Just In
- 9 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 10 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 12 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 12 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಹನ ಸವಾರರೇ ಜೋಕೆ, ವಿನಾಕಾರಣ ಹೊರಗೆ ಬಂದರೆ ಸೋಂಕಿತನ ಜೊತೆಗಿರಬೇಕಾದಿತು..!
ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಇಟಲಿ, ಫ್ರಾನ್ಸ್, ಅಮೆರಿಕಾದಂತಹ ದೇಶಗಳು ಈ ಮಹಾಮಾರಿ ವೈರಸ್ನಿಂದ ತತ್ತರಿಸಿ ಹೋಗಿವೆ. ಕರೋನಾ ವೈರಸ್ ಹೆಚ್ಚಿನ ಜನರಿಗೆ ಹರಡದಂತೆ ತಡೆಯುವ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ.
ಜನರ ಚಲನವಲನವನ್ನು ತಡೆಯುವ ಕಾರಣಕ್ಕೆ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಜಾರಿಯಲ್ಲಿದೆ. ಭಾರತದಲ್ಲಿ ಮಾತ್ರವಲ್ಲದೇ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಜನರಿಗೆ ವಿನಾಕಾರಣ ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ.
ಆದರೂ ಜನ ಈ ವೈರಸ್ಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಸುತ್ತಾಡುತ್ತಿದ್ದಾರೆ. ಪೊಲೀಸರು ವಿನಾಕಾರಣ ಹೊರಬರುವ ಜನರಿಗೆ ಲಾಠಿಯ ರುಚಿ ತೋರಿಸುವುದರ ಜೊತೆಗೆ, ಅವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ
ಆದರೆ ತಮಿಳುನಾಡಿನ ತಿರುಪುರದ ಪೊಲೀಸರು ವಿಭಿನ್ನವಾದ ಕ್ರಮಕ್ಕೆ ಕೈಹಾಕಿದ್ದಾರೆ. ವಿನಾಕಾರಣ ಹೊರಬರುವ ಜನರು ಆಂಬ್ಯುಲೆನ್ಸ್ನಲ್ಲಿರುವ ಕರೋನಾ ಸೋಂಕಿತನ ಜೊತೆಗೆ ಒಂದು ಗಂಟೆ ಕಾಲ ಕಳೆಯುವಂತಹ ಶಿಕ್ಷೆ ನೀಡುತ್ತಿದ್ದಾರೆ.
ಮಾರಣಾಂತಿಕ ಕರೋನವೈರಸ್ ಬಗ್ಗೆ ಜಾಗೃತಿ ಮೂಡಿಸಲು ಅವರು ಈ ವಿಲಕ್ಷಣ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಖಾಲಿಯಿರುವ ರಸ್ತೆಯಲ್ಲಿ ಮೂವರು ಯುವಕರು ಸ್ಕೂಟರ್ನಲ್ಲಿ ಟ್ರಿಪಲ್ ರೈಡ್ನಲ್ಲಿ ಬರುತ್ತಾರೆ. ಇವರನ್ನು ಅಡ್ಡಗಟ್ಟುವ ಪೊಲೀಸರು ಅವರನ್ನು ಎಳೆದುಕೊಂಡು ಹೋಗಿ ಆಂಬ್ಯುಲೆನ್ಸ್ ಹತ್ತಿಸುತ್ತಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಆಂಬ್ಯುಲೆನ್ಸ್ನ ಒಳಗೆ ಸ್ಟ್ರೆಚರ್ ಮೇಲೆ ಕರೋನಾ ಸೋಂಕಿತ ವ್ಯಕ್ತಿ ಮಲಗಿರುತ್ತಾನೆ. ಆತನ ಜೊತೆಗಿರಲು ಈ ಮೂವರು ಯುವಕರನ್ನು ಆಂಬ್ಯುಲೆನ್ಸ್ ಒಳಗೆ ಕೂಡಿ ಹಾಕಲಾಗುತ್ತದೆ. ಭಯಭೀತರಾದ ಯುವಕರು ಆಂಬ್ಯುಲೆನ್ಸ್ನಿಂದ ಹೊರಕ್ಕೆ ಹಾರಲು ಯತ್ನಿಸುವುದನ್ನು ಕಾಣಬಹುದು.
ಈ ಮೂವರು, ಕಿಟಕಿಯಿಂದ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿ ನಗು ಬರದೇ ಇರದು. ಫೇಸ್ ಮಾಸ್ಕ್ ಧರಿಸದೇ ವಿನಾಕಾರಣ ರಸ್ತೆಯಲ್ಲಿ ಹೋದರೆ ಏನಾಗಬಹುದು ಎಂಬುದನ್ನು ವಿವರಿಸಲು ಪೊಲೀಸರು ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಈ ಯುವಕರಿಗೆ ಸಾವಿನ ಭಯ ಏನು ಎಂಬುದು ತಿಳಿದು ಬಂದಿದೆ. ಅಂದ ಹಾಗೆ ಈ ಆಂಬ್ಯುಲೆನ್ಸ್ನಲ್ಲಿದಿದ್ದು ನಕಲಿ ಕರೋನಾ ರೋಗಿ. ಸ್ಟ್ರೆಚರ್ ಮೇಲೆ ಇದ್ದ ವ್ಯಕ್ತಿಗೆ ಕರೋನಾ ಸೋಂಕು ಇರಲಿಲ್ಲ.
ವೈರಸ್ ಸೋಂಕು ನಿಜವಾಗಿಯೂ ನಮಗೆ ತಗುಲಿದರೆ, ನಾವು ಎಂತಹ ಕೆಟ್ಟ ಪರಿಸ್ಥಿತಿಗೆ ಹೋಗಬೇಕಾಗುತ್ತದೆ ಎಂಬುದನ್ನು ತಿಳಿಸಲು ತಿರುಪುರ್ ಪೊಲೀಸರು ಈ ಹೊಸ ಟ್ರಿಕ್ ಬಳಸಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಅಗತ್ಯವಿದ್ದಲ್ಲಿ ಮನೆಯಿಂದ ಹೊರಬರುವ ಮೊದಲು ಸೂಕ್ತ ಭದ್ರತೆಗಳೊಂದಿಗೆ ಹೊರಬರುವುದು ಉತ್ತಮ. ತಿರುಪುರ್ ಪೊಲೀಸರ ಈ ವಿಭಿನ್ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ.