Just In
- 50 min ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 1 hr ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 2 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 2 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಸ್ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು
ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಇದೀಗಷ್ಟೇ ನೂತನ ಪಕ್ಷ ಕಟ್ಟಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೆಬ್ಬಿಸಿದ್ದರು.
ಇದಾದ ಬೆನ್ನಲ್ಲೇ ಬಳ್ಳಾರಿ ರೆಡ್ಡಿ ಗಣಿ ಧನಿಗಳ ಚುನಾವಣೆ ಪ್ರಚಾರಕ್ಕೆ ಬಿಸಿ ಮುಟ್ಟಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಜಾರಿ ನಿರ್ದೇಶನಾಲಯಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬಳ್ಳಾರಿ ಗಣಿಧನಿಗಳು ಅಷ್ಟು ಬೇಗ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ.
ಇದರಿಂದಾಗಿ ಚುನಾವಣೆಗೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಿಸ್ಸಾರ್ ಕಾಂಗ್ರೆಸ್ ಎಂಬ ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟಿರುವ ಶ್ರೀರಾಮುಲು ನೂತನ ರಾಜಕೀಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.
ಮೂಲಗಳ ಪ್ರಕಾರ ಶ್ರೀರಾಮುಲು ಅದ್ಧೂರಿ ಪ್ರಚಾರಕ್ಕೆ ಕಾರೊಂದರ ಎಂಟ್ರಿಯಾಗುತ್ತಿದೆ. ಅದು ಅಂತಿಥ ಕಾರಲ್ಲ. ದೇಶದ ಕೆಲವೇ ಕೆಲವು ಗಣ್ಯ ವ್ಯಕ್ತಿಗಳ ಬಳಿಯಿರುವ ದುಬಾರಿ 'ಹಮ್ಮರ್' ಕಾರು. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ಹಾಗೂ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅವರಂತಹ ಸೆಲೆಬ್ರಿಟಿಗಳ ಬಳಿ ಮಾತ್ರ ಹಮ್ಮರ್ ಕಾರಿದೆ.
ಇನ್ನು ಹೆಚ್ಚು ಹೇಳಬೆಂಕೆಂದರೆ ಹಮ್ಮರ್ ಕಾರು ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ. ಇದನ್ನು ಅಲ್ಲಿ ದೂರದ ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಹಮ್ಮರ್ ಕಾರನ್ನು ಪ್ರಚಾರಕ್ಕಾಗಿ ಬಳಸಲು ಶ್ರೀರಾಮುಲುಗೆ ದುಡ್ಡು ಎಲ್ಲಿಂದ ಬಂತು ಎಂಬುದಕ್ಕೆ ಜನಸಾಮಾನ್ಯರು ಉತ್ತರ ನೀಡಬೇಕಾಗಿದೆ.
ಏನೇ ಆದರೂ ಯಡಿಯೂರಪ್ಪ ತಮ್ಮ ಪ್ರಚಾರಕ್ಕೆ ದುಬಾರಿ ಪ್ರಾಡೋ ಕಾರನ್ನು ಬಳಸಬಹುದಾದರೆ ಶ್ರೀರಾಮುಲುಗೆ ಯಾಕೆ ದುಬಾರಿ ಹಮ್ಮರ್ ಬಳಸಬಾರದು? ಈ ಪರಿ ಇದೇ ರೀತಿ ಮುಂದುವರಿದರೆ ಇನ್ನಿತರ ರಾಜಕೀಯ ಪಕ್ಷಗಳ ನಾಯಕರು ಇನ್ಯಾವ ಕಾರು ಬಳಸಲಿದ್ದಾರೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.
ಸದ್ಯ ಹೈದರಾಬಾದ್ನ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಂದ ಶ್ರೀರಾಮುಲು ಅರಿಗೆ ಸ್ಪಷ್ಟ ಸಂದೇಶ ಬಂದಿರುವುದು ನಿಜ. ಇದರಂತೆ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಇನ್ನಷ್ಟು ಚುರುಕು ಮುಟ್ಟಿದೆ.
ಇದೇ
ಸಂದರ್ಭದಲ್ಲಿ
ಶ್ರೀರಾಮುಲು
ತಮ್ಮ
ಪ್ರಚಾರಕ್ಕಾಗಿ
ಹೆಲಿಕಾಪ್ಟರ್ವೊಂದರನ್ನು
ಗುತ್ತಿಗೆ
ಆಧಾರದಲ್ಲಿ
ಪಡೆದುಕೊಂಡಿರುವುದರ
ಬಗ್ಗೆಯೂ
ಮಾಹಿತಿ
ಬಂದಿದೆ.
ಒಟ್ಟಾರೆಯಾಗಿ
ರಾಜ್ಯ
ರಾಜಕೀಯದಲ್ಲಿ
ಏನೆಲ್ಲ
ಬೆಳವಣಿಗೆ
ನಡೆಯಲಿದೆ
ಎಂಬುದಕ್ಕೆ
ಮುಂದಿನ
ದಿನಗಳಲ್ಲಿ
ಉತ್ತರ
ಸಿಗಲಿದೆ.
ಅಂದ ಹಾಗೆ ಹಮ್ಮರ್ ದರ ಎಷ್ಟು ಗೊತ್ತೇ?
ದೆಹಲಿ ಎಕ್ಸ್ ಶೋ ರೂಂಗಳಲ್ಲಿ ಹಮ್ಮರ್ ದರ 40 ಲಕ್ಷ ರೂಪಾಯಿಗಳಿದ್ದು, ಇದು ಆನ್ ರೋಡ್ ತಲುಪುವಾಗ 50 ಲಕ್ಷಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ.
ಎಸ್ಯುವಿ ಟಾಪ್ ಎಂಡ್ ವೆರಿಯಂಟ್ ಕಾರು ಆಗಿರುವ ಹಮ್ಮರ್ ಸದ್ಯ ದೇಶಕ್ಕೆ ಆಮದು ಆಗುತ್ತಿರುವ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ.
ಐಷಾರಾಮಿ ಹಮ್ಮರ್ ಹಲವು ವೆರಿಯಂಟ್ಗಳಲ್ಲಿ ಆಮದಾಗುತ್ತಿದ್ದು, ಈ ಪೈಕಿ ಎಚ್3 ಅತಿ ಜನಪ್ರಿಯವಾಗಿದೆ.
ಹಮ್ಮರ್ ಐಷಾರಾಮಿ ಇಂಟಿರಿಯರ್ ಲುಕ್
ಕರ್ನಾಟಕದ ರಾಜಕೀಯದಲ್ಲಿ ನೂತನ ಬಿರುಗಾಳಿಯೆಬ್ಬಿಸಲಿದೆಯೇ ಬಿಎಸ್ಆರ್ ಕಾಂಗ್ರೆಸ್ ಪಕ್ಷ?
ಶ್ರೀರಾಮುಲು ಬಿಎಸ್ಆರ್ ಪಕ್ಷಕ್ಕೆ 'ಹಮ್ಮರ್' ಬಲ
ಇವನ್ನೂ ಓದಿ: ಪ್ರಾಡೋ ಕಾರಲ್ಲಿ ಬಿಎಸ್ವೈ ರೋಡ್ ಶೋ