ಇನ್ನಷ್ಟು ಹತ್ತಿರವಾಯ್ತು ಹೆಲಿಕಾಪ್ಟರ್ ಪ್ರಯಾಣ
ಪವನ್ ಹನ್ಸ್ ಲಿಮಿಟೆಡ್, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಉತ್ತರಾಖಂಡದಲ್ಲಿ ಕೈಗೆಟುಕುವ ಬೆಲೆಯಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ. ಈ ಹೆಲಿಕಾಪ್ಟರ್ ಸೇವೆಯು ಡೆಹ್ರಾಡೂನ್, ನ್ಯೂ ಟೆಹ್ರಿ, ಶ್ರೀನಗರ ಹಾಗೂ ಗೌಚರ್ ನಡುವೆ ಸಂಪರ್ಕ ಕಲ್ಪಿಸುತ್ತದೆ.

ಈ ಹೆಲಿಕಾಪ್ಟರ್ ವಾರದಲ್ಲಿ 3 ದಿನ ಸೇವೆಯನ್ನು ನೀಡಲಿದೆ. ಈ ಹೆಲಿಕಾಪ್ಟರ್ ಪ್ರಯಾಣದ ಬುಕ್ಕಿಂಗ್ ಶುಲ್ಕ ರೂ.2,900ಗಳಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ಕೇಂದ್ರ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿರವರು ಈ ಅಂತರರಾಜ್ಯ ಹೆಲಿಕಾಪ್ಟರ್ ಸೇವೆಗೆ ಚಾಲನೆ ನೀಡಿ ಈ ಸೇವೆಯು ರಾಜ್ಯಗಳ ನಡುವಿನ ಪರಸ್ಪರ ಸಂಬಂಧವನ್ನು ಹೆಚ್ಚಿಸುವುದರ ಜೊತೆಗೆ ರಾಜ್ಯಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಇನ್ನು ಈ ಹೊಸ ಸೇವೆಯ ಬಗ್ಗೆ ಹೇಳುವುದಾದರೆ, ಪವನ್ ಹನ್ಸ್ ವಾರಕ್ಕೊಮ್ಮೆ ಮೂರು ಬಾರಿ ಈ ಹೆಲಿಕಾಪ್ಟರ್ ಸೇವೆಗಳನ್ನು ನೀಡಲಿದ್ದು, ಪ್ರಯಾಣಿಕರಿಗೆ ಶುಲ್ಕ ವಿಧಿಸುವುದನ್ನು ಖಚಿತಪಡಿಸುತ್ತದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಭಾಗದಲ್ಲಿ ಹೆಲಿಕಾಪ್ಟರ್ ಸೇವೆಗಳ ಆರಂಭದೊಂದಿಗೆ ರಾಜ್ಯಗಳ ನಡುವಿನ ವಾಯು ಸಂಪರ್ಕವು ಸುಧಾರಿಸುವುದರ ಜೊತೆಗೆ ರಾಜ್ಯಗಳ ನಡುವಿನ ಪ್ರಯಾಣದ ಅವಧಿಯೂ ಸಹ ಕಡಿಮೆಯಾಗಲಿದೆ. ಈ ಹೆಲಿಕಾಪ್ಟರ್ ಸೇವೆಯು ಗುಡ್ಡಗಾಡು ಪ್ರದೇಶಗಳಲ್ಲಿನ ಸಂಪರ್ಕವನ್ನು ಸುಧಾರಿಸಲಿದೆ.

ಈ ಮೊದಲು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವುದಕ್ಕೆ 2ರಿಂದ 3 ಗಂಟೆಗಳು ಬೇಕಾಗಿದ್ದವು. ಈಗ ಈ ಪ್ರದೇಶಗಳಿಗೆ ಕೇವಲ 30 ನಿಮಿಷಗಳಲ್ಲಿ ತಲುಪಬಹುದು. ಚಾರ್ ಧಾಮ್ಗೆ ಪ್ರಯಾಣಿಸುವ ಭಕ್ತರಿಗೂ ಸಹ ಈ ಹೆಲಿಕಾಪ್ಟರ್ ಸೇವೆಯನ್ನು ನೀಡಲಾಗುವುದು.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಡೆಹ್ರಾಡೂನ್ನಿಂದ ರಾಮ್ನಗರ, ಪಂತ್ನಗರ, ನೈನಿತಾಲ್, ಅಲ್ಮೋರಾ, ಪಿಥೋರಗಢ ಹಾಗೂ ಡೆಹ್ರಾಡೂನ್ನಿಂದ ಮಸ್ಸೂರಿಗೆ ಸಂಪರ್ಕ ಕಲ್ಪಿಸುವ ಇನ್ನೂ ಎರಡು ಹೆಲಿಕಾಪ್ಟರ್ ಸೇವೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ಉಡಾನ್ -2 ಯೋಜನೆಯಡಿ ಹೊಸ ವಾಯು ಮಾರ್ಗಗಳಲ್ಲಿ ಸೇವೆಗಳನ್ನು ನೀಡಲು ನಾಗರಿಕ ವಿಮಾನಯಾನ ಇಲಾಖೆಯು ಪವನ್ ಹನ್ಸ್ ಲಿಮಿಟೆಡ್ಗೆ ಅನುಮತಿ ನೀಡಿದೆ.

ನಾಗರಿಕ ವಿಮಾನಯಾನ ಇಲಾಖೆಯ ಪ್ರಕಾರ, ಉಡಾನ್ ಯೋಜನೆಯಡಿ ಇದುವರೆಗೂ 50 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಸದ್ಯಕ್ಕೆ 19 ರಾಜ್ಯಗಳಲ್ಲಿ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಡಾನ್ ಯೋಜನೆಗೆ ಚಾಲನೆ ನೀಡಲಾಗಿದೆ.
ಗಮನಿಸಿ: ಈ ಫೋಟೋಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications