ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯ ಅಪಾಯಕಾರಿ ರಸ್ತೆಗಳು ಭಾರತದಲ್ಲಿವೆ. ಭಾರತದ ರಸ್ತೆಗಳಲ್ಲಿ ಯಾವಾಗ ಬೇಕಾದರೂ ಅಪಘಾತ ಸಂಭವಿಸಬಹುದು. ಭಾರತದ ಬಹುತೇಕ ವಾಹನ ಸವಾರರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದೇ ಇಲ್ಲ. ಈ ಕಾರಣಕ್ಕೆ ಭಾರತದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತವೆ.

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದು ಹಾಗೂ ಕುಡಿದು ವಾಹನ ಚಲಾಯಿಸುವುದು ಈ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಅತಿ ವೇಗದಲ್ಲಿ ಬರುವ ವಾಹನಗಳು ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಅಪಘಾತಗಳಿಗೆ ಕಾರಣವಾಗುತ್ತವೆ.

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ರಸ್ತೆ ಅಪಘಾತಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವೀಡಿಯೊಗಳು ವೈರಲ್ ಆಗುತ್ತವೆ. ಇದೇ ರೀತಿಯ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವೀಡಿಯೊದಲ್ಲಿ ಅದೃಷ್ಟವಶಾತ್ ಯಾವುದೇ ರಸ್ತೆ ಅಪಘಾತ ಸಂಭವಿಸಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಅತಿ ವೇಗವಾಗಿ ಬಂದ ವಾಹನವೊಂದು ಗುದಿಯುವುದರಿಂದ ಪಾದಚಾರಿಯೊಬ್ಬರು ಪಾರಾಗಿದ್ದಾರೆ. ಈ ವೀಡಿಯೊದಲ್ಲಿ ಕಾರ್ಮಿಕರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಅತಿ ವೇಗದಲ್ಲಿ ಬಂದ ಪಿಕ್ ಅಪ್ ಟ್ರಕ್ ಅವರ ಪಕ್ಕದಲ್ಲಿಯೇ ಹಾದು ಹೋಗಿದೆ. ಅತಿ ವೇಗದಲ್ಲಿದ್ದ ಕಾರಣ ಈ ಪಿಕ್ ಅಪ್ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಕಾರ್ಮಿಕನ ಅದೃಷ್ಟಕ್ಕೆ ಆ ವಾಹನವು ಅವರಿಗೆ ಡಿಕ್ಕಿ ಹೊಡೆಯಲಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಪಿಕ್ ಅಪ್ ಟ್ರಕ್ ಸ್ವಲ್ಪ ದೂರ ಚಲಿಸಿದ ನಂತರವೂ ವೇಗದಲ್ಲಿಯೇ ಇತ್ತು. ನಂತರ ಅದರ ಚಾಲಕನು ವಾಹನವನ್ನು ನಿಯಂತ್ರಣಕ್ಕೆ ತಂದಿದ್ದಾನೆ. ವೀಡಿಯೊ ನೋಡುವವರಿಗೆ ಈ ದೃಶ್ಯ ನಡುಕ ಹುಟ್ಟಿಸುತ್ತಿದೆ. ಇನ್ನು ಈ ಘಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಅನುಭವ ಊಹಿಸಲಾಸಾಧ್ಯ.

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಈ ವೀಡಿಯೊದಲ್ಲಿ ಭಯದಿಂದ ಓಡುವ ಆ ಕಾರ್ಮಿಕನನ್ನು ಕಾಣಬಹುದು. ಅಂದ ಹಾಗೆ ಈ ಘಟನೆ ನಡೆದಿರುವುದು ಕೇರಳದ ಕೊಲ್ಲಂ ಜಿಲ್ಲೆಯ ಸವರಾದಲ್ಲಿ. ಈ ಘಟನೆ ಕಳೆದ ಶುಕ್ರವಾರ ನಡೆದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರಸ್ತೆ ಅಪಘಾತದಿಂದ ಪಾರಾದ ವ್ಯಕ್ತಿ ಶ್ರೀ ಕುಮಾರ್ ತಮಿಳುನಾಡು ಮೂಲದವರು. ಅವರು ಹಲವು ವರ್ಷಗಳಿಂದ ಕೇರಳದಲ್ಲಿ ವಾಸವಾಗಿದ್ದಾರೆ. ಅವರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಆಘಾತದಿಂದ ಜರ್ಜರಿತರಾಗಿದ್ದಾರೆ.

ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ

ಆಘಾತದಿಂದ ಹೊರ ಬರಲು ಸಾಧ್ಯವಾಗದೆ ಆ ದಿನ ಅವರು ಕೆಲಸಕ್ಕೆ ತೆರಳದೇ ಮನೆಗೆ ವಾಪಸಾಗಿದ್ದಾರೆ. ಶ್ರೀ ಕುಮಾರ್ ನಿಜಕ್ಕೂ ಅದೃಷ್ಟಶಾಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ.

Article Published On: Tuesday, August 25, 2020, 9:44 [IST]
English summary
Kerala man miraculously escapes from minivan hitting. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+