Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 2 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 2 hrs ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್
ಕೆಲ ದಿನಗಳ ಹಿಂದೆ ಹೈಸ್ಪೀಡ್ ರೈಲಿನ ಸ್ಥಿರತೆಯನ್ನು ಪರೀಕ್ಷಿಸಲು ಭಾರತೀಯ ರೈಲ್ವೆಯು ರೈಲು ಬೋಗಿಯಲ್ಲಿ ಗಾಜಿನ ಲೋಟದಲ್ಲಿ ನೀರು ತುಂಬಿಸಿ ಪರೀಕ್ಷೆ ನಡೆಸಿತ್ತು. ಪರೀಕ್ಷೆಯನ್ನು ಬೆಂಗಳೂರು - ಮೈಸೂರು ನಡುವಿನ ರೈಲು ಮಾರ್ಗದಲ್ಲಿ ನಡೆಸಲಾಗಿತ್ತು.
ಈ ಪರೀಕ್ಷೆಯಲ್ಲಿ ಗಾಜಿನ ಲೋಟವು ಅಲುಗಾಡಿರಲಿಲ್ಲ. ಜೊತೆಗೆ ಗಾಜಿನ ಲೋಟದ ತುಂಬಾ ಇದ್ದ ನೀರು ಸಹ ಹೊರ ಬಂದಿರಲಿಲ್ಲ. ಈ ಪರೀಕ್ಷೆಯ ವೀಡಿಯೊವನ್ನು ಭಾರತೀಯ ರೈಲ್ವೆ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.
ಈಗ ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೊಸ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ತಡರಾತ್ರಿಯಲ್ಲಿ ರೈಲು ಹಳಿಗಳ ಮೇಲೆ ನಿಂತಿರುವುದನ್ನು ಕಾಣಬಹುದು.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು
ಇದರ ಜೊತೆಗೆ ಕೆಲವು ಆನೆಗಳು ರೈಲ್ವೆ ಹಳಿ ದಾಟುತ್ತಿರುವುದನ್ನು ಸಹ ಕಾಣಬಹುದು. ಈ ಘಟನೆ ಪಶ್ಚಿಮ ಬಂಗಾಳದ ಸಿವೊಕ್-ಗುಲ್ಮಾ ವಿಭಾಗದ ಸಮೀಪದಲ್ಲಿ ನಡೆದಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
ಮೂರು ಆನೆಗಳು ಇದ್ದಕ್ಕಿದ್ದಂತೆ ರೈಲಿನ ಮುಂದೆ ಬರುತ್ತವೆ. ಈ ಕಾರಣಕ್ಕೆ ಲೊಕೊ ಪೈಲಟ್ ರೈಲನ್ನು ನಿಲ್ಲಿಸುತ್ತಾರೆ. ಈ ಮೂರು ಆನೆಗಳಲ್ಲಿ ಒಂದು ಆನೆ ಮರಿಯು ಸೇರಿದೆ. ಇದೇ ಘಟನೆಯ ವೀಡಿಯೊವನ್ನು ಪಿಯೂಷ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್
ವೀಡಿಯೊ ಶೇರ್ ಮಾಡಿರುವ ಪಿಯೂಷ್ ಗೋಯಲ್, ಪಶ್ಚಿಮ ಬಂಗಾಳದ ಸಿವೊಕ್-ಗುಲ್ಮಾ ವಿಭಾಗದ ಕ್ರಾಸ್ ರೈಲು ಹಳಿಗಳಲ್ಲಿ ಮೂರು ಆನೆಗಳ ಜೀವ ಉಳಿಸಲು ಲೊಕೊ ಪೈಲಟ್ ಹಾಗೂ ಸಿಬ್ಬಂದಿಗಳ ಸಮಯಪ್ರಜ್ಞೆ ಹಾಗೂ ತ್ವರಿತ ಕ್ರಮವು ನೆರವಿಗೆ ಬಂದಿದೆ ಎಂದು ಹೇಳಿದ್ದಾರೆ.
ಆನೆಗಳು ಸುರಕ್ಷಿತವಾಗಿ ಇನ್ನೊಂದು ಬದಿಗೆ ಹೋಗುವುದನ್ನು ಕಾಯುತ್ತಾ ರೈಲು ನಿಂತಿದೆ ಎಂದು ಅವರು ಹೇಳಿದ್ದಾರೆ. ಈ ಮೊದಲು ಹೇಳಿದಂತೆ ಬೆಂಗಳೂರು - ಮೈಸೂರು ಮಾರ್ಗದ ರೈಲ್ವೆ ಟ್ರಾಕ್ ನಲ್ಲಿ ರೈಲು ವೇಗವಾಗಿ ಚಲಿಸಿದರೂ ರೈಲಿನ ಬೋಗಿಯೊಳಗಿದ್ದ ಗಾಜಿನ ಲೋಟದಿಂದ ಒಂದು ಹನಿ ನೀರು ಹೊರ ಬಂದಿಲ್ಲ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ
ಗಾಜಿನ ಲೋಟವು ಅಲುಗಾಡದೇ ಇರುವುದು ಹಾಗೂ ಅದರಿಂದ ಒಂದು ಹನಿ ನೀರು ಹೊರ ಬಾರದೇ ಇರುವುದು ರೈಲ್ವೆ ಇಲಾಖೆಗೆ ಬಹಳ ದೊಡ್ಡ ವಿಷಯವೇ ಹೌದು. ಏಕೆಂದರೆ ಭಾರತದ ರೈಲುಗಳು ಹಾಗೂ ರೈಲು ಟ್ರಾಕ್ ಗಳು ಕುಲುಕಾಟಕ್ಕೆ ಹೆಸರುವಾಸಿಯಾಗಿವೆ.
ಈ ವೀಡಿಯೊ ಬಗ್ಗೆ ಟ್ವೀಟ್ ಮಾಡಿದ್ದ ರೈಲ್ವೆ ಇಲಾಖೆ, ಈ ವೀಡಿಯೊ ಭಾರತೀಯ ರೈಲ್ವೆಯು ಟ್ರ್ಯಾಕ್ ಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರೈಲಿನ ಪ್ರಯಾಣವು ಆರಾಮದಾಯಕವಾಗಿರುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿದೆ.