Just In
- 8 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 9 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 10 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 10 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!
ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾದ ಸರ್ಕಾರಿ ಬಸ್ ನೌಕರರೇ ಬೇಕಾಬಿಟ್ಟಿ ಚಾಲನೆ ಮಾಡಿದ್ರೆ ಹೇಗೆ ಹೇಳಿ? ಇಲ್ಲೂ ಕೂಡಾ ನಡೆದಿದ್ದು ಅಂತದ್ದೆ ಘಟನೆ. ತಾವು ಮಾಡುತ್ತಿರುವುದು ಗೊತ್ತಿದ್ರು ಕೂಡಾ ರಾಂಗ್ ಸೈಡ್ನಲ್ಲಿ ನುಗ್ಗುವ ಬಹುತೇಕ ಬಿಎಂಟಿಸಿ ಬಸ್ಗಳು ಅದೆಷ್ಟೋ ಅಮಾಯಕರ ಜೀವಗಳನ್ನು ಬಲಿಪಡೆದಿವೆ. ಹೀಗಿರುವಾಗ ಬೈಕ್ ಸವಾರನೊಬ್ಬ ಒನ್ ವೇ ನಲ್ಲಿ ಬರುತ್ತಿದ್ದ ಬಸ್ ತಡೆದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.
ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾದ ಸರ್ಕಾರಿ ಬಸ್ ನೌಕರರೇ ಬೇಕಾಬಿಟ್ಟಿ ಚಾಲನೆ ಮಾಡಿದ್ರೆ ಹೇಗೆ ಹೇಳಿ? ಇಲ್ಲೂ ಕೂಡಾ ನಡೆದಿದ್ದು ಅಂತದ್ದೆ ಘಟನೆ. ತಾವು ಮಾಡುತ್ತಿರುವುದು ಗೊತ್ತಿದ್ರು ಕೂಡಾ ರಾಂಗ್ ಸೈಡ್ನಲ್ಲಿ ನುಗ್ಗುವ ಬಹುತೇಕ ಬಿಎಂಟಿಸಿ ಬಸ್ಗಳು ಅದೆಷ್ಟೋ ಅಮಾಯಕರ ಜೀವಗಳನ್ನು ಬಲಿಪಡೆದಿವೆ. ಹೀಗಿರುವಾಗ ಬೈಕ್ ಸವಾರನೊಬ್ಬ ಒನ್ ವೇ ನಲ್ಲಿ ಬರುತ್ತಿದ್ದ ಬಸ್ ತಡೆದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.
ಒನ್ ವೇ ಮತ್ತು ರಾಂಗ್ ಸೈಡ್ ವಾಹನ ಚಾಲನೆ ಮಾಡುವವರ ವಿರುದ್ದ ಸಂಚಾರಿ ಪೊಲೀಸರು ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಕೆಲವರು ಮಾತ್ರ ಯಾವುದೇ ಕ್ರಮ ಜಾರಿಗೆ ಮಾಡಿದರೂ ತಮಗೆ ಸಂಬಂಧವೇ ಇಲ್ಲದಂತೆ ನಿಯಮ ಉಲ್ಲಂಘನೆ ಮಾಡುತ್ತಿರುತ್ತಾರೆ.
ಕಳೆದ ನವೆಂಬರ್ 30ರಂದು ಸಹ ಇಂತದ್ದೆ ಘಟನೆ ನಡೆದಿದ್ದು, ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಮಾರ್ಗದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ರಾಂಗ್ ಸೈಡ್ನಲ್ಲಿ ನುಗ್ಗಿಕೊಂಡು ಹೋಗುತ್ತಿತ್ತು. ಇದನ್ನು ತಡೆದ ಬೈಕ್ ಸವಾರನೊಬ್ಬ ಬಸ್ ಅನ್ನು ವಾಪಸ್ ಕಳುಹಿಸಿದ್ದಾನೆ.
ಸಂಚಾರಿ ನಿಯಮ ಎಲ್ಲರಿಗೂ ಒಂದೇ ಎಂದು ರೊಚ್ಚಿಗೆದ್ದ ಬೈಕ್ ರೈಡರ್ ಒನ್ ವೇ ಯಿಂದ ಬಸ್ ಅನ್ನು ಹಿಂದಕ್ಕೆ ತೆಗದುಕೊಳ್ಳುವಂತೆ ಸೂಚಿಸಿದ್ದಾನೆ. ಈ ವೇಳೆ ಬೈಕ್ ಸವಾರನ ಮಾತು ಕೇಳದ ಚಾಲಕ ಮತ್ತೆ ಅದೇ ಮಾರ್ಗದಲ್ಲಿ ನುಗ್ಗಲು ಯತ್ನಿಸಿದ್ದಾನೆ.
ಈ ವೇಳೆ ಬೈಕ್ ಸವಾರ ಮತ್ತು ಬೈಕ್ ನಿರ್ವಾಹಕನ ಮಧ್ಯೆ ಕೆಲ ಕಾಲ ವಾಗ್ವಾದ ಕೂಡಾ ನಡೆಯಿತಲ್ಲದೇ ಇದೇ ವೇಳೆ ಬಸ್ ಹಿಂದಿದ್ದ ಕೆಲವು ಬೈಕ್ಗಳು ಮತ್ತು ಕಾರುಗಳು ಸಹ ಒನ್ ವೇ ನಲ್ಲಿ ನುಗ್ಗಲು ಯತ್ನಿಸಿದವು. ಆದ್ರೆ ಇದ್ಯಾವುದಕ್ಕೂ ಜಗ್ಗದ ಬೈಕ್ ಸವಾರ ಮಾತ್ರ ಒನ್ ವೇ ನಲ್ಲಿ ನುಗ್ಗುತ್ತಿದ್ದ ವಾಹನ ಸವಾರರಿಗೆ ಸರಿಯಾಗಿಯೇ ಪಾಠ ಕಲಿಸಿದ.
ಬೈಕ್ ಅನ್ನು ರಸ್ತೆಯ ಮಧ್ಯದಲ್ಲೇ ಇಟ್ಟ ರೈಡರ್ ಯಾವುದೇ ಕಾರಣಕ್ಕೂ ಬಿಎಂಟಿಸಿ ಬಸ್ ಅನ್ನು ಒನ್ ವೇ ಬಿಡುವುದಿಲ್ಲ ಎಂದು ಪಟ್ಟುಹಿಡಿದನಲ್ಲದೇ ಸಂಚಾರಿ ನಿಯಮದ ಪ್ರಕಾರವೇ ಬಸ್ ಹೋಗಬೇಕು ಎಂದು ವಾಗ್ವಾದ ನಡೆಸಿದ.
ಬೈಕ್ ಸವಾರನ ಆಕ್ರೋಶ ಕಂಡು ದಂಗಾದ ಬಿಎಂಟಿಸಿ ಬಸ್ ಚಾಲಕನು ಇನ್ನೊಂದು ಸರಿ ಒನ್ ವೇನಲ್ಲಿ ಹೋಗುವುದೇ ಬೇಡ ಎಂದು ಬಸ್ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಇದೇ ವೇಳೆ ಬಸ್ ಸಂಚಾರಕ್ಕೆ ಅಡ್ಡನಿಂತಿದ್ದ ಖಾಸಗಿ ವಾಹನ ಮಾಲೀಕರಿಗೂ ತರಾಟೆಗೆ ತೆಗೆದುಕೊಂಡಿದ್ದಾನೆ.
ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ವಾಣಿಜ್ಯ ವಾಹನಗಳನ್ನು ಪಾರ್ಕ್ ಮಾಡುವ ವಾಹನ ಮಾಲೀಕರು ಸಾರ್ವಜನಿಕ ಕಿರಿಕಿರಿ ಮಾಡುವುದಲ್ಲದೇ ಕೆಲವು ಅನಾಹುತಗಳಿಗೂ ಕಾರಣವಾಗುತ್ತಿದ್ದಾರೆ. ಇದಕ್ಕೂ ಆ ಬೈಕ್ ಸವಾರ ಮಾಲೀಕರೊಂದಿಗೆ ವಾಗ್ವಾದ ಮಾಡಿದ್ದಾನೆ.
ಕೊನೆಗೆ ಒನ್ ವೇ ನಲ್ಲಿ ಬರುತ್ತಿದ್ದ ಎಲ್ಲಾ ವಾಹನಗಳನ್ನು ಹಿಂದಕ್ಕೆ ಕಳುಹಿಸಿ ಆ ರಸ್ತೆಯನ್ನು ತೆರವು ಮಾಡಿದ ಬೈಕ್ ಸವಾರನು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಬಸ್ ಹಿಂದಕ್ಕೆ ಕಳುಹಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?
ಬಹುತೇಕರು ಬೈಕ್ ಸವಾರನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದು, ಒನ್ ವೇ ನಲ್ಲಿ ಬರುತ್ತಿದ್ದ ವಾಹನ ಸವಾರರಿಗೆ ಸರಿಯಾಗಿ ಬುದ್ದಿ ಕಳುಹಿಸಿದ್ದೀರಿ ಎಂದು ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪಘಾತಗಳು ಆಗುತ್ತಿರುವುದೇ ಕಿಲ್ಲರ್ ಬಿಎಂಟಿಸಿ ಬಸ್ಗಳಿಂದ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದ್ರೆ ಅದೆನೇ ಇರಲಿ, ಸಮಯ ಉಳಿತಾಯ ಮಾಡುವುದಕ್ಕೋ ಅಥವಾ ಇಂಧನ ಉಳಿತಾಯ ಮಾಡಲು ಒನ್ ವೇ ನಲ್ಲಿ ಹೋಗುವ ಮುನ್ನ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಯೋಚನೆ ಮಾಡಿ ವಾಹನ ಚಾಲನೆ ಮಾಡಿ. ಯಾಕೆಂದ್ರೆ ದೇಶದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಬಹುತೇಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆಯೇ ಪ್ರಾಣಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ.
MOST READ: ಮಗುವಿನ ಪ್ರಾಣ ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್
ಬಿಎಂಟಿಸಿ ಬಸ್ ಚಾಲಕ ಮತ್ತು ಬೈಕ್ ರೈಡರ್ ನಡುವೆ ನಡೆದ ವಾಗ್ವಾದದ ವಿಡಿಯೋ ಇಲ್ಲಿದೆ ನೋಡಿ.
Source: MR. White Panda
MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!