ರೈತರ ಪ್ರತಿಭಟನೆಯಿಂದಾಗಿ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ದೆಹಲಿ - ನೋಯ್ಡಾ ಗಡಿಯಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರೀಯ ಹೆದ್ದಾರಿ 44 ಅನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಇದರಿಂದಾಗಿ ದೆಹಲಿಯಲ್ಲಿ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ದೆಹಲಿಯ ಜೊತೆಗೆ ಸಂಪರ್ಕ ಸಾಧಿಸುತ್ತಿದ್ದ ಹರಿಯಾಣ ಹಾಗೂ ಉತ್ತರ ಪ್ರದೇಶಗಳ ಸಂಪರ್ಕವು ಸ್ಥಗಿತಗೊಂಡಿದೆ. ದೆಹಲಿ ಸಂಚಾರ ಪೊಲೀಸರು ವಾಹನ ಸವಾರರಿಗೆ ಟ್ವಿಟರ್‌ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಸಿಂಧು, ಲ್ಯಾಂಪೂರ್, ಸಫಿಯಾಬಾದ್, ಪಿಯಾವೊ ಮಣಿಯಾರಿ ಹಾಗೂ ಸಬೋಲಿ ಗಡಿಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ಟ್ವೀಟ್ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ರಾಷ್ಟ್ರೀಯ ಹೆದ್ದಾರಿ 44 ಅನ್ನು ಎರಡೂ ಕಡೆಯಿಂದ ಮುಚ್ಚಲಾಗಿರುವ ಕಾರಣಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ದೆಹಲಿಯಿಂದ ಭೋಪ್ರಾ, ಅಪ್ಸರಾ ಬಾರ್ಡರ್ ಹಾಗೂ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿ 8 ಅನ್ನು ಬಳಸುವಂತೆ ಪೊಲೀಸರು ಟ್ವೀಟ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ಮುಕರ್ಬಾ ಹಾಗೂ ಜಿಟಿಕೆ ರಸ್ತೆಯಲ್ಲಿನ ಸಂಚಾರವನ್ನು ತಿರುಗಿಸಲಾಗಿದ್ದು, ಮುಕರ್ಬಾ, ಜಿಟಿಕೆ, ಔಟರ್ ರಿಂಗ್ ರೋಡ್ ಹಾಗೂ ಎನ್ಎಚ್ 44ರಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ಟಿಕ್ರಿ ಹಾಗೂ ಜರೋಡಾ ಗಡಿಯನ್ನು ಮುಚ್ಚಲಾಗಿದ್ದು, ಬದುಸರಾಯ್ ಗಡಿಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಜಟಿಕರಾ ಮೂಲಕ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ಹರಿಯಾಣದ ಕಡೆಗೆ ಸಾಗುವವರು ಧನ್ಸಾ, ದೌರಾಲಾ, ಕಪಶೇರಾ, ರಾಜೋಖರಿ ರಾಷ್ಟ್ರೀಯ ಹೆದ್ದಾರಿ 8, ಬಿಜ್ವಾಸನ್ / ಬಜ್ಘೇರಾ, ಪಾಲಂ ವಿಹಾರ್ ಹಾಗೂ ದುಂಡಹೇರಾ ಗಡಿಯ ಮೂಲಕ ಸಾಗಬಹುದು.

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ಚಿಲ್ಲಾ ಬಾರ್ಡರ್ ಬಳಿಯ ನೋಯ್ಡಾ ಲಿಂಕ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಗೌತಮ್ ಬುದ್ಧ ನಗರದ ಗೇಟ್ ಬಳಿ ರೈತರ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಜನರು ನೋಯ್ಡಾ ಲಿಂಕ್ ರಸ್ತೆಯನ್ನು ತಪ್ಪಿಸಿ ಡಿಎನ್‌ಡಿ ಮೂಲಕ ದೆಹಲಿಗೆ ಬರಲು ಸೂಚಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರೈತರ ಪ್ರತಿಭಟನೆಗೆ ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆ

ಪ್ರತಿಭಟನೆಯಿಂದಾಗಿ ಗಾಜಿಪುರ ಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ -24ರಲ್ಲಿ ಸಂಚಾರ ಸ್ಥಗಿತಗೊಂಡಿರುವುದರಿಂದ, ಗಾಜಿಯಾಬಾದ್‌ನಿಂದ ದೆಹಲಿಗೆ ಬರುವ ಪ್ರಯಾಣಿಕರಿಗೆ ಅಪ್ಸರಾ ಅಥವಾ ಭೋಪ್ರಾ ಗಡಿ ಅಥವಾ ದೆಹಲಿ-ನೋಯ್ಡಾ ಡೈರೆಕ್ಟ್ ಎಕ್ಸ್‌ಪ್ರೆಸ್‌ವೇ ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

Most Read Articles

Kannada
English summary
Farmers protest forces Delhi police to use alternate route. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X