ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಇತ್ತೀಚೆಗೆ ಕರ್ನಾಟಕದಲ್ಲಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ಕೋವಿಡ್ 19 ರೋಗಿಗಳನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿದೆ. ಈ ಏರ್ ಆಂಬ್ಯುಲೆನ್ಸ್, ಲ್ಯಾಂಡ್ ಆಂಬ್ಯುಲೆನ್ಸ್ ಸೇವೆಯೊಂದಿಗೆ ಸಂಪರ್ಕ ಹೊಂದಿರಲಿದೆ.

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಈ ಸೇವೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರೆಯಲಿ ಎಂಬ ಉದ್ದೇಶವನ್ನು ಹೊಂದಲಾಗಿದೆ. ಈ ಸೇವೆ ಮೂಲಕ ದೂರದ ಪ್ರದೇಶಗಳನ್ನು ಸುಲಭವಾಗಿ ತಲುಪಬಹುದು. ಇಂಟರ್ ನ್ಯಾಷನಲ್ ಕ್ರಿಟಿಕಲ್ ಏರ್ ಟ್ರಾನ್ಸ್ಫರ್ ಟೀಂ ಹಾಗೂ ಏವಿಯೆಷನ್ ಟೆಕ್ನಾಲಜಿ ಕಂಪನಿಯಾದ ಕ್ಯಾತಿ ಜತೆಗೂಡಿ ಈ ಸೇವೆಯನ್ನು ಆರಂಭಿಸಿವೆ. ಈ ಎರಡು ಕಂಪನಿಗಳು ಒಟ್ಟಾಗಿ ಕರ್ನಾಟಕದಲ್ಲಿರುವ ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿವೆ.

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಈ ಏರ್ ಆಂಬ್ಯುಲೆನ್ಸ್ ಅನ್ನು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿರಿಸಲಾಗುವುದು, ಈ ಹೆಲಿಕಾಪ್ಟರ್ ವೈದ್ಯಕೀಯ ಸೌಲಭ್ಯಗಳನ್ನು ಹತ್ತಿರದ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಪ್ರಯತ್ನಿಸಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ನಗರದ ಟ್ರಾಫಿಕ್ ಪರಿಸ್ಥಿತಿಗೆ ಅನುಗುಣವಾಗಿ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲಾಗುವುದು. ಈ ಏರ್ ಆಂಬುಲೆನ್ಸ್‌ನಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಈ ಸೌಲಭ್ಯಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ ಬಳಸಬಹುದು ಎಂದು ಹೇಳಲಾಗಿದೆ. ಜರ್ಮನ್ ಐಸೊಲೇಷನ್ ಪಾಡ್ ಇದಕ್ಕೆ ಉದಾಹರಣೆಯಾಗಿದೆ. ಜರ್ಮನ್ ಐಸೊಲೇಷನ್ ಪಾಡ್ ಮೇಲೆ ರೋಗಿಯನ್ನು ಸುಲಭವಾಗಿ ಸಾಗಿಸಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಈ ಪಾಡ್ ಅನ್ನು ಕೋವಿಡ್ 19 ಸೇರಿದಂತೆ ಸಾಂಕ್ರಾಮಿಕ ರೋಗ ಹೊಂದಿರುವ ರೋಗಿಗಳನ್ನು ಸಾಗಿಸಲು ಸಹ ಬಳಸಬಹುದು. ಈ ಪಾಡ್‌ನಲ್ಲಿ, ಸೋಂಕು ಪ್ರವೇಶಿಸದಂತೆ ತಡೆಯಲು ನೆಗೆಟಿವ್ ಪ್ರೆಷರ್ ಅನ್ನು ಬಳಸಲಾಗುತ್ತದೆ.

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಮಾಧ್ಯಮ ವರದಿಗಳ ಪ್ರಕಾರ, ಈ ಸೌಲಭ್ಯದ ವೆಚ್ಚ ಸುಮಾರು ರೂ.20 ಲಕ್ಷಗಳಾಗಿದೆ. ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಈ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಕೋವಿಡ್ 19 ಸಾಂಕ್ರಾಮಿಕದ ಈ ಸಮಯದಲ್ಲಿ ಈ ರೀತಿಯ ಆರೋಗ್ಯ ಸೌಲಭ್ಯವನ್ನು ಆರಂಭಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದರು. ಐಸಿಎಟಿಟಿ ಏರ್ ಆಂಬ್ಯುಲೆನ್ಸ್ ಹಾಗೂ ಬೆಂಗಳೂರು ಮಿರರ್ ಇದರ ಚಿತ್ರಗಳನ್ನು ಪ್ರಕಟಿಸಿವೆ.

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಈ ಸೌಲಭ್ಯವನ್ನು ಆರಂಭಿಸಿರುವ ಕಂಪನಿಯು ಈ ವರ್ಷ 63 ಸ್ಥಳೀಯ, 10 ಅಂತರರಾಷ್ಟ್ರೀಯ ಹಾಗೂ ಏಳು ಅಂಗಾಂಗಗಳನ್ನು ಈ ಸೇವೆಯ ಮೂಲಕ ಸಾಗಿಸಲಾಗಿದೆ ಎಂದು ಹೇಳಿದೆ. ಇತ್ತೀಚೆಗಷ್ಟೇ ಈ ಕಂಪನಿಯು ಕೋವಿಡ್ 19 ರೋಗಿಯನ್ನು ಚೆನ್ನೈನಿಂದ ಕೋಲ್ಕತ್ತಾಗೆ ಸಾಗಿಸಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್

ಕೋಲ್ಕತ್ತಾಗೆ ಸಾಗಿಸುವ ಸಮಯದಲ್ಲಿ ಐಸೋಲೇಷನ್ ಪಾಡ್‌ಗಳನ್ನು ಬಳಸಲಾಗಿತ್ತು. ಈ ಸಾಂಕ್ರಾಮಿಕ ಸಮಯದಲ್ಲಿ ಇದು ಬಹಳ ಮುಖ್ಯವಾದ ಸೌಲಭ್ಯವಾಗಿದೆ. ಈ ಏರ್ ಆಂಬುಲೆನ್ಸ್ ಮೂಲಕ ರೋಗಿಯನ್ನು ಚಿಕಿತ್ಸೆಗಾಗಿ ಅಗತ್ಯವಾದ ಸ್ಥಳಕ್ಕೆ ಸಾಧ್ಯವಾದಷ್ಟು ಬೇಗ ಕರೆದೊಯ್ಯಬಹುದು.

Most Read Articles

Kannada
English summary
Air ambulance service for Covid 19 patients launched in Karnataka. Read in Kannada.
Story first published: Thursday, September 17, 2020, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X