Just In
- 25 min ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 1 hr ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 1 hr ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 1 hr ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
Don't Miss!
- Movies ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋರು ಯಾರು
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಕ್ಸ್ಪ್ರೆಸ್ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!
ಎಕ್ಸ್ಪ್ರೆಸ್ವೇಗಳು ಭಾರತದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚಿನ ಪ್ರಮಾಣದ ವಾಹನ ಸಂಚಾರವನ್ನು ಹೊಂದಿವೆ. ಎಕ್ಸ್ಪ್ರೆಸ್ವೇಗಳಲ್ಲಿ ಚಲಿಸುವ ವಾಹನಗಳು ಸಾಮಾನ್ಯವಾಗಿ ವೇಗವಾಗಿಯೇ ಚಲಿಸುತ್ತವೆ. ಆದರೆ ವೇಗಕ್ಕೆ ತಕ್ಕಂತಹ ಪರಿಸ್ಥಿತಿಗಳು ಎಕ್ಸ್ಪ್ರೆಸ್ವೇಗಳಲ್ಲಿ ಇರುವುದಿಲ್ಲ. ಸಾಮಾನ್ಯ ರಸ್ತೆಗಳಿಗೆ ಹೋಲಿಸಿದರೆ ಎಕ್ಸ್ಪ್ರೆಸ್ವೇಗಳಲ್ಲಿ ಆಗುವ ಅಪಘಾತಗಳೇ ಅಧಿಕ. ಭಾರತದ ಎಕ್ಸ್ಪ್ರೆಸ್ವೇಗಳಲ್ಲಿ ಚಲಿಸುವವರಿಗೆ ಎದುರಾಗಬಹುದಾದ ಪ್ರಮುಖ ಹತ್ತು ಅಪಾಯಗಳು ಇಲ್ಲಿವೆ.
ಟಯರ್ ಸ್ಫೋಟ
ಭಾರತದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಬಹುತೇಕ ಎಕ್ಸ್ಪ್ರೆಸ್ವೇಗಳನ್ನು ಕಾಂಕ್ರೀಟ್ನಿಂದ ನಿರ್ಮಿಸಲಾಗುತ್ತದೆ. ಏಕೆಂದರೆ ಕಾಂಕ್ರೀಟ್ ರಸ್ತೆಗಳು ಟಾರ್ಮ್ಯಾಕ್ ರಸ್ತೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ಕಡಿಮೆ ಪ್ರಮಾಣದ ನಿರ್ವಹಣೆಯನ್ನು ಹೊಂದಿರುತ್ತವೆ. ಆದರೆ ಒಣ ಸ್ಥಿತಿಯಲ್ಲಿ ಟಾರ್ಮ್ಯಾಕ್ಗಳಿಗಿಂತ ಕಾಂಕ್ರೀಟ್ ರಸ್ತೆಗಳಲ್ಲಿ ಹೆಚ್ಚಿನ ಘರ್ಷಣೆ ಉಂಟಾಗುತ್ತದೆ. ಇದರಿಂದಾಗಿ, ಟಯರ್ಗಳು ಬೇಗನೆ ಬಿಸಿಯಾಗಿ, ಸ್ಪೋಟಗೊಳ್ಳುತ್ತವೆ. ಕಳಪೆಯಾಗಿರುವ ಟಯರ್ಗಳು ಸ್ಪೋಟಗೊಳ್ಳುತ್ತವೆ. ಹೊಸ ಟಯರ್ಗಳು ಸ್ಪೋಟಗೊಳ್ಳುವ ಸಾಧ್ಯತೆಗಳು ಕಡಿಮೆ.
ಚಲಿಸುತ್ತಿರುವ ವಾಹನಗಳಲ್ಲಿಯೇ ಮಲಗುವುದು
ಬಹುತೇಕ ಎಕ್ಸ್ಪ್ರೆಸ್ವೇಗಳು ಹೆಚ್ಚಿನ ತಿರುವುಗಳನ್ನು ಹೊಂದಿಲ್ಲದೇ ನೇರವಾಗಿರುತ್ತವೆ. ಒಂದೇ ಸಮನೇ ನೇರವಾಗಿ ರಸ್ತೆಗಳಲ್ಲಿ ಗಂಟೆಗಟ್ಟಲೇ ವಾಹನ ಚಲಾಯಿಸುವವರು ಬೇಸರಗೊಳ್ಳುತ್ತಾರೆ. ಚಾಲಕರು ನೇರವಾಗಿರುವ ರಸ್ತೆಗಳಲ್ಲಿ ತಮಗೆ ಅರಿವಿಲ್ಲದಂತೆ ನಿದ್ರೆಗೆ ಜಾರುತ್ತಾರೆ. ಇದು ಅಪಘಾತಗಳಿಗೆ ಕಾರಣವಾಗುತ್ತದೆ. ಆದ ಕಾರಣ ಎಕ್ಸ್ಪ್ರೆಸ್ವೇಗಳಲ್ಲಿ ಎಚ್ಚರವಾಗಿರಲು ಹಾಗೂ ರಸ್ತೆಯ ಮೇಲೆ ಗಮನವಿಡಲು ಮಧ್ಯದಲ್ಲಿ ಆಗಾಗ ವಿಶ್ರಾಂತಿ ಪಡೆಯುವುದು ಒಳ್ಳೆಯದು.
ತೈಲ ಸೋರಿಕೆ
ತೈಲ ಸೋರಿಕೆ ಎಲ್ಲಿ ಸಂಭವಿಸಿದರೂ ಅದು ಅಪಾಯಕಾರಿ. ಹೆಚ್ಚಿನ ವೇಗದ ವಾಹನಗಳು ಹಾಗೂ ನಯವಾದ ಕಾಂಕ್ರೀಟ್ ಹೊಂದಿರುವ ಎಕ್ಸ್ಪ್ರೆಸ್ವೇಗಳಲ್ಲಿ ತೈಲವು ಸೋರಿಕೆಯಾಗಿದ್ದರೆ ಹೆಚ್ಚಿನ ಅಪಾಯವುಂಟಾಗುತ್ತದೆ. ಅಪಘಾತಗಳಿಂದ ಅಥವಾ ವಾಹನಗಳ ಸೋರಿಕೆಯಿಂದ ತೈಲ ಸೋರಿಕೆ ಸಂಭವಿಸಬಹುದು. ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವವರು, ಅದರಲ್ಲೂ ವಿಶೇಷವಾಗಿ ಬೈಕ್ ಸವಾರರು ಹೆಚ್ಚು ಜಾಗರೂಕರಾಗಿರಬೇಕು. ರಸ್ತೆಯಲ್ಲಿ ತೈಲ ಸೋರಿಕೆಯಾಗಿದ್ದರೆ ಅದರ ಮೇಲೆ ಹಾದು ಹೋಗುವುದನ್ನು ತಪ್ಪಿಸಿ.
ದಾರಿ ತಪ್ಪಿ ಬರುವ ಪ್ರಾಣಿಗಳು
ಭಾರತದ ಬಹುತೇಕ ಎಕ್ಸ್ಪ್ರೆಸ್ವೇಗಳಲ್ಲಿ ಪ್ರಾಣಿಗಳು ದಾರಿತಪ್ಪಿ ಬರುವುದು ಸಾಮಾನ್ಯ ಸಂಗತಿಯಾಗಿದೆ. ಈ ರೀತಿ ದಾರಿತಪ್ಪಿ ಬರುವ ಪ್ರಾಣಿಗಳು, ಕಾಡು ಪ್ರಾಣಿಗಳು ಹೆಚ್ಚಾಗಿರುವ ಕಡೆ ಹಾದುಹೋಗುತ್ತವೆ.
ಪ್ರಾಣಿಗಳು ಎಕ್ಸ್ಪ್ರೆಸ್ವೇಗಳಿಗೆ ಬರದಂತೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದರೂ ಪ್ರಾಣಿಗಳಿಗೆ ಡಿಕ್ಕಿ ಹೊಡೆದು ಸಂಭವಿಸುವ ಪ್ರಕರಣಗಳು ಪ್ರತಿವರ್ಷ ಹೆಚ್ಚಾಗುತ್ತಿವೆ. ರಾತ್ರಿ ವೇಳೆಯಲ್ಲಿ ಹಾಗೂ ಮಂಜು ಬೀಳುವಾಗ ಭಾರೀ ಪ್ರಮಾಣದ ಅಪಘಾತಗಳಾಗುತ್ತಿವೆ.
ಮಂಜು
ಎಕ್ಸ್ಪ್ರೆಸ್ವೇಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ಮಂಜು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಎಕ್ಸ್ಪ್ರೆಸ್ವೇಗಳು ತೆರೆದ ಜಾಗಗಳ ಮೂಲಕ ಹೋಗುವುದರಿಂದ ದಟ್ಟವಾದ ಮಂಜು ಆವರಿಸಿರುತ್ತದೆ. ಸಾಮಾನ್ಯ ರಸ್ತೆಗಳಿಗಿಂತ ದಟ್ಟವಾದ ಮಂಜು ಎಕ್ಸ್ಪ್ರೆಸ್ವೇಗಳಲ್ಲಿರುತ್ತದೆ.
ಭಾರಿ ಮಂಜಿನಿಂದಾಗಿ ಹಲವಾರು ಅಪಘಾತಗಳು ಸಂಭವಿಸಿದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಮಂಜು ಆವರಿಸಿರುವ ಎಕ್ಸ್ಪ್ರೆಸ್ವೇಗಳಲ್ಲಿ ಚಲಿಸುವಾಗ, ಹೆಡ್ಲೈಟ್ಗಳನ್ನು ಉರಿಸಿ ನಿಧಾನವಾಗಿ ಚಾಲನೆ ಮಾಡುವುದು ಒಳಿತು.
ಎಡ ಭಾಗದಲ್ಲಿ ಚಲಿಸುವ ವೇಗದ ವಾಹನಗಳು
ಲೇನ್ ಶಿಸ್ತನ್ನು ಹೆದ್ದಾರಿ ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಚಲಿಸುವವರು ಮಾತ್ರವಲ್ಲದೆ ದೇಶದ ಬಹುತೇಕ ವಾಹನ ಸವಾರರು ಪಾಲಿಸುವುದೇ ಇಲ್ಲ. ವಾಹನಗಳನ್ನು ಹೆಚ್ಚಿನ ವೇಗದಲ್ಲಿ ಚಲಾಯಿಸುವ ಕಾರಣದಿಂದಾಗಿ ನಿಗದಿ ಪಡಿಸಿರುವ ಪಥಗಳನ್ನು ಬಿಟ್ಟು ಬೇರೆ ಪಥದಲ್ಲಿ ಅಂದರೆ ಎಡ ಭಾಗದಲ್ಲಿ ವಾಹನಗಳನ್ನು ಚಲಾಯಿಸಲಾಗುತ್ತಿದೆ.
ವೇಗವಾಗಿ ರಸ್ತೆಯ ಎಡ ಭಾಗದಲ್ಲಿ ವಾಹನಗಳನ್ನು ಚಲಿಸುವುದರಿಂದ, ಬೇರೆ ವಾಹನಗಳಲ್ಲಿರುವ ಚಾಲಕರು ತಮ್ಮ ವಾಹನಗಳಲ್ಲಿರುವ ಮಿರರ್ಗಳನ್ನು ನೋಡದೇ ವಾಹನ ಚಲಾಯಿಸುವುದರಿಂದ ಹೆಚ್ಚಿನ ಪ್ರಮಾಣದ ಅಪಘಾತಗಳಾಗುತ್ತಿವೆ. ಆದ ಕಾರಣ ಹೆಚ್ಚಿನ ವೇಗದಲ್ಲಿ ಎಡ ಭಾಗದಿಂದ ವಾಹನ ಚಲಾಯಿಸದಿರುವುದು ಒಳಿತು.
ದರೋಡೆ
ಎಕ್ಸ್ಪ್ರೆಸ್ವೇಗಳು ನಗರ ಪ್ರದೇಶದಿಂದ ಹೊರಗಿದ್ದು ಹೆಚ್ಚಾಗಿ ಜನರು ಓಡಾಡದ ಕಡೆ ಹಾದು ಹೋಗುತ್ತವೆ. ಜನರ ಓಡಾಟ ಕಡಿಮೆ ಇರುವ ಕಾರಣ, ಸ್ಥಳೀಯ ಜನರು ಪರಿಸ್ಥಿತಿಯ ಲಾಭವನ್ನು ಪಡೆದು ಎಕ್ಸ್ಪ್ರೆಸ್ವೇಗಳಲ್ಲಿ ಹಾದುಹೋಗುವ ವಾಹನಗಳನ್ನು ದೋಚುತ್ತಾರೆ. ಎಕ್ಸ್ಪ್ರೆಸ್ವೇಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯು ಇರುವುದಿಲ್ಲ.
ದರೋಡೆಕೋರರು ವಾಹನಗಳನ್ನು ತಡೆದು ಲೂಟಿ ಮಾಡಲು ನಾನಾ ಮಾರ್ಗಗಳನ್ನು ಬಳಸುತ್ತಾರೆ. ಯಾರಾದರೂ ನಿಮ್ಮ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದರೆ, ಕಾರಿನ ಮೇಲೆ ಏನನ್ನಾದರೂ ಎಸೆದರೆ ಅಥವಾ ವಾಹನವನ್ನು ಮೂಲೆಗೆ ಹಾಕಲು ಪ್ರಯತ್ನಿಸಿದರೆ ನಿಮ್ಮ ವಾಹನವನ್ನು ಯಾರೂ ಇಲ್ಲದ ಜಾಗದಲ್ಲಿ ನಿಲ್ಲಿಸಬೇಡಿ.
ಪೆಟ್ರೋಲ್ ಬಂಕ್ಗಳ ಕೊರತೆ
ಎಕ್ಸ್ಪ್ರೆಸ್ವೇಗಳಲ್ಲಿ ಪೆಟ್ರೋಲ್ ಬಂಕ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಇದು ದೇಶಾದ್ಯಂತ ಹೊಸದಾಗಿ ನಿರ್ಮಾಣವಾದ ಬಹುತೇಕ ಎಕ್ಸ್ಪ್ರೆಸ್ವೇಗಳ ಮತ್ತೊಂದು ಸಮಸ್ಯೆಯಾಗಿದೆ. ಆದ ಕಾರಣ ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವಾಗ ನಿಮ್ಮ ವಾಹನದಲ್ಲಿ ಸಾಕಷ್ಟು ಪ್ರಮಾಣದ ಇಂಧನ ಇದೆಯೆಂಬುದನ್ನು ಖಚಿತಪಡಿಸಿಕೊಳ್ಳಿ.
ರಾಂಗ್ ಸೈಡಿನಲ್ಲಿ ಬರುವ ಸ್ಥಳೀಯರು
ಎಕ್ಸ್ಪ್ರೆಸ್ವೇಗಳ ಬಳಿ ನೆಲೆಸಿರುವ ಸ್ಥಳೀಯ ಜನರಿಗೆ, ಈ ರಸ್ತೆಗಳು ವಿವಿಧ ಸ್ಥಳಗಳಿಗೆ ತೆರಳಲು ಇರುವ ಶಾರ್ಟ್ಕಟ್ ರಸ್ತೆಗಳಾಗಿವೆ. ಸ್ಥಳೀಯ ರಸ್ತೆಗಳಲ್ಲಿ ಓಡಾಡುವ ಬದಲು, ಎಕ್ಸ್ಪ್ರೆಸ್ವೇಗಳಲ್ಲಿ ಓಡಾಡುತ್ತಾರೆ. ಅವರು ರಾಂಗ್ ಸೈಡ್ಗಳ ಬಗ್ಗೆ ಗಮನ ನೀಡುವುದಿಲ್ಲ.
ಲಭ್ಯವಿರುವ ಯಾವುದೇ ಮಾರ್ಗದ ಮೂಲಕ ಎಕ್ಸ್ಪ್ರೆಸ್ವೇಗೆ ಪ್ರವೇಶಿಸುತ್ತಾರೆ. ಬ್ಯಾರಿಕೇಡ್ ಇರಲಿ ಅಥವಾ ಬೇಲಿ ಇರಲಿ ನುಗ್ಗಿ ಎಕ್ಸ್ಪ್ರೆಸ್ವೇಗಳಿಗೆ ಬರುತ್ತಾರೆ. ಆದ ಕಾರಣ ರಾಂಗ್ ಸೈಡಿನಲ್ಲಿ ಬರುವ ಜನರ ಬಗ್ಗೆ ಗಮನವಿರಲಿ.
ನಿಧಾನವಾಗಿ ಚಲಿಸುವ ವಾಹನಗಳು
ಭಾರತದ ಹಲವಾರು ಎಕ್ಸ್ಪ್ರೆಸ್ವೇಗಳಲ್ಲಿ ನಿಧಾನವಾಗಿ ಚಲಿಸುವ ವಾಹನಗಳಿಗೆ ಅನುಮತಿ ನೀಡುವುದಿಲ್ಲ. ಕೆಲವು ಎಕ್ಸ್ಪ್ರೆಸ್ವೇಗಳು ನಿಧಾನಗತಿಯ ಬೈಕ್ಗಳಿಗೆ ಅನುಮತಿ ನೀಡುತ್ತವೆ. ಇದರ ಪರಿಣಾಮವಾಗಿ, ನಿಧಾನವಾಗಿ ಚಲಿಸುವ ವಾಹನಗಳು ಹೆಚ್ಚು ವೇಗದಲ್ಲಿರುವ ವಾಹನಗಳಿಗೆ ಅಡ್ಡ ಬಂದು ಅಪಘಾತಗಳಿಗೆ ಕಾರಣವಾಗುತ್ತವೆ. ಇಂತಹ ವಾಹನಗಳ ವೇಗವನ್ನು ನಿರ್ಣಯಿಸುವುದು ಕಷ್ಟ. ಇದು ಮತ್ತಷ್ಟು ಭೀಕರ ಘಟನೆಗಳಿಗೆ ಕಾರಣವಾಗಬಹುದು.