂ ವಿದೇಶ ರಾಷ್ಟ್ರಗಳ 29ರಷ್ಟು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಬಿಡಲಾಗಿದೆ.

1979ರಲ್ಲಿ ಭೂ ವೀಕ್ಷಣಾ ಪ್ರಾಯೋಗಿಕ ಉಪಗ್ರಹ ಭಾಸ್ಕರ-1 ಉಡಾವಣೆ.

1980ರಲ್ಲಿ ಭಾರತವೇ ನಿರ್ಮಿಸಿದ ಮೊದಲ ಉಪಗ್ರಹ ವಾಹಕದ ಮೂಲಕ ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಹಾರಿ ಬಿಡಲಾಯಿತು.

1981ರಲ್ಲಿ ಆಪಲ್ ಉಪಗ್ರಹವನ್ನು ಉಡಾವಣ ಕೇಂದ್ರಕ್ಕೆ ಎತ್ತಿನಗಾಡಿ ಸಾಗಿಸಲಾಗಿತ್ತು.

1981ರಲ್ಲಿ ಇನ್ಸಾಟ್ ಸರಣಿಯ ಮೊದಲ ಉಪಗ್ರಹ ಇನ್ಸಾಟ್-1ಎ ಉಡಾವಣೆ

1984ರಲ್ಲಿ ಇಂಡೋ ರಷ್ಯಾ ಜಂಟಿ ಅಂತರಿಕ್ಷ ಯಾನದಲ್ಲಿ ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಸಂಚರಿಸಿದ ಮೊದಲ ಭಾರತೀಯ.

1988ರಲ್ಲಿ ರಷ್ಯಾದ ರಾಕೆಟ್ ಮೂಲಕ ಭಾರತದ ದೂರ ಸಂವೇದಿ ಐಆರ್ ಎಸ್ (IRS) ಉಪಗ್ರಹ ಉಡಾವಣೆ.

1994ರಲ್ಲಿ ಎರಡನೇ ಬಾರಿಗೆ ಪಿಎಸ್ಎಲ್ ವಿ ರಾಕೆಟ್ ಉಡಾವಣೆ ಯಶಸ್ವಿ

2004ರಲ್ಲಿ ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಹೊತ್ತ ಜಿಎಸ್ ಎಲ್ ವಿ ರಾಕೆಟ್ ಮೊದಲ ಉಡಾವಣೆ ಯಶಸ್ವಿ

ಭಾರತದ ಮೊದಲ ಉಪಗ್ರಹ ಆರ್ಯಭಟ


Click it and Unblock the Notifications








