BBK 12: ಬಿಗ್ ಬಾಸ್ ಪ್ರೀ-ಫಿನಾಲೆ ನಡೆಸಿಕೊಡಲ್ಲ ಕಿಚ್ಚ ಸುದೀಪ್: ಹೀಗಾಗಿದ್ದು ಇದೇ ಮೊದಲು
ಬಿಗ್ ಬಾಸ್ ಕನ್ನಡ 12 ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದಿನಿಂದ 12ನೇ ಸೀಸನ್ಗೆ ತೆರೆ ಎಳೆಯುವ ಪ್ರಕ್ರಿಯೆ ಆರಂಭ ಆಗಲಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ಎರಡು ದಿನ ನಡೆಯುತ್ತೆ. ಮೊದಲನೇ ದಿನ ಪ್ರೀ-ಫಿನಾಲೆ ಅಂತಲೂ, ಎರಡನೇ ದಿನ ಫಿನಾಲೆ ಅಂತಲೂ ಕರೆಯುವುದು ವಾಡಿಕೆ. ಈ ಎರಡು ದಿನಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ, ಕುತೂಹಲ, ಥ್ರಿಲ್ ಎಲ್ಲವೂ ಫಿಕ್ಸ್.
ಈ ಬಾರಿ ಬಿಗ್ ಬಾಸ್ ಕನ್ನಡ 12ನೇ ಸೀಸನ್ ಫಿನಾಲೆ ಇಂದು (ಜನವರಿ 17) ಹಾಗೂ ನಾಳೆ (ಜನವರಿ 18) ನಡೆಯಲಿದೆ. ಅದರಲ್ಲೂ ಇಂದು (ಜನವರಿ 17) ಫ್ರಿ-ಫಿನಾಲೆ ಆರಂಭ ಆಗುತ್ತಿದೆ. ಮನೆಯೊಳಗೆ ಇರುವ ಆರು ಸ್ಪರ್ಧಿಗಳಲ್ಲಿ ಯಾರಾದರೂ ಎಲಿಮಿನೇಟ್ ಆಗುತ್ತಾರೋ? ಇಲ್ಲ ಕೇವಲ ಪರ್ಫಾಮೆನ್ಸ್ಗಷ್ಟೇ ಸೀಮಿತವಾಗಿರುತ್ತೋ ಅನ್ನೋದು ಎಪಿಸೋಡ್ನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಇನ್ನು ಫ್ರೀ-ಫಿನಾಲೆ ಹಾಗೂ ಫಿನಾಲೆಯ ಹೈಲೈಟ್ ಅಂದರೆ ಅದು ಕಿಚ್ಚ ಸುದೀಪ್. ಆದರೆ, ಈ ಬಾರಿಯ ಪ್ರೀ-ಫಿನಾಲೆಯನ್ನು ಕಿಚ್ಚ ಸುದೀಪ್ ನಡೆಸಿಕೊಡುತ್ತಿಲ್ಲ ಎಂದು ವರದಿಗಳಾಗಿವೆ. ಈ ಸುದ್ದಿ ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸುದೀಪ್ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದೆ. ಕಿಚ್ಚನ ಅನುಪಸ್ಥಿತಿಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದ್ದು, ಫ್ರಿ-ಫಿನಾಲೆ ಬಗ್ಗೆ ಬೇಸರವನ್ನು ಹೊರ ಹಾಕುತ್ತಿದ್ದಾರೆ.
ಒಂದು ವೇಳೆ ಕಿಚ್ಚ ಸುದೀಪ್ ನಿಜಕ್ಕೂ ಪ್ರೀ-ಫಿನಾಲೆಗೆ ಗೈರಾಗುವುದೇ ಆದಲ್ಲಿ ವೀಕ್ಷಕರಿಗೆ ನಿರಾಸೆ ಆಗೋದು ಗ್ಯಾರಂಟಿ. ಇಷ್ಟೇ ಅಲ್ಲದೇ ಇದು ಬಿಗ್ ಬಾಸ್ ಕನ್ನಡ 12ರ ಇತಿಹಾಸದಲ್ಲಿಯೇ ಕಿಚ್ಚ ಪ್ರೀ-ಫಿನಾಲೆಯನ್ನು ಮಿಸ್ ಮಾಡಿಕೊಂಡಿದ್ದು ಇದೇ ಮೊದಲು ಎನ್ನಲಾಗಿದೆ. ಎರಡು ದಿನ ಭರ್ಜರಿ ಮನರಂಜನೆಯಲ್ಲಿ ಕಿಚ್ಚ ಸುದೀಪ್ ನಿರೂಪಣೆ ವಿಶೇಷ ಮೆರುಗು ನೀಡುತ್ತಿತ್ತು. ಆದ್ರೀಗ ಅದನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
BBK 12: ಬಿಗ್ ಬಾಸ್ ತೆರೆ ಎಳೆಯೋ ಹೊತ್ತಿಲ್ಲಿ ಕುಕ್ಕಿದ ರಣಹದ್ದು; ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್
ಕಳೆದ ಕೆಲವು ಸೀಸನ್ಗಳಿಂದ ಸುದೀಪ್ ಕೆಲವು ಸಂಚಿಕೆಗಳ ನಿರೂಪಣೆಯಿಂದ ಹೊರಗುಳಿದಿದ್ದಾರೆ. ಅದಕ್ಕೆ ಹಲವು ಕಾರಣಗಳು ಇವೆ. ಆದರೆ, ಫಿನಾಲೆ ಸಮಯದಲ್ಲಿ ಕಿಚ್ಚ ಸುದೀಪ್ ಮಿಸ್ ಆಗಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಪ್ರಿ-ಫಿನಾಲೆಯಂದು ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿಲ್ಲ. ಅಂದ್ಹಾಗೆ ಇದಕ್ಕೂ ಕಾರಣವಿದೆ. ಅದೇನೇ ಇದ್ದೂ ವೀಕ್ಷಕರಿಗಂತೂ ಇದು ನಿರಾಸೆಯನ್ನುಂಟು ಮಾಡಿದೆ.
ಕಿಚ್ಚ ಸುದೀಪ್ ಮೊದಲ ಬಾರಿಗೆ ಫಿನಾಲೆ ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣವಿದೆ. ಎರಡು ದಿನ ನಡೆಯೋ ಫಿನಾಲೆಯಲ್ಲಿ ಸುದೀಪ್ ನಿರೂಪಣೆಯೇ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಆದರೆ, ಈ ಬಾರಿ ಒಂದೇ ದಿನ ಫಿನಾಲೆ ನಡೆಯುತ್ತಿದೆ. ಕಿಚ್ಚ ಮೊದಲ ದಿನ ಮಿಸ್ ಮಾಡಿಕೊಳ್ಳುವುದಕ್ಕೆ ಕಾರಣ 'ಸೆಲೆಬ್ರೆಟಿ ಕ್ರಿಕೆಟ್ ಲೀಗ್'. ಅಲ್ಲಿಯೂ ಬ್ಯುಸಿಯಾಗಿದ್ದರಿಂದ ಫ್ರಿ-ಫಿನಾಲೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೇವಲ ಪರ್ಫಾಮೆನ್ಸ್ ಅಷ್ಟೇ ಇರುತ್ತೆ ಎನ್ನಲಾಗಿದೆ.
ನಿನ್ನೆ (ಜನವರಿ 16) ವೈಜಾಗ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದಿ ಶೇರ್ ತಂಡದ ನಡುವೆ ಮೊದಲ ಸಿಸಿಎಲ್ ಪಂದ್ಯ ನಡೆದಿತ್ತು. ಹೀಗಾಗಿ ಸುದೀಪ್ ತಮ್ಮ ತಂಡದೊಂದಿಗೆ ವೈಜಾಗ್ನಲ್ಲಿ ಇದ್ದರು, ಮೊದಲ ಪಂದ್ಯ ಗೆದ್ದ ಖುಷಿಯಲ್ಲಿರೋ ಕಿಚ್ಚ ಬೆಂಗಳೂರಿಗೆ ಬಂದು ಫ್ರಿ-ಫಿನಾಲೆ ನಡೆಸಿಕೊಡುವುದಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರೀ-ಫಿನಾಲೆಯನ್ನು ಮಿಸ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು (ಜನವರಿ 17) ಪ್ರಿ ಗ್ರ್ಯಾಂಡ್ ಫಿನಾಲೆ ರಾತ್ರಿ 9 ಗಂಟೆಯಿಂದ ಆರಂಭ ಆಗುತ್ತಿದೆ. ನಾಳೆ (ಜನವರಿ 18) ಭಾನುವಾರ ಸಂಜೆ 6 ಗಂಟೆಯಿಂದ ಫಿನಾಲೆ ನಡೆಯಲಿದೆ.
Credit: Filmibeat


Click it and Unblock the Notifications








