ಮಂಗಳೂರಿನಲ್ಲಿ ವಿಂಟೇಜ್ ಕಾರು, ಬೈಕ್ Rally
ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ವಿಂಟೇಜ್ ಹಾಗೂ ಕ್ಲಾಸಿಕ್ ಕಾರು Rally ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮಂಗಳೂರಿನ ನೆಹರು ಮೈದಾನದಲ್ಲಿ ಜನವರಿ 26ರಂದು ಸಾಗಿದ ಗಣರಾಜ್ಯೋತ್ಸವ ಪ್ರಯುಕ್ತ ವಿಂಟೇಜ್ ಕಾರು ಹಾಗೂ ಬೈಕ್ Rally ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು ಮೋಟಾರ್ ನ್ಪೋರ್ಟ್ಸ್ ಆಸೋಸಿಯೇಶನ್ ಆಶ್ರಯದಲ್ಲಿ ವಿಂಟೇಜ್ ಕಾರು, ಸ್ಕೂಟರ್ ಹಾಗೂ ಬೈಕ್ಗಳ ಪ್ರದರ್ಶನ ಆಯೋಜಿಸಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಂಟೇಜ್ ಕಾರು ಚಲಾಯಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಿ.ಟಿ ರವಿ ಗಮನ ಸೆಳೆದರು. ಇಲ್ಲಿದೆ ನೋಡಿ ಮಂಗಳೂರು ವಿಂಟೇಜ್ ಕಾರು Rally ಆಕರ್ಷಕ ಫೋಟೋಸ್
image source: supercars.mangalore

ಗಣರಾಜ್ಯೋತ್ಸವ ಪ್ರಯುಕ್ತ ಮಂಗಳೂರಿನ ನೆಹರು ಮೈದಾನದಲ್ಲಿ ವಿಂಟೇಜ್ ಕಾರು ಹಾಗೂ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ನಿಂದ 11ನೇ ವಿಂಟೇಜ್ ಹಾಗೂ ಕ್ಲಾಸಿಕ್ ಕಾರು ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಿ.ಟಿ ರವಿ ವಿಂಟೇಜ್ ಕಾರು ಡ್ರೈವಿಂಗ್ ಮಾಡುವ ಮೂಲಕ ಗಮನ ಸೆಳೆದರು.

ವಿಂಟೇಜ್ ಕಾರು ಸಹಿತ ವಿಂಟೇಜ್ ಬೈಕ್ ಪ್ರಮುಖ ಆಕರ್ಷಣೆಯಾಗಿದ್ದವು.

ವಿಂಟೇಜ್ ಜೀಪ್ ಕೂಡಾ ನೋಡುಗರನ್ನು ರೋಮಾಂಚನಗೊಳಿಸಿತ್ತು.

ಹಳೆಯ ಅಂಬಾಸಿಡರ್ ಕಾರು ಕೂಡಾ ನೆಹರು ಮೈದಾನದ ಅಂದತೆ ಹೆಚ್ಚಿಸಿತ್ತು.

ಇಲ್ಲಿದೆ ನೋಡಿ ವಿಂಟೇಜ್ ಬೈಕ್ನ ಆಕರ್ಷಕ ಭಂಗಿ


Click it and Unblock the Notifications








