ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಭಾರತದಲ್ಲಿ ವ್ಯವಸಾಯ ಪದ್ಧತಿಯು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ತಂತ್ರಜ್ಞಾನಗಳ ಸಹಾಯದಿಂದ ಹೆಚ್ಚಿನ ಇಳುವರಿ ಪಡೆಯಲು ಲಕ್ಷಾಂತರ ರೈತರು ವೈಜ್ಞಾನಿಕ ಬೇಸಾಯದತ್ತ ಮುಖ ಮಾಡಿದ್ದಾರೆ. ಈಗಾಗಲೆ ಐಷಾರಾಮಿ ಕಾರುಗಳನ್ನು ಪರಿವರ್ತಿಸಿಕೊಂಡು ಕೃಷಿ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿರುವ ಹಲವರನ್ನು ನಾವು ಕಂಡಿದ್ದೇವೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ತಮಿಳು ನಾಡಿನ ಪೆರಂಬೂರ್ ಜಿಲ್ಲೆಯಲ್ಲಿನ ಯುವಕರು ಕೃಷಿಯಲ್ಲಿ ಡ್ರೋನ್ ಅನ್ನು ವಿಶೇಷವಾಗಿ ಬಳಕೆ ಮಾಡಿ, ಆದೂನಿಕ ಕೃಷಿಯಲ್ಲಿ ರೈತರಿಗೆ ಸಹಾಯವಾಗಲು ಮತ್ತು ಅವರ ಕೆಲಸವನ್ನು ನೀಗಿಸಲು ಮುಂಗಾಗಿದ್ದಾರೆ. ಹಾಗಾದರೆ ಎಂದಿನ ಲೇಖನದಲ್ಲಿ ಈ ವಿಧ್ಯಾರ್ಥಿಗಳು ಕೃಷಿಯಲ್ಲಿ ಡ್ರೋನ್ ಅನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆಂಬ ಮಾಹಿತಿಯನ್ನು ತಿಳಿಯಿರಿ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ರಿಮೋಟೆಡ್ಲಿ ಪೈಲೊಟೆಡ್ ಏರ್‍‍ಕ್ರಾಫ್ಟ್ ಸಿಸ್ಟಮ್ (ಆರ್‍‍‍ಪಿಎಎಸ್) ಎಂಬ ಹೆಸರನ್ನು ಪಡೆದ ಡ್ರೋನ್‍‍ಗಳನ್ನು ಕೇವಲ ಫೋಟೊಗ್ರಫಿ ಹಾಗು ಚಾಯಗ್ರಹಣಕ್ಕೆ ಮಾತ್ರವಲ್ಲದೇ ಇನ್ನು ಹಣಕಾಸು ವಹಿವಾಟುಗಳಿಗೆ ಬಳಸಬಹುದಾಗಿದೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಪ್ರಪಂಚದ ವಿವಿಧ ಭಾಗಗಳಲ್ಲಿ ಡ್ರೋನ್‍‍ಗಳನ್ನು ಕೃಷಿ ಕಾರ್ಯಕ್ಕಾಗಿ, ಭದ್ರತೆಗಾಗಿ, ಸುರಕ್ಷತೆಗಾಗಿ ಮತ್ತು ಕೊರಿಯರ್ ಕೆಲಸಗಳಿಗೆ ಬಳಸುತ್ತಿದ್ದಾರೆ. ಪ್ರಮುಖ ಇ-ಕಾಮರ್ಸ್ ವೆಬ್‍‍ಸೈಟ್‍‍ಗಳು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ಕೊರಿಯರ್ ಮಾಡಲು ಡ್ರೋನ್‍‍ಗಳನ್ನು ಬಳಸುತ್ತಿದ್ದಾರೆ. ಅಷ್ಟೆ ಅಲ್ಲ ಇನ್ನು ಕೆಲವು ಭಾಗಗಳಲ್ಲಿ ಪಿಡ್ಜಾ ಡೆಲಿವರಿಗೆ ಮಾಡಲು ಕೂಡಾ ಇದನ್ನು ಬಳಸುತ್ತಿದ್ದಾರೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಆದರೆ ಸೇಲಂ ಮೂಲದವರಾದ ಇಬ್ಬರು ಇಂಜಿಯರ್‍‍ಗಳು ಡ್ರೋನ್ ಅನ್ನು ಹೆಲಿ-ಸ್ಪ್ರೇಯರ್ ಎಂಬ ಹೆಸರಿನಲ್ಲಿ ಅದಕ್ಕೊಂದು ದೊಡ್ಡ ಗಾತ್ರದ ಟ್ಯಾಂಕ್ ಅನ್ನು ಅಳವಡಿಸಿ ಅದರಲ್ಲಿ ಕೀಟನಾಷಕವನ್ನು ತುಂಬಿ ಸ್ವಯಂಚಾಲಿತವಾಗಿ ಸ್ಪ್ರೇ ಮಾಡಲಿದ್ದು, ಗದ್ದೆಗಳಲ್ಲಿ ರೈತರಿಗೆ ಕಡಿಮೆ ಶ್ರಮವನು ನೀಡುವ ಸಲುವಾಗಿ ಇದನ್ನು ತಯಾರು ಮಾಡಲಾಗಿದೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಸೆಲ್ವ ಕುಮಾರ್ ಮತ್ತು ಸುರೇಶ್ ಎಂಬ ಇಂಜಿನಿಯರ್‍‍‍ಗಳು ಈ ಯೋಜನೆಗೆ ಹೆಲಿ-ಸ್ಪ್ರೇಯರ್ ಎಂದು ಹೆಸರಿಡಲಾಗಿದ್ದು, ಈ ಹೆಲಿ-ಸ್ಪ್ರೇಯರ್ ಹೊಲದಲ್ಲಿರುವ ಕೀಟಗಳನ್ನು ಸಾಯಿಸಲು ರಿಮೋಟ್ ಕಂಟ್ರೋಲ್‍ನಿಂದ ಮನುಷ್ಯರ ಸಹಾಯವಿಲ್ಲದೆ ಸ್ಪ್ರೇ ಮಾಡಲಾಗುತ್ತದೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಈ ಹೆಲಿ-ಸ್ಪ್ರೇಯರ್ ಅನ್ನು ಪರೀಕ್ಷಿಸಲು ಪೆರಂಬೂರ್ ಜಿಲ್ಲೆಯಲ್ಲಿನ ರಾಜಪಾಳ್ಯಂ ಎಂಬ ಹಳ್ಳಿಯ ಗದ್ದೆಗಳಿಗೆ ತೆರಳಿದರು ಮತ್ತು ಅಲ್ಲಿನ ಹಲವಾರು ರೈತರ ಬಳಿ ಈ ಉಪಕರಣವನ್ನು ಉಪಯೋಗಿಸಿ ಅವರ ಗದ್ದೆಗಳಲ್ಲಿ ಸ್ಪ್ರೇ ಮಾಡಲು ಅವಕಾಶ ಕೇಳಿದಾಗ ಅವರು ಹಿಂಜರಿಯದೆ ಒಪ್ಪಿಗೆ ನೀಡಿದರು.

ಈ ಹೆಲಿ ಸ್ಪ್ರೇಯರ್ ಸುಮಾರು 14 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದ್ದು, 10ಲೀಟರ್‍‍ನ ಟ್ಯಾಂಕ್ ಪೆಸ್ಟ್ ಕಂಟ್ರೋಲರ್ ಸ್ಪ್ರೇಯರ್ ಅನ್ನು ಹೊರಬಲ್ಲದು ಮತ್ತು ಒಂದು ಗಂಟೆಯಲ್ಲಿ ಸುಮಾರು 6 ರಿಂದ 8 ಎಕರೆಯ ಗದ್ದೆಯನ್ನು ಇದು ಸ್ಪ್ರೇ ಮಾಡಬಲ್ಲದು ಎನ್ನಲಾಗಿದೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಸೆಲ್ವಕುಮಾರ್ ಮತ್ತು ಸುರೇಶ್ ಅವರು ಪ್ರತ್ಯೇಕವಾಗಿ ಗದ್ದೆಗಳಲ್ಲಿನ ಕೀಟಗಳನ್ನು ಸಾಯಿಸಲು ಸುಡು ಬಿಸಿಲಿನಲ್ಲಿ ಪೆಸ್ಟ್ ಕಂಟ್ರೋಲರ್ ಅನ್ನು ಸ್ಪ್ರೇ ಮಾಡಿ ಪ್ರಾಣ ಕಳೆದುಕೊಳ್ಳುತ್ತಿರುವ ರೈತರಿಗಾಗಿ ತಯಾರಿಸಲಗಿದ್ದು, ಇದನ್ನು ಉಪಯೋಗಿಸಿಕೊಂಡಲ್ಲಿ ರೈತರಿಗೆ ಕೃಷಿಯಲ್ಲಿ ಹೆಚ್ಚು ಸಹಾಯಕಾರಿ ಆಗಲಿದೆ.

MOST READ: ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಇದನ್ನು ಬಳಸಿಕೊಳ್ಳುವುದು ಅಷ್ಟು ದುಬಾರಿ ಏನಲ್ಲಾ, ಏಕೆಂದರೆ ಇವರು ಇಂದು ಎಕರೆ ಗದ್ದೆಗೆ ಕೀಟನಾಶಕ ಸ್ಪ್ರೇ ಮಾಡಲು ರೂ.600 ಮಾತ್ರ ಸೆಲ್ವಕುಮಾರ್ ಮತ್ತು ಸುರೇಶ್ ತೆಗೆದುಕೊಳ್ಳುತ್ತಾರೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಈ ಹೆಲಿ ಸ್ಪ್ರೇಯರ್‍‍ನಲ್ಲಿ ಒಂದು ವಿಶೇಷವಾದ ಸಾಫ್ಟ್ ವೇರ್ ಅನ್ನು ಅಳವಡಿಸಲಾಗಿದ್ದು, ಅದರ ಸಹಾದದಿಂದ ಪ್ರತ್ಯೇಕವಾಗಿ ಎಷ್ಟು ಗದ್ದೆಗೆ ಎಷ್ಟು ಸ್ಪ್ರೇ ಮಾಡಬೇಕು, ಎಲ್ಲಿಲ್ಲಿ ಹೇಗೆ ಸ್ಪ್ರೇ ಮಾಡಬೇಕು ಎಂಬ ಮಾಹಿತಗಳನ್ನು ಸೆಟ್ ಮಾಡಿಕೊಳ್ಳಬಹುದಾಗಿದೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಇದಲ್ಲದೆ ಇದನ್ನು ರಿಮೋಟ್‍ನಿಂದ ಕೂಡ ಕಂಟ್ರೋಲ್ ಮಾಡಬಹುದಾಗಿದ್ದು, ಆ ಕೀಟನಾಶಕ ಔಷದಿಯ ವಾಸನೆಯು ನಮಗೆ ಬಾರದಿರುವಷ್ಟು ದೂರದಲ್ಲಿ ನಿಂತುಕೊಂಡು ಇದನ್ನು ಆರಾಮಾಗಿ ಆಪರೇಟ್ ಮಾಡಬಹುದು.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಸೇಲಂನಲ್ಲಿರುವ ಸೆಲ್ವರಾಜ್ ಮತ್ತು ಸುರೇಶ್ ಅವರು ತಯಾರು ಮಾಡಿದ ಈ ಹೆಲಿ-ಡ್ರೋನ್ ಬಗ್ಗೆ ತಿಳಿದುಕೊಂಡು, ಪೆರಂಬೂರ್ ಜಿಲ್ಲೆಯಲ್ಲಿನ ರೈತರು ತಮ್ಮ ಗದ್ದೆಗಳಲ್ಲಿ ಕೂಡಾ ಬಂದು ಸ್ಪ್ರೇ ಮಾಡಲು ಕೇಳಿಕೊಂಡಿದ್ದಾರೆ. ಆದರೆ ಇದರ ಹಿಂದೆ ಒಂದು ದೊಡ್ಡ ಕಥೆಯೆ ಇದೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಪೆರಂಬೂರ್ ಜಿಲ್ಲೆಯಲ್ಲಿನ ಗದ್ದೆಗಳಲ್ಲಿ ಕೀಟನಾಶಕ ಸ್ಪ್ರೇ ಮಾಡುವಾಗ, ಅದರಿಂದ ಬರುವ ವಾಸನೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಸ್ಥಳದಲ್ಲಿಯೆ ಐವರು ರೈತರು ಮರಣ ಹೊಂದಿದ್ದಾರೆ. ಆದರೂ ಸಹ ಇದಕ್ಕೆ ಬೇರೆ ಪರಿಹಾರವಿಲ್ಲವೆಂದು ತಿಳಿದು, ಅದೇ ಮಾರ್ಗದಲ್ಲಿ ಕೀಟನಾಶಕಗಳನ್ನು ಸ್ಪ್ರೇ ಮಾಡುತ್ತಿದ್ದರು.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಆದರೆ ಸೆಲ್ವಕುಮಾರ್ ಮತ್ತು ಸುರೇಶ ಅವರ ಈ ಹೆಲಿ-ಸ್ಪ್ರೇಯರ್ ರೈತರಿಗೆ ಉಪಕಾರಿಯಾಗಿದ್ದು ಎಂದು ತಿಳಿದು, ತಮ್ಮ ಜಿಲ್ಲೆಯಲ್ಲಿನ ಗದ್ದೆಗಳಿಗೆ, ಕೀಟನಾಶಕಗಳನ್ನು ಹೆಚ್ಚು ಮಾನವನ ಶ್ರಮವಿಲ್ಲದೇ ಸ್ಪ್ರೇ ಮಾಡಬಹುದು ಎಂದು ತಿಳಿದು, ಇವರನ್ನು ಕರೆಸಿಕೊಳ್ಳುತ್ತಿದ್ದಾರೆ.

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ದಿನಬೆಳಗಾದಂತೆ ಗದ್ದೆಗಳಲ್ಲಿ ರೈತರು ಪಡುವ ಕಷ್ಟಗಳನ್ನು ಕಂಡು, ಮತ್ತು ಕೀಟನಾಶಕ ಸ್ಪ್ರೇ ಮಾಡುವ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವವರಿಗೆ ಸಹಾಯಕವಾಗು ಇವರು ಈ ಹೆಲಿ-ಸ್ಪ್ರೇಯರ್ ಅನ್ನು ತಯಾರು ಮಾಡಿದ್ದಾರೆ.

MOST READ: ಜಾವಾ ಹವಾ ಶುರು - ಒಟ್ಟು ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿದ ಜಾವಾ

ಹೊಲದಲ್ಲಿ ರೈತರ ಶ್ರಮ ನೀಗಿಸಲು ಹೊಸ ಟೆಕ್‍ನಿಕ್ ಕಂಡುಹಿಡಿದ ಇಂಜಿನಿಯರ್‍‍‍ಗಳು

ಹೀಗೆಯೆ ದೇಶದಲ್ಲಿ ಹಲವಾರು ಇಂಜಿನಿಯರ್‍‍‍ಗಳು ಕೆಲಸವಿಲ್ಲವೆಂದು, ಮನೆಯಲ್ಲಿಯೆ ಕೂತು ಒಳ್ಳೆಯ ಕೆಲಸಲಕ್ಕೆ ಮತ್ತು, ಕೆಲಸಕ್ಕಾಗಿ ಬೇರೆ ನಗರಗಳಿಗೆ ತೆರಳುತ್ತಿದ್ದಾರೆ, ಆದರೆ ಸೆಲ್ವ ಮತ್ತು ಸುರೇಶ್ ಅವರು ಅವರಿರುವ ಪ್ರದೇಶದಲ್ಲಿನ ಮತ್ತು ಸುತ್ತುಮುತ್ತಲಿನ ರೈತರಿಗೆ ಸಹಾಯಕವಾಗುವ ಹಾಗೆ ತಮ್ಮ ಬುದ್ಧಿಯನ್ನು ಉಪಯೋಗಿಸಿ ಹೆಲಿ-ಸ್ಪ್ರೇಯರ್ ಅನ್ನು ತಯಾರು ಮಾಡಿರುವುದನ್ನು ನಾವು ಮೆಚ್ಚಲೇಬೇಕು.

Source:Puthiyathalaimurai

Most Read Articles

Kannada
Read more on auto news
English summary
Spray the pesticides with heli sprayer in tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X