ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್ ಚೀತಾ'
ಮೈಸೂರು ನಗರದಲ್ಲಿ ಸಂಚಾರ ನಿಯಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಇವುಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಮಾಡುವ ಉದ್ದೇಶದಿಂದ ಆರಂಭಿಸಿದ ‘ಆಪರೇಷನ್ ಚೀತಾ’ದ ಕಾರ್ಯಾಚರಣೆ ಬಗ್ಗೆ ಒಂದಿಷ್ಟು ಮಾಹಿತಿ ಹೊರ ಬಂದಿದೆ.
ಮೈಸೂರು ನಗರದಲ್ಲಿ ಸಂಚಾರ ನಿಯಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಇವುಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಮಾಡುವ ಉದ್ದೇಶದಿಂದ ಆರಂಭಿಸಿದ 'ಆಪರೇಷನ್ ಚೀತಾ'ದ ಕಾರ್ಯಾಚರಣೆ ಬಗ್ಗೆ ಒಂದಿಷ್ಟು ಮಾಹಿತಿ ಹೊರ ಬಂದಿದೆ.

ಮೈಸೂರು ನಗರ ಪೊಲೀಸರ 'ಆಪರೇಷನ್ ಚೀತಾ' ಭರ್ಜರಿಯಾಗಿಯೇ ಕಾರ್ಯಾರಂಭ ಮಾಡಿದೆ ಎನ್ನಬಹುದು. ಮೊನ್ನೆ ಶನಿವಾರದ ಒಂದೇ ದಿನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 15 ಸಾವಿರ ವಾಹನಗಳ ತಪಾಸಣೆ ನಡೆಸಿ, ಸರಿ ಸುಮಾರು 4418 ಪ್ರಕರಣ ದಾಖಲಿಸಿದ್ದಾರೆ ಎಂಬ ಬೆಚ್ಚಿ ಬೀಳಿಸುವ ವಿಚಾರ ಬಂದಿದೆ.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ‘ಆಪರೇಷನ್ ಚೀತಾ'ದ ಕಾರ್ಯಾಚರಣೆಯಿಂದಾಗಿ ಶನಿವಾರ ಮಧ್ಯಾಹ್ನ 12ರಿಂದ 2.30ರವರೆಗೆ ನೆಡೆಸಿದ್ದು, ಸಂಚಾರ ಉಲ್ಲಂಘನೆ ಮಾಡಿದವರ ಪೈಕಿ 4418 ಪ್ರಕರಣ ದಾಖಲು ಮಾಡಿ 5,02,400 ರೂ. ದಂಡ ಸಂಗ್ರಹ ಮಾಡಿದೆ.
Recommended Video


ಕೆಲವು ದಿನಗಳಿಂದ 'ಆಪರೇಷನ್ ಚೀತಾ' ಕಾರ್ಯಾಚರಣೆಗೆ ಪೊಲೀಸರು ಚಾಲನೆ ನೀಡಿದ್ದು, ಲಕ್ಷ್ಮಿಪುರಂ ಪೊಲೀಸ್ ಠಾಣೆ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಮ್ಮೆಲೇ ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸಿದರು.

ಈ ಹಿಂದೆಯೇ ನಗರ ಪೊಲೀಸ್ ಆಯುಕ್ತರವರಾದ ಡಾ. ಎ ಸುಬ್ರಮಣ್ಯೇಶ್ವರ ರಾವ್ ಅವರು ಸಂಚಾರಿ ನಿಯಮ ಪಾಲನೆ ಮಾಡುವಂತೆ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಒಮ್ಮೆ ಆಪರೇಷನ್ ಚೀತಾ ಕಾರ್ಯಾಚರಣೆ ನೆಡೆಸಿದ್ದರು.

ಮತ್ತೆ ಶನಿವಾರ ಮೈಸೂರು ನಗರದಲ್ಲಿ ಆರಂಭಿಸಲಾಗಿದ್ದು, ಸಂಜೆ 12ರಿಂದ 2.30ರವರೆಗೆ ಕೇವಲ ಮೂರು ಗಂಟೆಯಲ್ಲಿ ನಿಯಮ ಪಾಲಿಸದ, ನಿಯಮ ಉಲ್ಲಂಘಿಸಿದ 4418 ಪ್ರಕರಣಗಳು ಬೆಳಕಿಗೆ ಬಂದಿರುವುದು ಅಚ್ಚರಿ ಮೂಡಿಸಿದೆ.
Trending Stories on Kannada drivespark
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಈ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಮೇಲೆ ಒಟ್ಟು 108 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ. ಈ ವಾಹನದ ಮಾಲೀಕ ಯಾವುದೇ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಬಗ್ಗೆ ತಿಳಿದು ಬಂದ ನಂತರ ಈತನಿಗೆ ಒಟ್ಟು 10,800 ರೂ ದಂಡ ವಿಧಿಸಲಾಗಿದೆ.

"ಅನಿರೀಕ್ಷಿತ ಮತ್ತು ತೀವ್ರಕರವಾದ ಕಾರ್ಯಾಚರಣೆಯನ್ನು ಯಾವುದೇ ದಿನ ಮತ್ತು ದಿನದ 24 ಗಂಟೆಗಳಲ್ಲಿ, ಯಾವುದೇ ಸಮಯದಲ್ಲಿ ಹಮ್ಮಿಕೊಳ್ಳಲಾಗುವುದು. ಹೀಗಾಗಿ, ತಪಾಸಣೆಯ ವೇಳೆ ವಾಹನದ ಎಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು" ಎಂದು ಪೊಲೀಸ್ ಕಮಿಷನರ್ ಡಾ. ಎ.ಸುಬ್ರಮಣ್ಯೇಶ್ವರರಾವ್ ಮನವಿ ಮಾಡಿದ್ದಾರೆ.
Trending On DriveSpark Kannada:
ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ಡಿಸೆಂಬರ್ 1ರ ನಂತರ ಟೋಲ್ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !!


Click it and Unblock the Notifications