ಗೂಗಲ್ ಮ್ಯಾಪ್ ನಂಬಿ ಮೆಟ್ಟಿಲುಗಳಲ್ಲಿ ಸಿಲುಕಿದ ಕಾರು: ಅದಕ್ಕಿಂತ ತಮ್ಮ ಮ್ಯಾಪ್ ಉತ್ತಮವೆಂದ ಈ ಸಿಇಒ
ತಂತ್ರಜ್ಞಾನವು ನಮ್ಮ ಜೀವನವನ್ನು ಸುಲಭ ಮಾಡುತ್ತದೆ, ದೈನಂದಿನ ಕೆಲಸ ಕಾರ್ಯಗಳಲ್ಲಿ ನೆರವು ನೀಡುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ದಾರಿ ಗೊತ್ತಿಲ್ಲ ಅಂದರೆ ಗೂಗಲ್ ಮ್ಯಾಪ್ಸ್ (Google Map) ಅತಿಯಾಗಿ ನಂಬಿ ವಾಹನ ಚಾಲನೆ ಮಾಡುತ್ತೇವೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಸಾಮಾನ್ಯವಾಗಿ ನಿಖರವಾಗಿದೆ.
ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಅಷ್ಟು ನಿಖರವಿರಲ್ಲ. ಕೆಲವು ಸಲ ಇತರ ಜಾಗಗಳಿಗೂ ಕರೆದುಕೊಂಡಿರುವ ಹಲವು ಉದಾಹರಣೆಗಳಿವೆ. ನಾವು ಗೂಗಲ್ ಮ್ಯಾಪ್ ನೋಡಿ ಹೋಗುವಾಗ, ಸಾಮಾನ್ಯವಾಗಿ ಫ್ಲೈಓವರ್ ತೆಗೆದುಕೊಳ್ಳುವ ಅಥವಾ ಅದರ ಕೆಳಗೆ ಹೋಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತೇವೆ. ಗೂಗಲ್ ಮ್ಯಾಪ್ ನಮ್ಮ ಡ್ರೈವಿಂಗ್ನ ಅವಿಭಾಜ್ಯ ಅಂಗವಾಗಿರುವುದರಿಂದ, ನಮ್ಮಲ್ಲಿ ಹೆಚ್ಚಿನವರು ನಾವು ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಗೂಗಲ್ ಮ್ಯಾಪ್ ಅನ್ನು ಆನ್ ಮಾಡುತ್ತೇವೆ.

ಗೂಗಲ್ ಮ್ಯಾಪ್ ಅನ್ನು ಕಣ್ಮುಚ್ಚಿ ನಂಬುವ ಹಾಗೆಯೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಬಹಳಷ್ಟು ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಾ. ಇತ್ತೀಚೆಗೆ ಇದೆ ರೀತಿ ಗೂಗಲ್ ಮ್ಯಾಪ್ ನಂಬಿ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ವರದಿಯಾಗಿದೆ. ಕಳೆದ ವಾರ ಲಾಂಗ್ ವೀಕೆಂಡ್ ಇದ್ದ ಕಾರಣ ಬೆಂಗಳೂರಿನಿಂದ ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ತಮಿಳುನಾಡಿನ ನೀಲಗಿರಿ ಹಿಲ್ಸ್ ಗೆ ಪ್ರವಾಸ ಹೋಗಿದ್ದರು.
ಇಲ್ಲಿ ಟೊಯೊಟಾ ಫಾರ್ಚುನರ್ ಎಸ್ಯುವಿ ಮೆಟ್ಟಿಲುಗಳ ಮೇಲೆ ಸಿಲುಕಿಕೊಂಡಿತ್ತು ದೊಡ್ಡ ಸುದ್ದಿಯಾಗಿತ್ತು. ಈ ಘಟನೆ ಹಿಂದಿನ ಪ್ರಮುಖ ಕಾರಣವೆಂದರೆ ಅದರ ಚಾಲಕ ಗೂಗಲ್ ಮ್ಯಾಪ್ ಅನ್ನು ನೋಡಿ ವಾಹನ ಚಲಾಯಿಸುತ್ತಿದ್ದರು. ಊಟಿಯಲ್ಲಿ ಸಂಭವಿಸಿದ ಅಪಘಾತವು ನ್ಯಾವಿಗೇಷನ್ ಅಪ್ಲಿಕೇಶನ್ಗಳ ಅವಲಂಬನೆಯ ಬಗ್ಗೆ ಹಲವಾರು ಕಳವಳಗಳನ್ನು ಹುಟ್ಟುಹಾಕಿತು.

ಪರ್ಯಾಯವನ್ನು ಪ್ರಚಾರ ಮಾಡಲು ಮತ್ತು Google Maps ನಲ್ಲಿನ ಸಮಸ್ಯೆಗಳ ಬಗ್ಗೆ ಮೈಮ್ಯಾಪ್ಇಂಡಿಯಾ (MapMyIndia) ಸಿಇಒ ರೋಹನ್ ವರ್ಮಾ ಅವರು ವಿಮರ್ಶೆ ಮಾಡಿದ್ದಾರೆ. ಅಲ್ಲದೇ ತಮ್ಮ ಅಪ್ ಅನ್ನು ಪ್ರಮೋಟ್ ಮಾಡಲು ಈ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ. ರೋಹನ್ ವರ್ಮಾ ಅವರು ಈ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಟ್ವೀಟ್ ಮಾಡಿದ್ದಾರೆ. ಗೂಗಲ್ ಮ್ಯಾಪ್ ಗಿಂತ ಮೈಮ್ಯಾಪ್ಇಂಡಿಯಾ ಉತ್ತಮವಾಗಿದೆ ಎಂಬುದನ್ನು ಸಹ ಅವರು ಬರೆದುಕೊಂಡಿದ್ದಾರೆ.
ಭಾರತೀಯ ಮ್ಯಾಪಿಂಗ್ ಮತ್ತು ನ್ಯಾವಿಗೇಷನ್ ಕಂಪನಿಯ ಮುಖ್ಯಸ್ಥರಾಗಿರುವ MapMyIndia ಮೈಮ್ಯಾಪ್ಇಂಡಿಯಾ ಸಿಇಒ ರೋಹನ್ ವರ್ಮಾ ಅವರು ತಮ್ಮ ಟ್ವೀಟ್ನಲ್ಲಿ ಗೂಗಲ್ ಮ್ಯಾಪ್ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಗೂಗಲ್ ಮ್ಯಾಪ್ ಗಿಂತ ತಮ್ಮ ಮೈಮ್ಯಾಪ್ಇಂಡಿಯಾ ಉತ್ತಮ ಪರ್ಯಾಯವಾಗಿದೆ ಎಂಬುದನ್ನು ಅವರು ವಿವರಿಸಿದರು. ಅವರು ಗೂಗಕ್ ಸೇವೆಯು ಕೆಟ್ಟದಾಗಿದೆ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಟ್ವೀಟ್ನಲ್ಲಿ, ಇಂತಹ ಘಟನೆಗಳು ದುಃಖಕರವಾಗಿದೆ, ಮತ್ತು ನಮ್ಮ ಹೃದಯವು ನೋಂದ ಜನರಿಗಾಗಿ ಮಿಡಿಯುತ್ತದೆ. ಗೂಗಲ್ ಉತ್ತಮವಾಗಿಲ್ಲ ಎಂದು ನಾನು ಹೇಳುತ್ತಿಲ್ಲ, ಆದ್ದರಿಂದ ನನ್ನನ್ನು ತಪ್ಪಾಗಿ ಗ್ರಹಿಸಬೇಡಿ. ಆದರೆ ದುರದೃಷ್ಟವಶಾತ್, ಹೆಚ್ಚಿನ ಜನರು ಗೂಗಲ್ ಮ್ಯಾಪ್ ಅನ್ನು ನ್ಯಾವಿಗೇಷನ್ಗೆ ಏಕೈಕ ಆಯ್ಕೆ ಎಂದು ಭಾವಿಸುತ್ತಾರೆ ಮತ್ತು ಉತ್ತಮ ಅಥವಾ ಕೆಟ್ಟದ್ದಕ್ಕಾಗಿ ಅದರ ಮೇಲೆ ಅವಲಂಬಿತರಾಗಿದ್ದಾರೆ, ಇದು ಅನೇಕ ಬಾರಿ ಇಂತಹ ಅಪಾಯಕಾರಿ ಘಟನೆಗಳಿಗೆ ಕಾರಣವಾಗುತ್ತದೆ ಎಂದರು.
ವರ್ಮಾ, ತಮ್ಮ ಟ್ವೀಟ್ನೊಂದಿಗೆ, ಜನರು ತಮ್ಮ ಮ್ಯಾಪಿಂಗ್ ಅಗತ್ಯಗಳಿಗಾಗಿ ಮ್ಯಾಪ್ಮೈ ಇಂಡಿಯಾ ಎಂಬ ಸಂಪೂರ್ಣ ಭಾರತೀಯ ಪರ್ಯಾಯವನ್ನು ಅನ್ವೇಷಿಸಬೇಕು ಎಂದು ಸಲಹೆ ನೀಡಿದರು. ಕೇವಲ ಗೂಗಕ್ ಮ್ಯಾಪ್ ಅನ್ನು ಅವಲಂಬಿಸುವುದು ಅಪಾಯಕಾರಿ ಸಂದರ್ಭಗಳಿಗೆ ಕಾರಣವಾಗಬಹುದು ಎಂದು ಅವರು ವಾದಿಸಿದರು, ಪರ್ಯಾಯ ಆಯ್ಕೆಯನ್ನು ಹೊಂದಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications