Just In
- 8 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 9 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 11 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 12 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್ನಿಕ್ ಕಂಡುಹಿಡಿದ ಇಂಜಿನಿಯರ್ಗಳು
ಭಾರತದಲ್ಲಿ ವ್ಯವಸಾಯ ಪದ್ಧತಿಯು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ತಂತ್ರಜ್ಞಾನಗಳ ಸಹಾಯದಿಂದ ಹೆಚ್ಚಿನ ಇಳುವರಿ ಪಡೆಯಲು ಲಕ್ಷಾಂತರ ರೈತರು ವೈಜ್ಞಾನಿಕ ಬೇಸಾಯದತ್ತ ಮುಖ ಮಾಡಿದ್ದಾರೆ. ಈಗಾಗಲೆ ಐಷಾರಾಮಿ ಕಾರುಗಳನ್ನು ಪರಿವರ್ತಿಸಿಕೊಂಡು ಕೃಷಿ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿರುವ ಹಲವರನ್ನು ನಾವು ಕಂಡಿದ್ದೇವೆ.
ತಮಿಳು ನಾಡಿನ ಪೆರಂಬೂರ್ ಜಿಲ್ಲೆಯಲ್ಲಿನ ಯುವಕರು ಕೃಷಿಯಲ್ಲಿ ಡ್ರೋನ್ ಅನ್ನು ವಿಶೇಷವಾಗಿ ಬಳಕೆ ಮಾಡಿ, ಆದೂನಿಕ ಕೃಷಿಯಲ್ಲಿ ರೈತರಿಗೆ ಸಹಾಯವಾಗಲು ಮತ್ತು ಅವರ ಕೆಲಸವನ್ನು ನೀಗಿಸಲು ಮುಂಗಾಗಿದ್ದಾರೆ. ಹಾಗಾದರೆ ಎಂದಿನ ಲೇಖನದಲ್ಲಿ ಈ ವಿಧ್ಯಾರ್ಥಿಗಳು ಕೃಷಿಯಲ್ಲಿ ಡ್ರೋನ್ ಅನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆಂಬ ಮಾಹಿತಿಯನ್ನು ತಿಳಿಯಿರಿ.
ರಿಮೋಟೆಡ್ಲಿ ಪೈಲೊಟೆಡ್ ಏರ್ಕ್ರಾಫ್ಟ್ ಸಿಸ್ಟಮ್ (ಆರ್ಪಿಎಎಸ್) ಎಂಬ ಹೆಸರನ್ನು ಪಡೆದ ಡ್ರೋನ್ಗಳನ್ನು ಕೇವಲ ಫೋಟೊಗ್ರಫಿ ಹಾಗು ಚಾಯಗ್ರಹಣಕ್ಕೆ ಮಾತ್ರವಲ್ಲದೇ ಇನ್ನು ಹಣಕಾಸು ವಹಿವಾಟುಗಳಿಗೆ ಬಳಸಬಹುದಾಗಿದೆ.
ಪ್ರಪಂಚದ ವಿವಿಧ ಭಾಗಗಳಲ್ಲಿ ಡ್ರೋನ್ಗಳನ್ನು ಕೃಷಿ ಕಾರ್ಯಕ್ಕಾಗಿ, ಭದ್ರತೆಗಾಗಿ, ಸುರಕ್ಷತೆಗಾಗಿ ಮತ್ತು ಕೊರಿಯರ್ ಕೆಲಸಗಳಿಗೆ ಬಳಸುತ್ತಿದ್ದಾರೆ. ಪ್ರಮುಖ ಇ-ಕಾಮರ್ಸ್ ವೆಬ್ಸೈಟ್ಗಳು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ಕೊರಿಯರ್ ಮಾಡಲು ಡ್ರೋನ್ಗಳನ್ನು ಬಳಸುತ್ತಿದ್ದಾರೆ. ಅಷ್ಟೆ ಅಲ್ಲ ಇನ್ನು ಕೆಲವು ಭಾಗಗಳಲ್ಲಿ ಪಿಡ್ಜಾ ಡೆಲಿವರಿಗೆ ಮಾಡಲು ಕೂಡಾ ಇದನ್ನು ಬಳಸುತ್ತಿದ್ದಾರೆ.
ಆದರೆ ಸೇಲಂ ಮೂಲದವರಾದ ಇಬ್ಬರು ಇಂಜಿಯರ್ಗಳು ಡ್ರೋನ್ ಅನ್ನು ಹೆಲಿ-ಸ್ಪ್ರೇಯರ್ ಎಂಬ ಹೆಸರಿನಲ್ಲಿ ಅದಕ್ಕೊಂದು ದೊಡ್ಡ ಗಾತ್ರದ ಟ್ಯಾಂಕ್ ಅನ್ನು ಅಳವಡಿಸಿ ಅದರಲ್ಲಿ ಕೀಟನಾಷಕವನ್ನು ತುಂಬಿ ಸ್ವಯಂಚಾಲಿತವಾಗಿ ಸ್ಪ್ರೇ ಮಾಡಲಿದ್ದು, ಗದ್ದೆಗಳಲ್ಲಿ ರೈತರಿಗೆ ಕಡಿಮೆ ಶ್ರಮವನು ನೀಡುವ ಸಲುವಾಗಿ ಇದನ್ನು ತಯಾರು ಮಾಡಲಾಗಿದೆ.
ಸೆಲ್ವ ಕುಮಾರ್ ಮತ್ತು ಸುರೇಶ್ ಎಂಬ ಇಂಜಿನಿಯರ್ಗಳು ಈ ಯೋಜನೆಗೆ ಹೆಲಿ-ಸ್ಪ್ರೇಯರ್ ಎಂದು ಹೆಸರಿಡಲಾಗಿದ್ದು, ಈ ಹೆಲಿ-ಸ್ಪ್ರೇಯರ್ ಹೊಲದಲ್ಲಿರುವ ಕೀಟಗಳನ್ನು ಸಾಯಿಸಲು ರಿಮೋಟ್ ಕಂಟ್ರೋಲ್ನಿಂದ ಮನುಷ್ಯರ ಸಹಾಯವಿಲ್ಲದೆ ಸ್ಪ್ರೇ ಮಾಡಲಾಗುತ್ತದೆ.
ಈ ಹೆಲಿ-ಸ್ಪ್ರೇಯರ್ ಅನ್ನು ಪರೀಕ್ಷಿಸಲು ಪೆರಂಬೂರ್ ಜಿಲ್ಲೆಯಲ್ಲಿನ ರಾಜಪಾಳ್ಯಂ ಎಂಬ ಹಳ್ಳಿಯ ಗದ್ದೆಗಳಿಗೆ ತೆರಳಿದರು ಮತ್ತು ಅಲ್ಲಿನ ಹಲವಾರು ರೈತರ ಬಳಿ ಈ ಉಪಕರಣವನ್ನು ಉಪಯೋಗಿಸಿ ಅವರ ಗದ್ದೆಗಳಲ್ಲಿ ಸ್ಪ್ರೇ ಮಾಡಲು ಅವಕಾಶ ಕೇಳಿದಾಗ ಅವರು ಹಿಂಜರಿಯದೆ ಒಪ್ಪಿಗೆ ನೀಡಿದರು.
ಈ ಹೆಲಿ ಸ್ಪ್ರೇಯರ್ ಸುಮಾರು 14 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದ್ದು, 10ಲೀಟರ್ನ ಟ್ಯಾಂಕ್ ಪೆಸ್ಟ್ ಕಂಟ್ರೋಲರ್ ಸ್ಪ್ರೇಯರ್ ಅನ್ನು ಹೊರಬಲ್ಲದು ಮತ್ತು ಒಂದು ಗಂಟೆಯಲ್ಲಿ ಸುಮಾರು 6 ರಿಂದ 8 ಎಕರೆಯ ಗದ್ದೆಯನ್ನು ಇದು ಸ್ಪ್ರೇ ಮಾಡಬಲ್ಲದು ಎನ್ನಲಾಗಿದೆ.
ಸೆಲ್ವಕುಮಾರ್ ಮತ್ತು ಸುರೇಶ್ ಅವರು ಪ್ರತ್ಯೇಕವಾಗಿ ಗದ್ದೆಗಳಲ್ಲಿನ ಕೀಟಗಳನ್ನು ಸಾಯಿಸಲು ಸುಡು ಬಿಸಿಲಿನಲ್ಲಿ ಪೆಸ್ಟ್ ಕಂಟ್ರೋಲರ್ ಅನ್ನು ಸ್ಪ್ರೇ ಮಾಡಿ ಪ್ರಾಣ ಕಳೆದುಕೊಳ್ಳುತ್ತಿರುವ ರೈತರಿಗಾಗಿ ತಯಾರಿಸಲಗಿದ್ದು, ಇದನ್ನು ಉಪಯೋಗಿಸಿಕೊಂಡಲ್ಲಿ ರೈತರಿಗೆ ಕೃಷಿಯಲ್ಲಿ ಹೆಚ್ಚು ಸಹಾಯಕಾರಿ ಆಗಲಿದೆ.
MOST READ: ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್ಗಳನ್ನಾಗಿ ಪರಿವರ್ತಿಸಿದ ರೈತರು..!!
ಇದನ್ನು ಬಳಸಿಕೊಳ್ಳುವುದು ಅಷ್ಟು ದುಬಾರಿ ಏನಲ್ಲಾ, ಏಕೆಂದರೆ ಇವರು ಇಂದು ಎಕರೆ ಗದ್ದೆಗೆ ಕೀಟನಾಶಕ ಸ್ಪ್ರೇ ಮಾಡಲು ರೂ.600 ಮಾತ್ರ ಸೆಲ್ವಕುಮಾರ್ ಮತ್ತು ಸುರೇಶ್ ತೆಗೆದುಕೊಳ್ಳುತ್ತಾರೆ.
ಈ ಹೆಲಿ ಸ್ಪ್ರೇಯರ್ನಲ್ಲಿ ಒಂದು ವಿಶೇಷವಾದ ಸಾಫ್ಟ್ ವೇರ್ ಅನ್ನು ಅಳವಡಿಸಲಾಗಿದ್ದು, ಅದರ ಸಹಾದದಿಂದ ಪ್ರತ್ಯೇಕವಾಗಿ ಎಷ್ಟು ಗದ್ದೆಗೆ ಎಷ್ಟು ಸ್ಪ್ರೇ ಮಾಡಬೇಕು, ಎಲ್ಲಿಲ್ಲಿ ಹೇಗೆ ಸ್ಪ್ರೇ ಮಾಡಬೇಕು ಎಂಬ ಮಾಹಿತಗಳನ್ನು ಸೆಟ್ ಮಾಡಿಕೊಳ್ಳಬಹುದಾಗಿದೆ.
ಇದಲ್ಲದೆ ಇದನ್ನು ರಿಮೋಟ್ನಿಂದ ಕೂಡ ಕಂಟ್ರೋಲ್ ಮಾಡಬಹುದಾಗಿದ್ದು, ಆ ಕೀಟನಾಶಕ ಔಷದಿಯ ವಾಸನೆಯು ನಮಗೆ ಬಾರದಿರುವಷ್ಟು ದೂರದಲ್ಲಿ ನಿಂತುಕೊಂಡು ಇದನ್ನು ಆರಾಮಾಗಿ ಆಪರೇಟ್ ಮಾಡಬಹುದು.
ಸೇಲಂನಲ್ಲಿರುವ ಸೆಲ್ವರಾಜ್ ಮತ್ತು ಸುರೇಶ್ ಅವರು ತಯಾರು ಮಾಡಿದ ಈ ಹೆಲಿ-ಡ್ರೋನ್ ಬಗ್ಗೆ ತಿಳಿದುಕೊಂಡು, ಪೆರಂಬೂರ್ ಜಿಲ್ಲೆಯಲ್ಲಿನ ರೈತರು ತಮ್ಮ ಗದ್ದೆಗಳಲ್ಲಿ ಕೂಡಾ ಬಂದು ಸ್ಪ್ರೇ ಮಾಡಲು ಕೇಳಿಕೊಂಡಿದ್ದಾರೆ. ಆದರೆ ಇದರ ಹಿಂದೆ ಒಂದು ದೊಡ್ಡ ಕಥೆಯೆ ಇದೆ.
ಪೆರಂಬೂರ್ ಜಿಲ್ಲೆಯಲ್ಲಿನ ಗದ್ದೆಗಳಲ್ಲಿ ಕೀಟನಾಶಕ ಸ್ಪ್ರೇ ಮಾಡುವಾಗ, ಅದರಿಂದ ಬರುವ ವಾಸನೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಸ್ಥಳದಲ್ಲಿಯೆ ಐವರು ರೈತರು ಮರಣ ಹೊಂದಿದ್ದಾರೆ. ಆದರೂ ಸಹ ಇದಕ್ಕೆ ಬೇರೆ ಪರಿಹಾರವಿಲ್ಲವೆಂದು ತಿಳಿದು, ಅದೇ ಮಾರ್ಗದಲ್ಲಿ ಕೀಟನಾಶಕಗಳನ್ನು ಸ್ಪ್ರೇ ಮಾಡುತ್ತಿದ್ದರು.
ಆದರೆ ಸೆಲ್ವಕುಮಾರ್ ಮತ್ತು ಸುರೇಶ ಅವರ ಈ ಹೆಲಿ-ಸ್ಪ್ರೇಯರ್ ರೈತರಿಗೆ ಉಪಕಾರಿಯಾಗಿದ್ದು ಎಂದು ತಿಳಿದು, ತಮ್ಮ ಜಿಲ್ಲೆಯಲ್ಲಿನ ಗದ್ದೆಗಳಿಗೆ, ಕೀಟನಾಶಕಗಳನ್ನು ಹೆಚ್ಚು ಮಾನವನ ಶ್ರಮವಿಲ್ಲದೇ ಸ್ಪ್ರೇ ಮಾಡಬಹುದು ಎಂದು ತಿಳಿದು, ಇವರನ್ನು ಕರೆಸಿಕೊಳ್ಳುತ್ತಿದ್ದಾರೆ.
ದಿನಬೆಳಗಾದಂತೆ ಗದ್ದೆಗಳಲ್ಲಿ ರೈತರು ಪಡುವ ಕಷ್ಟಗಳನ್ನು ಕಂಡು, ಮತ್ತು ಕೀಟನಾಶಕ ಸ್ಪ್ರೇ ಮಾಡುವ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವವರಿಗೆ ಸಹಾಯಕವಾಗು ಇವರು ಈ ಹೆಲಿ-ಸ್ಪ್ರೇಯರ್ ಅನ್ನು ತಯಾರು ಮಾಡಿದ್ದಾರೆ.
MOST READ: ಜಾವಾ ಹವಾ ಶುರು - ಒಟ್ಟು ಎರಡು ಬೈಕ್ಗಳನ್ನು ಬಿಡುಗಡೆಗೊಳಿಸಿದ ಜಾವಾ
ಹೀಗೆಯೆ ದೇಶದಲ್ಲಿ ಹಲವಾರು ಇಂಜಿನಿಯರ್ಗಳು ಕೆಲಸವಿಲ್ಲವೆಂದು, ಮನೆಯಲ್ಲಿಯೆ ಕೂತು ಒಳ್ಳೆಯ ಕೆಲಸಲಕ್ಕೆ ಮತ್ತು, ಕೆಲಸಕ್ಕಾಗಿ ಬೇರೆ ನಗರಗಳಿಗೆ ತೆರಳುತ್ತಿದ್ದಾರೆ, ಆದರೆ ಸೆಲ್ವ ಮತ್ತು ಸುರೇಶ್ ಅವರು ಅವರಿರುವ ಪ್ರದೇಶದಲ್ಲಿನ ಮತ್ತು ಸುತ್ತುಮುತ್ತಲಿನ ರೈತರಿಗೆ ಸಹಾಯಕವಾಗುವ ಹಾಗೆ ತಮ್ಮ ಬುದ್ಧಿಯನ್ನು ಉಪಯೋಗಿಸಿ ಹೆಲಿ-ಸ್ಪ್ರೇಯರ್ ಅನ್ನು ತಯಾರು ಮಾಡಿರುವುದನ್ನು ನಾವು ಮೆಚ್ಚಲೇಬೇಕು.
Source:Puthiyathalaimurai