ತೆರಿಗೆ ದುಡ್ಡಿನಿಂದ ದುಬಾರಿ ಕಾರು ಖರೀದಿಸಿ ಎಂದ ಸಿಎಂ
ಕಾಂಗ್ರೆಸ್, ಬಿಜೆಪಿ, ಬಿಎಸ್ ಪಿ ಮತ್ತು ರಾಷ್ಟ್ರೀಯ ಲೋಕ್ ದಳದ ಶಾಸಕರು ಮತ್ತು ಸಂಸದರು ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ನಿಧಿಯಿಂದ ಕಾರು ಖರೀದಿಸುವುದಿಲ್ಲವೆಂದು ಹೇಳಿದ್ದಾರೆ. ಎಲ್ಲಾದರೂ ರಾಜ್ಯದ 403 ಎಂಎಲ್ಎಗಳು ಮತ್ತು 100 ಎಂಎಲ್ ಸಿಗಳು 20 ಲಕ್ಷ ರುಪಾಯಿಯ ವಾಹನ ಖರೀದಿಸಿದರೆ ನೂರು ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಹಣ ಬೇಕಾಗುತ್ತದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸುತ್ತಾಡಿ ಪ್ರಗತಿ ಕಾರ್ಯ ನಡೆಸಲು ಕಾರು ಅಗತ್ಯವಿದೆ ಎನ್ನುವ ಮೂಲಕ ತನ್ನ ನಿರ್ಧಾರವನ್ನು ಅಖಿಲೇಶ್ ಸಮರ್ಥಿಸಿಕೊಂಡಿದ್ದಾರೆ. "ಇದರಿಂದ ಅವರ ದಕ್ಷತೆ ಹೆಚ್ಚಾಗಲಿದೆ. ಐದು ವರ್ಷದ ಅಧಿಕಾರವಧಿ ಮುಗಿದ ನಂತರ ಈ ಕಾರನ್ನು ಸರಕಾರಕ್ಕೆ ಹಿಂತುರುಗಿಸಬಹುದು ಅಥವಾ ಮರುಮಾರಾಟದ ಮೌಲ್ಯದಷ್ಟು ಹಣ ನೀಡಬಹುದು" ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ. ಕಾರಿನ ಮೇಂಟೆನ್ಸ್ ವೆಚ್ಚ ಸರಕಾರ ನೀಡುವುದಿಲ್ಲವೆಂದು ಅವರು ಹೇಳಿದ್ದಾರೆ.
ಅಭಿವೃದ್ಧಿಕಾರ್ಯಕ್ಕೆ ವಿನಿಯೋಗಿಸಬೇಕಾದ ಹಣವನ್ನು ದುಬಾರಿ ಕಾರು ಖರೀದಿಗೆ ಬಳಸುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷಮಿ ಕಾಂತ್ ಬಾಜ್ ಪೈ ವಿರೋಧಿಸಿದ್ದಾರೆ. "ಇದಕ್ಕಿಂತ ಕಾರು ಖರೀದಿಸಲು ಬಡ್ಡಿರಹಿತ ಸಾಲ ನೀಡುವುದು ಸೂಕ್ತ" ಎಂಬ ಐಡಿಯಾ ನೀಡಿದ್ದಾರೆ. "ಇದು ನ್ಯಾಯಸಮ್ಮತವಲ್ಲ"ವೆಂದು ಅಖಿಲೇಶ್ ನಿರ್ಧಾರವನ್ನು ಎಸ್ ಪಿ ನಾಯಕ ಅಜಂ ಖಾನ್ ವಿರೋಧಿಸಿದ್ದಾರೆ.
ಬಹುಶಃ ಉತ್ತರ ಪ್ರದೇಶ ಸರಕಾರದ ಈ ನಿರ್ಧಾರ ಮಾರಾಟ ಇಳಿಕೆಯಿಂದ ಕಂಗಲಾಗಿರುವ ದೇಶದ ಕಾರು ಕಂಪನಿಗಳಿಗೆ ಖುಷಿ ನೀಡಬಹುದು. ಅಖಿಲೇಶ್ ಸೂಚನೆಯನ್ನು ಸಮರ್ಥವಾಗಿ ಪಾಲಿಸುವ ಉತ್ತರ ಪ್ರದೇಶದ ಸಚಿವರು ಮತ್ತು ಸಂಸದರಿಗೆ 20 ಲಕ್ಷ ರುಪಾಯಿಗಿಂತ ಅಗ್ಗದ ಯಾವ ಕಾರು ಸೂಕ್ತ ಎಂಬ ಮಾಹಿತಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ನೀಡುತ್ತಿದೆ.
ಉತ್ತರ ಪ್ರದೇಶದ ಸಚಿವ/ಸಂಸದರು ಮಾತ್ರವಲ್ಲದೇ ಈ ರೇಂಜಿನಲ್ಲಿ ಕಾರು ಖರೀದಿಸುವ ಸಮಸ್ತರಿಗೂ ಇದು ಅನುಕೂಲವಾದೀತು. ಮುಂದಿನ ಪುಟಕ್ಕೆ ಸುಸ್ವಾಗತ.


Click it and Unblock the Notifications









