Just In
- 13 min ago ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- 1 hr ago ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- 1 hr ago ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ ತರಬಹುದು!
- 16 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
Don't Miss!
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Finance Gold rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಕಿ ಕಡ್ಡಿಗಳಿಂದ ತಯಾರಾಯ್ತು ಅಪರೂಪದ ಸೈಕಲ್ ಪ್ರತಿಕೃತಿ
ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಓಡಿಶಾ ಮೂಲದ ಕಲಾವಿದ ಸಾಸ್ವತ್ ರಂಜನ್ ಸಾಹೂ ರಚಿಸಿದ ಉತ್ಪನ್ನವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಹಿಂದಿನ ಕಾಲದಲ್ಲಿ ಪೆನ್ನಿ ಫಾರ್ಥಿಂಗ್ ಸೈಕಲ್ಗಳು ಹೆಚ್ಚು ಜನಪ್ರಿಯವಾಗಿದ್ದವು. ಪೆನ್ನಿ ಫಾರ್ಥಿಂಗ್ ಸೈಕಲ್ಗಳ ಮುಂಭಾಗದ ವ್ಹೀಲ್'ಗಳು ದೊಡ್ಡದಾಗಿದ್ದರೆ, ಹಿಂಭಾಗದ ವ್ಹೀಲ್'ಗಳು ತುಂಬಾ ಚಿಕ್ಕದಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಸೈಕಲ್ಗಳು ಕಾಣುವುದೇ ಅಪರೂಪ. ಇಂತಹ ಅಪರೂಪದ ಸೈಕಲ್ನ ಪ್ರತಿಕೃತಿಯನ್ನು ಸಾಸ್ವತ್ ರಂಜನ್ ಸಾಹು ತಯಾರಿಸಿದ್ದಾರೆ.
ಈ ಸೈಕಲ್ ತಯಾರಿಸಲು ಅವರು 3,600ಕ್ಕೂ ಬೆಂಕಿ ಕಡ್ಡಿಗಳನ್ನು ಬಳಸಿದ್ದಾರೆ. ಅವರು ತಯಾರಿಸಿರುವ ಈ ಸೈಕಲ್ 1870ರ ದಶಕದ ಮಾದರಿಯನ್ನು ಹೋಲುತ್ತದೆ. 50 ಇಂಚು ಉದ್ದ, 25 ಇಂಚು ಅಗಲ ಹೊಂದಿರುವ ಈ ಸೈಕಲ್ ಅನ್ನು ಸಾಸ್ವತ್ ರಂಜನ್ ಸಾಹೂ 7 ದಿನಗಳಲ್ಲಿ ತಯಾರಿಸಿದ್ದಾರೆ.
MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್ಟಿಒ ಫಾರಂಗಳಿವು!
ವಿಶ್ವ ಬೈಸಿಕಲ್ ದಿನಕ್ಕಿಂತ ಮುಂಚೆಯೇ ಈ ಸೈಕಲ್ ಅನ್ನು ತಯಾರಿಸಿದ್ದರು. ಈ ಬಗ್ಗೆ ಮಾತನಾಡಿರುವ ಸಾಸ್ವತ್ ರಂಜನ್ ಸಾಹು, ನಾನು ಶಾಲೆಯಲ್ಲಿದ್ದಾಗ ಈ ಸೈಕಲ್ ಅನ್ನು ನೋಡಿದ್ದೆ. ಈ ಸೈಕಲ್ ನನ್ನನ್ನು ಬಹುವಾಗಿ ಆಕರ್ಷಿಸಿತ್ತು.
ನಾನು ಈ ಸೈಕಲ್ ಹೊಂದಲು ಬಯಸಿದ್ದೆ. ಆದರೆ ಈ ಸೈಕಲ್ ಸದ್ಯಕ್ಕೆ ಲಭ್ಯವಿಲ್ಲ. ಈ ಕಾರಣಕ್ಕೆ ವಿಶ್ವ ಸೈಕಲ್ ದಿನಾಚರಣೆಯ ಸಂದರ್ಭದಲ್ಲಿ ಈ ಸೈಕಲ್ ತಯಾರಿಸಿದ್ದೇನೆ. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಯಸುತ್ತೇನೆ ಎಂದು ಹೇಳಿದರು.
MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು
ಜನರು ಕಾರುಗಳ ಬದಲು ಸೈಕಲ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು ಎಂದು ಅವರು ಹೇಳಿದರು. ಸೈಕಲ್ಗಳು ಪರಿಸರ ಸ್ನೇಹಿಯಾಗಿದ್ದು, ನಮ್ಮ ಆರೋಗ್ಯ ಕಾಪಾಡಲು ನೆರವಾಗುತ್ತವೆ.
ಈ ಕಾರಣಕ್ಕೆ ಜನರು ಸೈಕಲ್ಗಳಿಗೆ ಆದ್ಯತೆ ನೀಡಬೇಕು ಎಂದು ಸಾಸ್ವತ್ ರಂಜನ್ ಸಾಹು ಹೇಳಿದರು. ದ್ವಿಚಕ್ರ ವಾಹನಗಳಿಗೆ ಸೈಕಲ್ಗಳು ಅತ್ಯುತ್ತಮ ಪರ್ಯಾಯವಾಗಿವೆ. ಈ ಬಗ್ಗೆ ಸಾಸ್ವತ್ ರಂಜನ್'ರವರು ಇನ್ಸ್ಟಾಗ್ರಾಂನಲ್ಲಿಯೂ ಮಾಹಿತಿ ನೀಡಿದ್ದಾರೆ.
MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್
ಸೈಕ್ಲಿಂಗ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾನು ಈ ಸೈಕಲ್ ಅನ್ನು ತಯಾರಿಸಿದೆ. ಪ್ರತಿಯೊಬ್ಬರೂ ಸೈಕಲ್ ಬಳಸಬೇಕೆಂದು ನನ್ನ ಆಸೆ. ಇದರಿಂದಪರಿಸರವನ್ನು ಕಲುಷಿತಗೊಳಿಸದೆ ಆರೋಗ್ಯವಂತರಾಗಿರ ಬಹುದು ಎಂದು ಹೇಳಿದ್ದಾರೆ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳಿಂದ ವಾಯುಮಾಲಿನ್ಯ ಸಮಸ್ಯೆ ಉಲ್ಬಣಗೊಂಡಿದೆ. ಸಾಕಷ್ಟು ಜನರು ಸ್ಥೂಲಕಾಯದಿಂದ ಬಳಲುತ್ತಿರುವ ಪ್ರಮುಖ ಕಾರಣಗಳಲ್ಲಿ ವಾಹನಗಳ ಬಳಕೆಯು ಒಂದು. ಈ ಸಮಸ್ಯೆಗಳಿಗೆ ಸೈಕ್ಲಿಂಗ್ ಪರಿಹಾರ ನೀಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ.
ಚಿತ್ರ ಕೃಪೆ: ಸಾಸ್ವತ್ ರಂಜನ್ ಸಾಹೂ/ಇನ್ಸ್ಟಾಗ್ರಾಂ