Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 1 hr ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 1 hr ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 1 hr ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್'ನೊಂದಿಗೆ 1,400 ಕಿ.ಮೀ ದೂರ ಪ್ರಯಾಣಿಸಿದ ಯುವಕ
ಕರೋನಾದಿಂದ ಬಳಲುತ್ತಿರುವ ಸ್ನೇಹಿತನ ಪ್ರಾಣ ಉಳಿಸಲು ಆಕ್ಸಿಜನ್ ಸಿಲಿಂಡರ್ನೊಂದಿಗೆ 1,400 ಕಿ.ಮೀ ಪ್ರಯಾಣಿಸಿದ ಯುವಕನೊಬ್ಬನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೋಯ್ಡಾದ ನಿವಾಸಿ ರಂಜನ್ ಎಂಬಾತ ಕೆಲವು ದಿನಗಳ ಹಿಂದೆ ಕರೋನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಇಲ್ಲದೆ ರಂಜನ್ ಪ್ರಾಣ ಉಳಿಸುವುದು ಕಷ್ಟವೆಂದು ವೈದ್ಯರು ತಿಳಿಸಿದ್ದಾರೆ.
ರಂಜನ್ ಪ್ರಾಣ ಉಳಿಯಬೇಕಾದರೆ ಆದಷ್ಟು ಬೇಗ ಆಕ್ಸಿಜನ್ ವ್ಯವಸ್ಥೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ರಂಜನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಪರದಾಡುತ್ತಿರುವ ಸುದ್ದಿ ಜಾರ್ಖಂಡ್'ನ ಬೊಕಾರೊದಲ್ಲಿರುವ ಆತನ ಸ್ನೇಹಿತ ದೇವೇಂದ್ರನಿಗೆ ತಲುಪಿದೆ.
MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್ಟಿಒ ಫಾರಂಗಳಿವು!
ತನ್ನ ಸ್ನೇಹಿತನ ಜೀವವು ತೊಂದರೆಯಲ್ಲಿದೆ ಎಂಬ ಸುದ್ದಿ ದೇವೇಂದ್ರನಿಗೆ ತಿಳಿದ ತಕ್ಷಣ ಆತ ಆಕ್ಸಿಜನ್ ಸಿಲಿಂಡರ್'ಗಾಗಿ ಹುಡುಕಾಟ ನಡೆಸಿದ್ದಾನೆ. ನೋಯ್ಡಾದಲ್ಲಿ ಆಕ್ಸಿಜನ್ ಸಿಲಿಂಡರ್ ಸಿಗುವುದು ಅಸಾಧ್ಯವೆಂದು ತಿಳಿದು ಬಂದಿದೆ.
ದೇವೇಂದ್ರನಿಗೆ ಬೊಕಾರೊದಲ್ಲಿ ಆಕ್ಸಿಜನ್ ಸಿಲಿಂಡರ್ ದೊರೆತಿದೆ. ಸ್ನೇಹಿತನ ಜೀವ ಉಳಿಸಲು ಮುಂದಾದ ಆತ ತನ್ನ ಕಾರಿನಲ್ಲಿ ಸಿಲಿಂಡರ್ ತೆಗೆದುಕೊಂಡು 1,400 ಕಿ.ಮೀ ಪ್ರಯಾಣಿಸಿ ನೋಯ್ಡಾ ತಲುಪಿದ್ದಾನೆ.
MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು
ದೇವೇಂದ್ರನಿಗೆ ಆಕ್ಸಿಜನ್ ಸಿಲಿಂಡರ್ ಸುಲಭವಾಗಿ ದೊರೆತಿಲ್ಲ. ಆತ ಹಲವಾರು ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಹಾಗೂ ಆಕ್ಸಿಜನ್ ಸಿಲಿಂಡರ್ ಪೂರೈಕೆದಾರರನ್ನು ಸಂಪರ್ಕಿಸಿದ್ದಾನೆ.
ಖಾಲಿ ಸಿಲಿಂಡರ್ ಇಲ್ಲದೆ ಯಾರೊಬ್ಬರು ಆಕ್ಸಿಜನ್ ನೀಡಲು ಸಿದ್ಧರಿರಲಿಲ್ಲ. ಇದರಿಂದ ಧೈರ್ಯ ಕಳೆದುಕೊಳ್ಳದ ದೇವೇಂದ್ರ ತನ್ನ ಪ್ರಯತ್ನವನ್ನು ಮುಂದುವರೆಸಿದ್ದಾನೆ.
MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್
ತನ್ನ ಮತ್ತೊಬ್ಬ ಸ್ನೇಹಿತನ ಸಹಾಯದಿಂದ ಬಿಯಾಡಾದ ಜಾರ್ಖಂಡ್ ಸ್ಟೀಲ್ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸಂಪರ್ಕಿಸಿ, ಅವರಿಗೆ ಸಮಸ್ಯೆಯನ್ನು ತಿಳಿಸಿದ್ದಾನೆ. ಆತನ ಸಮಸ್ಯೆ ಆಲಿಸಿದ ಉತ್ಪಾದನಾ ಘಟಕದವರು ಆಕ್ಸಿಜನ್ ಸಿಲಿಂಡರ್ ನೀಡಲು ಒಪ್ಪಿದ್ದಾರೆ.
ಆದರೆ ಅವರು ಆಕ್ಸಿಜನ್ ಸಿಲಿಂಡರ್ ನೀಡಲು ಭದ್ರತಾ ಹಣ ಜಮಾ ಮಾಡುವಂತೆ ಷರತ್ತು ವಿಧಿಸಿದ್ದಾರೆ. ಷರತ್ತಿಗೆ ಒಪ್ಪಿದ ದೇವೇಂದ್ರ ರೂ.10 ಸಾವಿರ ನೀಡಿ ಜಂಬೋ ಸಿಲಿಂಡರ್ ಪಡೆದಿದ್ದಾನೆ.
MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು
ಇದರಲ್ಲಿ ಆಕ್ಸಿಜನ್ ಬೆಲೆ ರೂ.400ಗಳಾದರೆ, ಸಿಲಿಂಡರ್ ಭದ್ರತಾ ಹಣ ರೂ.9600ಗಳಾಗಿದೆ. ಆಕ್ಸಿಜನ್ ಸಿಲಿಂಡರ್ ಪಡೆದ ನಂತರ ದೇವೇಂದ್ರ ತನ್ನ ಕಾರಿನ ಮೂಲಕ 24 ಗಂಟೆಗಳಲ್ಲಿ ನೋಯ್ಡಾ ತಲುಪಿದ್ದಾನೆ.
ಜಾರ್ಖಂಡ್ ರಾಜ್ಯದ ಗಡಿಯಲ್ಲಿ ಪೊಲೀಸರು ಆತನನ್ನು ತಡೆದು ತಪಾಸಣೆ ನಡೆಸಿದ್ದರು. ಸ್ನೇಹಿತನ ಪ್ರಾಣ ಉಳಿಸುವ ವಿಷಯ ತಿಳಿದ ನಂತರ ಆತನಿಗೆ ತೆರಳಲು ಅನುಮತಿ ನೀಡಿದ್ದಾರೆ. ದೇವೇಂದ್ರ ನೀಡಿದ ಆಕ್ಸಿಜನ್ ಅನ್ನು ರಂಜನ್ಗೆ ನೀಡಲಾಗಿದ್ದು, ನಂತರ ಆತನ ದೇಹದಲ್ಲಿ ಆಕ್ಸಿಜನ್ ಮಟ್ಟ ಏರಿಕೆಯಾಗಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.