Just In
- 10 min ago Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- 13 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 14 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 15 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
Don't Miss!
- Sports Virat Kohli vs Gautam Gambhir: ವಿರಾಟ್, ಗೌತಮ್ ನಡುವೆ ಬಿರುಕು ಹುಟ್ಟಲು ಕಾರವೇನು? ಇಲ್ಲಿದೆ ಮಾಹಿತಿ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕದಲ್ಲಿ ಕ್ಯಾಬ್ ಸಂಸ್ಥೆಗಳಿಗೆ ಬರಲಿದೆ ಹೊಸ ರೂಲ್ಸ್
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ 2010ರಲ್ಲಿ ಭವಿಶ್ ಅಗರ್ವಾಲ್ರವರು ಒಲಾ ಕಂಪನಿಯನ್ನು ಸ್ಥಾಪಿಸಿದರು. ಇದರ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಒಲಾ ವಾಹನಗಳನ್ನು ಟ್ಯಾಕ್ಸಿಯಾಗಿ, ವಸ್ತುಗಳ ಡೆಲಿವರಿಗಾಗಿ ಹಾಗೂ ಫುಡ್ ಡೆಲಿವರಿಗಾಗಿ ಬಳಸಲಾಗುತ್ತಿದೆ.
ಮತ್ತೊಂದು ಕ್ಯಾಬ್ ಸೇವಾ ಸಂಸ್ಥೆಯಾದ ಅಮೇರಿಕಾದ ಸ್ಯಾಸ್ ಫ್ರಾನ್ಸಿಸ್ಕೊ ಮೂಲದ ಉಬರ್ ಕಂಪನಿಯನ್ನು 2009ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯು ಭಾರತವೂ ಸೇರಿದಂತೆ ಪ್ರಪಂಚದ 63 ದೇಶಗಳಲ್ಲಿ ಹಾಗೂ 785 ಮೆಟ್ರೊಪಾಲಿಟನ್ ನಗರಗಳಲ್ಲಿ ಸೇವೆಯನ್ನು ನೀಡುತ್ತಿದೆ.
ಈ ಎರಡೂ ಕಂಪನಿಗಳ ಸೇವೆಯನ್ನು ಈ ಕಂಪನಿಗಳ ವೆಬ್ಸೈಟ್ ಮೂಲಕ ಹಾಗೂ ಆಪ್ ಮೂಲಕ ಪಡೆಯಬಹುದು. ಕೆಲವೊಮ್ಮೆ ಕೈಗೆಟಕುವ ದರದಲ್ಲಿ ಇನ್ನೂ ಕೆಲವೊಮ್ಮೆ ದುಬಾರಿ ಬೆಲೆಯನ್ನು ವಿಧಿಸಿ ಸೇವೆಯನ್ನು ಒದಗಿಸುತ್ತಿವೆ.
ಆದರೆ ಈ ಕಂಪನಿಗಳಲ್ಲಿನ ನೌಕರರಿಗೆ ಸರಿಯಾದ ವೇತನ ನೀಡುತ್ತಿಲ್ಲ ಹಾಗೂ ಅವರುಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬುದು ಈ ಎರಡೂ ಕಂಪನಿಗಳ ಮೇಲಿರುವ ದೂರು. ಡೆಲಿವರಿ ಬಾಯ್ ಹಾಗೂ ಕ್ಯಾಬ್ ಡ್ರೈವರ್ ಸೇರಿದಂತೆ ಈ ಕಂಪನಿಗಳಲ್ಲಿರುವ ಸಾವಿರಾರು ನೌಕರರ ಹಿತ ಕಾಯುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈ ಕಂಪನಿಗಳಿಗಾಗಿ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದೆ.
ಇತ್ತೀಚಿಗೆ ಕರ್ನಾಟಕದ ಕಾನೂನು ಸಚಿವರಾದ ಎಸ್ ಸುರೇಶ್ ಕುಮಾರ್ರವರು ಕಾನೂನು ಇಲಾಖೆಯ ಅಧಿಕಾರಿಗಳ ಜೊತೆ ಸೇರಿ, ಕಂಪನಿಗಳ ಪ್ರತಿನಿಧಿಗಳು ಹಾಗೂ ನೌಕರರ ಜೊತೆಗೆ ಸುದೀರ್ಘ ಅವಧಿಯವರೆಗೆ ಮಾತುಕತೆ ನಡೆಸಿದ್ದರು.
ಈ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್ರವರು, ಕಂಪನಿಗಳು ಡೆಲಿವರಿ ಬಾಯ್ಗಳು ಹಾಗೂ ಕ್ಯಾಬ್ ಚಾಲಕರು ತಮ್ಮ ಪಾಲುದಾರರು ಎಂದು ಹೇಳಿವೆ. ಆದರೆ ಡೆಲಿವರಿ ಬಾಯ್ಗಳು ಹಾಗೂ ಕ್ಯಾಬ್ ಚಾಲಕರ ಪ್ರಕಾರ ಅವರು ಉದ್ಯೋಗಿಗಳಿಗಿಂತ ಹೆಚ್ಚೇನೂ ಅಲ್ಲ.
ಇದರ ಪರಿಣಾಮವಾಗಿ, ನಮ್ಮ ಉಪ ಕಾರ್ಮಿಕ ಆಯುಕ್ತ ಬಾಲಕೃಷ್ಣರವರಿಗೆ ಎರಡೂ ಕಡೆಯವರೊಂದಿಗೆ ಚರ್ಚಿಸಿ ಇಂದಿನಿಂದ ಒಂದು ತಿಂಗಳೊಳಗೆ ವಿವರವಾದ ವರದಿಯನ್ನು ನೀಡುವಂತೆ ನಿರ್ದೇಶನ ನೀಡಿದ್ದೇನೆ. ಈ ವರದಿಯ ಆಧಾರದ ಮೇಲೆ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ. ನಂತರ ಈ ಕಂಪನಿಗಳಿಗಾಗಿ ಕಾರ್ಮಿಕ ಕಾನೂನನ್ನು ರೂಪಿಸಲಿದೆ ಎಂದು ಹೇಳಿದರು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!
ಈ ಸಭೆಯಲ್ಲಿ ಭಾಗವಹಿಸಿದ್ದ ಒಲಾ ಹಾಗೂ ಉಬರ್ ಕಂಪನಿಯ ನೌಕರರು, ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಸೌಲಭ್ಯ ಹೊಂದಿರುವ ಜೊಮ್ಯಾಟೊ ಹಾಗೂ ಸ್ವಿಗ್ಗಿಯಂತಹ ಕಂಪನಿಗಳ ನೌಕರರ ನಿರ್ಧಾರವನ್ನು ವಿರೋಧಿಸಿದರು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಕಾರ್ಮಿಕ ಮುಖಂಡರಾದ ಕುಮಾರ್ರವರು ಮಾತನಾಡಿ, ಈ ಕಂಪನಿಗಳು ಡೆಲಿವರಿ ಬಾಯ್ಗಳಿಗೆ ಪ್ರತಿ ತಿಂಗಳು ರೂ.25,000 ಸಂಬಳ ಹಾಗೂ ಇನ್ಶೂರೆನ್ಸ್ ಆಗಿ ರೂ.6 ಲಕ್ಷ ನೀಡಲಾಗುವುದೆಂಬ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ, ಮೊಬೈಲ್ಗಳ ಮೂಲಕ ಹರಡುತ್ತಿವೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!
ಈಗ ಡೆಲಿವರಿ ಬಾಯ್ಗಳು ತಮ್ಮ ಕಂಪನಿಯ ಪಾಲುದಾರರು ಎಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಮಾತನ್ನು ವಿರೋಧಿಸಿ ಮಾತನಾಡಿದ ಸ್ವಿಗ್ಗಿ ಕಂಪನಿಯ ಕಾನೂನು ಪ್ರತಿನಿಧಿ, ವೈದ್ಯಕೀಯ ಉದ್ದೇಶಗಳಿಗಾಗಿ ರೂ.1 ಲಕ್ಷ ಹಾಗೂ ಅಪಘಾತಗಳಿಗಾಗಿ ರೂ.5 ಲಕ್ಷವನ್ನು ಪ್ರತಿ ಡೆಲಿವರಿ ಪಾಲುದಾರರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ನಮ್ಮ ಡೆಲಿವರಿ ಪಾಲುದಾರರು ಸ್ವಿಗ್ಗಿಯನ್ನು ಹೊರತುಪಡಿಸಿ ಬೇರೆ ಕಡೆ ಕೆಲಸ ಮಾಡಬಹುದಾಗಿದೆ. ನಮ್ಮ ಪಾಲುದಾರರಲ್ಲಿ ಬಹುಪಾಲು ಜನರು ಕಾಲೇಜು ವಿದ್ಯಾರ್ಥಿಗಳು ಹಾಗೂ ಹೆಚ್ಚುವರಿ ಆದಾಯವನ್ನು ಗಳಿಸಲು ಬರುವವರಾಗಿದ್ದಾರೆ ಎಂದು ಕಂಪನಿಯ ಕಾನೂನು ತಂಡದ ಪಾಂಡುರಂಗರವರು ಹೇಳಿದರು.
ಇದರ ಬಗ್ಗೆ ಮಾತನಾಡಿದ ಮತ್ತೊಬ್ಬ ಕಾರ್ಮಿಕ ಮುಖಂಡರು ಕಂಪನಿಯ ಮೌಲ್ಯಮಾಪನವು ತಪ್ಪಾಗಿದೆ. ಕಂಪನಿಗಳು ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ದೋಷಪೂರಿತ ಪ್ಯಾರೆಟೋ ಮಾದರಿಯನ್ನು ಬಳಸುತ್ತಿವೆ ಎಂದು ಹೇಳಿದರು.
ಈ ಕಂಪನಿಗಳಲ್ಲಿರುವ ಹೆಚ್ಚಿನ ಉದ್ಯೋಗಿಗಳು / ಪಾಲುದಾರರು ಪುಡ್ ಡೆಲಿವರಿಯಿಂದ ಬರುವ ಹಣದಿಂದ ಜೀವನ ನಡೆಸುವವರು. ಕಂಪನಿಗಳು ಪ್ರತಿ ಫುಡ್ ಆರ್ಡರ್ ಮೇಲೆ ಇಂತಿಷ್ಟು ಪ್ರೋತ್ಸಾಹ ಧನವನ್ನು ನೀಡುತ್ತವೆ.
ಈ ಕಾರಣಕ್ಕೆ ಡೆಲಿವರಿ ಬಾಯ್ಗಳು ಹೆಚ್ಚು ಮೊತ್ತವನ್ನು ಗಳಿಸಲು ಹೆಚ್ಚು ಫುಡ್ ಆರ್ಡರ್ಗಳನ್ನು ಡೆಲಿವರಿ ಮಾಡುತ್ತಿದ್ದಾರೆ. ಪ್ರತಿ ಫುಡ್ ಡೆಲಿವರಿಯ ಮೇಲೆ ರೂ.12ರಿಂದ ರೂ.15 ಪಡೆಯುತ್ತಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಕಾರ್ಮಿಕ ಮುಖಂಡರು ಹೇಳಿದರು.