ಪ್ರವಾಸಿಗರಿಗೆ ಮೈಸೂರಿನ ದರ್ಶನ ಮಾಡಿಸಲಿದೆ ಈ ಅಂಬಾರಿ
ಕರ್ನಾಟಕದಲ್ಲಿ ನೂರಾರು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲೂ ಪ್ರವಾಸ ಎಂದಾಕ್ಷಣ ಥಟ್ಟನೆ ನೆನಪಾಗುವ ಹೆಸರೇ ಮೈಸೂರು. ಮೈಸೂರಿನಲ್ಲಿ ಅರಮನೆ, ಲಲಿತ್ ಮಹಲ್ ಪ್ಯಾಲೆಸ್, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಅಸಂಖ್ಯ ಪ್ರೇಕ್ಷಣೀಯ ಸ್ಥಳಗಳಿವೆ.

ಮೈಸೂರು ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ವಿಶ್ವ ವಿಖ್ಯಾತ ದಸರಾ ಹಾಗೂ ದಸರಾ ಮೆರವಣಿಗೆಯಲ್ಲಿ ಸಾಗುವ ಅಂಬಾರಿ. ಇಂದಿನಿಂದ ಸಾರ್ವಜನಿಕರು ಸಹ ಅಂಬಾರಿಯಲ್ಲಿ ಸಾಗಬಹುದು. ಹೌದು ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆಯು ಅಂಬಾರಿ ಹೆಸರಿನ ಡಬಲ್ ಡೆಕ್ಕರ್ ಬಸ್ಗಳನ್ನು ಮೈಸೂರಿನ ರಸ್ತೆಗಿಳಿಸಿದೆ.

ಕಳೆದ ವರ್ಷದ ಬಜೆಟ್ನಲ್ಲಿ ಕರ್ನಾಟಕ ಸರ್ಕಾರವು ಲಂಡನ್'ನಲ್ಲಿರುವ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ಒಪನ್ ಬಸ್ ಸೇವೆಯನ್ನು ಆರಂಭಿಸಲು ತೀರ್ಮಾನಿಸಿತ್ತು. ಇದಕ್ಕಾಗಿ ರೂ.5 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿತ್ತು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಳೆದ ವರ್ಷ ಮೈಸೂರಿನಲ್ಲಿ ಈ ಡಬಲ್ ಡೆಕ್ಕರ್ ಬಸ್ನ ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಲಾಗಿತ್ತು. ಅಂದ ಹಾಗೆ ಈ ಅಂಬಾರಿ ಬಸ್ ದಸರಾ ಸಮಯದಲ್ಲಿ ಮಾತ್ರವಲ್ಲದೆ ವರ್ಷ ಪೂರ್ತಿ ಚಲಿಸಲಿದೆ.

ಗಾಢ ನೇರಳೆ ಬಣ್ಣದಲ್ಲಿರುವ ಅಂಬಾರಿ ಬಸ್ಸಿನ ಬಾಡಿ ಮೇಲೆ ಅಂಬಾರಿ ಆನೆ, ಯಕ್ಷಗಾನ ಹಾಗೂ ರಾಜ್ಯದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಇತರ ಜಾನಪದ ಕಲಾ ಚಿತ್ರಗಳನ್ನು ಬಿಡಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಡಬಲ್ ಡೆಕ್ಕರ್ ಅಂಬಾರಿ ಬಸ್ ಕೆಳ ಡೆಕ್ನಲ್ಲಿ 20, ಮೇಲಿನ ಡೆಕ್ನಲ್ಲಿ 20 ಸೇರಿದಂತೆ ಒಟ್ಟು 40 ಸೀಟುಗಳನ್ನು ಹೊಂದಿದೆ. ಕೆಳ ಡೆಕ್ನಲ್ಲಿರುವ 20 ಸೀಟುಗಳು ಎಸಿಯನ್ನು ಹೊಂದಿವೆ.

ಇನ್ನು ಮೇಲಿನ ಡೆಕ್ನಲ್ಲಿರುವ 20 ಸೀಟುಗಳು ಸಂಪೂರ್ಣವಾಗಿ ತೆರೆದು ಕೊಂಡಿರುತ್ತವೆ. ಇದರಿಂದ ಸಾಂಸ್ಕೃತಿಕ ರಾಜಧಾನಿಯ ಸೌಂದರ್ಯವನ್ನು ಉತ್ತಮವಾಗಿ ಆಸ್ವಾದಿಸಲು ಸಾಧ್ಯವಾಗಲಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಡಬಲ್ ಡೆಕ್ಕರ್ ಬಸ್ ಮೈಸೂರು ಅರಮನೆ, ಮೈಸೂರು ಮೃಗಾಲಯ, ಮೈಸೂರು ವಿಶ್ವವಿದ್ಯಾಲಯ, ಸೇಂಟ್ ಫಿಲೋಮಿನಾ ಚರ್ಚ್, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಹಾದು ಹೋಗಲಿದೆ.

ಪ್ರತಿ ಬಸ್ಸಿನ ಪ್ರವಾಸದ ಅವಧಿ ಒಂದೂವರೆ ಗಂಟೆಗಳಾಗಿರಲಿದೆ. ಈ ಅವಧಿಯಲ್ಲಿ ಪ್ರತಿ ಪ್ರವಾಸಿ ತಾಣದ ಬಗ್ಗೆ ಆಡಿಯೋ ಹಾಗೂ ವೀಡಿಯೊ ಮೂಲಕ ಬಸ್ನೊಳಗಿರುವ ಮಾನಿಟರ್ಗಳಲ್ಲಿ ಮಾಹಿತಿ ನೀಡಲಾಗುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರಯಾಣಿಕರ ಸುರಕ್ಷತೆಗಾಗಿ ಪ್ರತಿ ಬಸ್ನಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಈ ಅಂಬಾರಿ ಡಬಲ್ ಡೆಕ್ಕರ್ ಬಸ್ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆಕರ್ಷಣೆ ನೀಡಲಿದೆ.

ಅಂಬಾರಿ ಬಸ್ಸಿನ ಸುಗಮ ಸಂಚಾರಕ್ಕಾಗಿ ಬಸ್ ಸಾಗುವ ಮಾರ್ಗದಲ್ಲಿ ಇದ್ದ ವಿದ್ಯುತ್ ತಂತಿ, ಮರದ ಕೊಂಬೆಗಳನ್ನು ತೆಗೆದು ಹಾಕಲಾಗಿದೆ. ಪ್ರತಿ ಅರ್ಧ ಗಂಟೆಗೊಂದರಂತೆ ಅಂಬಾರಿ ಬಸ್ ಕಾರ್ಯಾಚರಣೆ ನಡೆಸಲಿದೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಂಬಾರಿ ಬಸ್ಸಿನಲ್ಲಿ ಮೈಸೂರು ನಗರ ವೀಕ್ಷಣೆ ಮಾಡ ಬಯಸುವ ಪ್ರತಿ ಪ್ರವಾಸಿಗರಿಗೆ ರೂ.250 ದರ ನಿಗದಿಪಡಿಸಲಾಗಿದೆ.
ಗಮನಿಸಿ: ಈ ಲೇಖನದಲ್ಲಿ ಕೆಲವು ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.


Click it and Unblock the Notifications