ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!
ಭಾರತದಲ್ಲಿ ಸದ್ಯ ಸಾರಿಗೆ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ಕಾರಣವಾಗುತ್ತಿದ್ದು, ಅದರಲ್ಲೂ ರೈಲ್ವೆ ಸೇವೆಗಳಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವ ಮಟ್ಟಿಗೆ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.

ದೇಶದ ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಸುಲಭಗೊಳಿಸುವ ಸಂಬಂಧ ಬುಲೆಟ್ ಟ್ರೈನ್ ಮತ್ತು ಹೈಪರ್ಲೂಪ್ನಂತಹ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಹಲವು ತಯಾರಿಗಳು ನಡೆದಿದ್ದು, ಇದೀಗ ವಿಶ್ವದ ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆಯು ಭಾರತದಿಂದಲೇ ಆರಂಭವಾಗುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಬಹುನೀರಿಕ್ಷಿತ ಹೈಪರ್ಲೂಪ್ ಸಾರಿಗೆ ಮಾದರಿಯಲ್ಲೇ ಜಗತ್ತಿನ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಜಿಸಲಾಗಿದ್ದು, ಇದು ಜಗತ್ತಿನಲ್ಲಿ ಇದುವರೆಗೆ ನಿರ್ಮಾಣವಾಗಿರುವ ಇತರೆ ಜಲಾಂತರ್ಗಾಮಿ ರೈಲ್ವೆ ಯೋಜನೆಗಳಿಂತ ವಿಭಿನ್ನವಾಗಿದೆ.

ಮುಂಬೈ ಟು ದುಬೈ ನಡುವೆ ಜಲಾಂತರ್ಗಾಮಿ ರೈಲು..!
ಹೌದು, ವಾಣಿಜ್ಯ ನಗರಿ ಮುಂಬೈನಿಂದ ಮರಳುಗಾಡಿನ ಅಚ್ಚರಿ ಎಂದೇ ಖ್ಯಾತಿ ಹೊಂದಿರುವ ದುಬೈ ನಗರಗಳ ಮಧ್ಯೆ ಜಗತ್ತಿನ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಜಿಸಲಾಗಿದ್ದು, ಎಲ್ಲವೂ ಅಂದುಕೊಂಡತೆ ಆದಲ್ಲಿ ಮುಂದಿನ 2019ರ ಆರಂಭದಿಂದಲೇ ಹೊಸ ಯೋಜನೆಗೆ ಚಾಲನೆ ದೊರಲಿದೆ.

ಅಷ್ಟಕ್ಕೂ ಮುಂಬೈ ಟು ದುಬೈ ನಡುವೆ ರೈಲ್ವೆ ಸಂಚಾರ ಹೇಗೆ ಸಾಧ್ಯ ಎನ್ನುವಂತ ಪ್ರಶ್ನೆಗಳು ಮೂಡಬಹುದು. ಆದ್ರೆ ಇದು ಕಷ್ಟವಲ್ಲ. ಬದಲಾಗಿ ಭಾರೀ ವೆಚ್ಚದಾಯಕ ಯೋಜನೆಯಾಗಿದ್ದರೂ ಸಹ ಸಮುದ್ರದಾಳದಲ್ಲಿ ಸಾಗುವ ರೈಲುಗಳ ಸಂಪರ್ಕದಿಂದಾಗಿ ಹಲವಾರು ಲಾಭಗಳಿವೆ ಎನ್ನುವುದನ್ನು ಮರೆಯುವಂತಿಲ್ಲ.

2 ಸಾವಿರ ಕಿ.ಮಿ ಉದ್ದದ ಸಂಚಾರ..!
ದುಬೈ ಮತ್ತು ಮುಂಬೈ ನಡುವಿನ ದೂರ ಭೌಗೋಳಿಕವಾಗಿ 2 ಸಾವಿರ ಕಿ.ಮಿ ಅಂತರವಿದ್ದು, ಹೈಪರ್ಲೂಪ್ ಕೊಳವೆ ಆಕಾರದಲ್ಲೇ ಈ ರೈಲ್ವೆ ಯೋಜನೆ ಕೂಡಾ ನಿರ್ಮಾಣವಾಗಲಿದೆ. ಜೊತೆಗೆ ಸಮುದ್ರದಾಳದಲ್ಲಿ ಆಗುವ ಪ್ರಾಕೃತಿ ವಿಕೋಪಗಳನ್ನು ನಿಭಾಯಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗುತ್ತಿದೆ.

ಹೊಸ ಯೋಜನೆಯ ಕುರಿತಾಗಿ ದುಬೈನಲ್ಲಿ ನಡೆದ ಇಂಡಿಯಾ ಕಾನ್ಕ್ಲೇವ್ ಸಮಾವೇಶದಲ್ಲಿ ಮಾತನಾಡಿದ ನ್ಯಾಷನಲ್ ಅಡ್ವೆಸೈರ್ ಬ್ಯೂರೋ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಸಲಹೆಗಾರರಾಗಿರುವ ಅಬ್ದುಲ್ಲಾ ಅಲ್ಶಹಿ ಅವರು, ಮುಂಬರುವ ದಿನಗಳಲ್ಲಿ ಭಾರತದೊಂದಿಗೆ ನಮ್ಮ ವ್ಯಾಪಾರ ಅಭಿವೃದ್ದಿ ಮತ್ತೊಂದು ಆಯಾಮ ಸಿಗಲಿದೆ ಎಂದಿದ್ದಾರೆ.

ಜೊತೆಗೆ ದುಬೈನಿಂದ ಮುಂಬೈ ನಗರಗಳ ನಡುವಿನ ಜಲಾಂತರ್ಗಾಮಿ ರೈಲ್ವೆ ರೈಲ್ವೆ ಯೋಜನೆಯ ಕಾರ್ಯಸಾಧ್ಯತೆ ಕುರಿತಂತೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲು ಸೂಚಿಸಿರುವ ದುಬೈ ಸರ್ಕಾರವು, ಪ್ರಯಾಣಿಕರ ಸೇವೆಯಷ್ಟೇ ಅಲ್ಲದೆ ವಾಣಿಜ್ಯ ವ್ಯಾಪಾರವನ್ನು ಸಹ ಇದೇ ಮಾರ್ಗದಲ್ಲಿ ಆರಂಭಿಸುವ ಉದ್ದೇಶ ಹೊಂದಿದೆ.

ಪೈಲ್ಲೈನ್ ಮೂಲಕ ತೈಲ ಸರಬರಾಜು ಸೇರಿದಂತೆ ವಾಣಿಜ್ಯ ಸರಕುಗಳ ವಿನಿಯಮಕ್ಕೂ ಒಂದೇ ಮಾರ್ಗವನ್ನು ಬಳಕೆ ಮಾಡಿಕೊಳ್ಳಲಿದ್ದು, ಹೀಗಾಗಿಯೇ ಇದು ವಿಶ್ವದಲ್ಲಿ ಪ್ರಮುಖ ನಗರಗಳನ್ನು ಸಂಪರ್ಕಿಸಲು ನಿರ್ಮಾಣವಾಗುತ್ತಿರುವ ಇತರೆ ಜಲಾಂತರ್ಗಾಮಿ ರೈಲ್ವೆ ಯೋಜನೆಗಳಿಂತ ವಿಭಿನ್ನವಾಗಿವೆ ಎನ್ನಬಹುದು.

ಇನ್ನು ಇದೇ ಮಾದರಿಯ ಯೋಜನೆಯನ್ನು ಈಗಾಗಲೇ ಚೀನಾ ಮತ್ತು ರಷ್ಯಾ ಕೂಡಾ ನಿರ್ಮಾಣ ಮಾಡುವ ಗುರಿಹೊಂದಿದ್ದು, ಯುಎಸ್ಎ ಮತ್ತು ಕೆನಾಡಾ ನಡುವೆಯು ಕೂಡಾ ಜಲಾಂತರ್ಗಾಮಿ ರೈಲ್ವೆ ಯೋಜನೆಗಳು ನಿರ್ಮಾಣ ಹಂತದಲ್ಲಿವೆ.

ಇವುಗಳು ಪ್ರಯಾಣಿಕ ಸೇವೆಗಿಂತ ವಾಣಿಜ್ಯ ವ್ಯಾಪರಕ್ಕೆ ಸಾಕಷ್ಟು ಸಹಕಾರಿಯಾಗಲಿದ್ದು, ವಿಮಾನಯಾನ ಸರಕು ಸಾಗಾಣಿಕೆಗಿಂತಲೂ ಕಡಿಮೆ ವೆಚ್ಚವನ್ನು ಹೊಂದುವುದಲ್ಲದೆ ವಿದೇಶಿ ವಿನಿಯಮ ವಹಿವಾಟು ಕೂಡಾ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಯೋಜನೆಯ ವೆಚ್ಚ
ಜಲಾಂತರ್ಗಾಮಿ ರೈಲ್ವೆ ಯೋಜನೆಯ ಬಜೆಟ್ ಕುರಿತಂತೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಯೋಜನೆಯ ಕಾರ್ಯಸಾಧ್ಯತೆ ಕುರಿತಂತೆ ನಡೆಯಲಿರುವ ಅಧ್ಯಯನ ವೇಳೆ ವೆಚ್ಚದ ಕುರಿತು ಮಾಹಿತಿ ಲಭ್ಯ ವಾಗಲಿದೆ. ಒಂದು ಅಂದಾಜು ಪ್ರಕಾರ, ಕಡಿಮೆ ಅಂದ್ರು 3 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ಬಜೆಟ್ ಬೇಕಾಗಬಹುದು ಎನ್ನಲಾಗಿದೆ.
Picture credit: lilfrizy
MOST READ: ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಮತ್ತೊಂದಡೆ ಗುಜರಾತ್ನ ಅಹಮದಾಬಾದ್ ಮತ್ತು ಮುಂಬಯಿ ನಡುವಿನ ಪ್ರಸ್ತಾಪಿತ ಬುಲೆಟ್ ರೈಲು ಯೋಜನೆ ಭಾರತದಲ್ಲಿ ಹಲವು ಪ್ರಥಮಗಳಿಗೆ ನಾಂದಿ ಹಾಡಲಿದೆ. ದೇಶದಲ್ಲೇ ಮೊದಲ ಬುಲೆಟ್ ರೈಲು ಎಂಬ ಹಿರಿಮೆಯ ಜತೆಗೆ, ಸಮುದ್ರದಾಳದಲ್ಲಿ ಸಂಚರಿಸಲಿರುವ ಭಾರತದ ಚೊಚ್ಚಲ ಜಲಾಂತರ್ಗಾಮಿ ರೈಲಾಗಿ ಇದು ಇತಿಹಾಸ ನಿರ್ಮಿಸಲಿದೆ.

ಒಟ್ಟು 508 ಕಿ.ಮೀ. ಮಾರ್ಗದ ಪೈಕಿ, 21 ಕಿ.ಮೀ ದೂರ ಸಮುದ್ರದಾಳದಲ್ಲಿ ನಿರ್ಮಿಸಲಾಗುವ ಜಲ ಸುರಂಗಮಾರ್ಗದಲ್ಲಿ ಈ ರೈಲು ಚಲಿಸಲಿದೆ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಈ ಯೋಜನೆ ಪೂರ್ಣಗೊಂಡರೆ, ಅಹಮದಾಬಾದ್ ಮತ್ತು ಮುಂಬಯಿ ನಡುವಣ ಪ್ರಯಾಣ ಅವ- ಈಗಿನ 8 ಗಂಟೆಯಿಂದ ಕೇವಲ 2 ಗಂಟೆಗೆ ಇಳಿಯಲಿದೆ. ಗಂಟೆಗೆ 320ರಿಂದ 350 ಕಿ.ಮೀ ವೇಗದಲ್ಲಿ ಬುಲೆಟ್ ಟ್ರೈನ್ ಸಂಚರಿಸಲಿದೆ.

ಒಟ್ಟು 97,636 ಕೋಟಿ ರೂ. ವೆಚ್ಚದ ಈ ಯೋಜನೆಗೆ ಜಪಾನ್ ಶೇ. 81 ರಷ್ಟು ಆರ್ಥಿಕ ನೆರವನ್ನು ಸಾಲದ ರೂಪದಲ್ಲಿ ಒದಗಿಸುತ್ತಿದೆ. ಹೀಗಾಗಿ ಹೊಸ ಯೋಜನೆಯ ಕಾಮಗಾರಿಯು ಆರಂಭವಾಗಲಿದ್ದು, 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.


Click it and Unblock the Notifications








