ಕುಡಿದ ಮತ್ತಿನಲ್ಲಿ ಕಾರಿನ ಎಸಿ ಆನ್ ಮಾಡಿ ಪ್ರಾಣ ಬಿಟ್ಟ ಚಾಲಕ
ಪ್ರತಿಯೊಬ್ಬರು ತಮ್ಮ ಕಾರಿನಲ್ಲಿ ಎಸಿ ಫೀಚರ್ ಇರಬೇಕೆಂದು ಬಯಸುತ್ತಾರೆ. ಇತ್ತೀಚೆಗೆ ಐಷಾರಾಮಿ ಮತ್ತು ಸಣ್ಣ ಕಾರುಗಳಲ್ಲಿಯು ಕೂಡ ಈ ಫೀಚರ್ ಅನ್ನು ನೀಡಲಾಗುತ್ತಿದೆ. ಕಾರಿನಲ್ಲಿ ಎಸಿ ತುಂಬಾ ಉಪಯುಕ್ತ ಫೀಚರ್ ಆಗಿದ್ದರೂ, ಇದರಿಂದ ಅಪಾಯ ಕೂಡ ಇದೆ.

ಕಾರುಗಳಲ್ಲಿ ಎಸಿ ಆನ್ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವುದು, ನಿದ್ರಿಸುವ ಮುನ್ನ ಎಚ್ಚರ ವಹಿಸದಿದ್ದರೆ ಎಸಿಯಿಂದ ಹೊರಸೂಸುವ ಕಾರ್ಬನ್ ಮೋನಾಕ್ಸೈಡ್ ವಿಷವಾಗಿ ಪರಿವರ್ತನೆಗೊಂಡು ಉಸಿರುಗಟ್ಟಿ ಸಾವು ಸಂಭವಿಸುತ್ತದೆ. ಇದೇ ರೀತಿಯ ಘಟನೆಯೊಂದು ನೊಯ್ಡದಲ್ಲಿ ನಡೆದಿದೆ. ನೊಯ್ಡದಲ್ಲಿ ವ್ಯಕ್ತಿಯೊಬ್ಬ ಕುಡಿದು ಮದ್ಯದ ಅಮಲಿನಲ್ಲಿ ತನ್ನ ಕಾರಿನಲ್ಲಿ ನಿದ್ರೆಗೆ ಜಾರಿ ಪ್ರಾಣ ಬಿಟ್ಟ ಘಟನೆಯೊಂದು ವರದಿಯಾಗಿದೆ.

ಸುಂದರ್ ಪಂಡಿತ್ ಬರೋಲಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಸೆಕ್ಟರ್ 107 ರಲ್ಲಿ ಅವರಿಗೆ ಮತ್ತೊಂದು ಮನೆ ಇತ್ತು, ಅಲ್ಲಿ ಅವರು ವಾರಾಂತ್ಯದಲ್ಲಿ ಬಂದಿದ್ದರು" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
MOST READ: ಗ್ಲೋಬಲ್ ಎನ್ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮೃತ ಪಟ್ಟ ಸುಂದರ್ ಪಂಡಿತ್ ಎಂಬ ವ್ಯಕ್ತಿಯು ಬರೋಲಾ ಗ್ರಾಮದಲ್ಲಿ ವಾಸಿಸುತ್ತಿದ್ದ. ಅವರಿಗೆ ಮತ್ತೊದು ಮನೆಯು ಕೂಡ ಇದೆ, ಅಲ್ಲಗೆ ಅವರು ವಾರಾಂತ್ಯದಲ್ಲಿ ತೆರಳಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ವರದಿಯ ಪ್ರಕಾರ, ಸುಂದರ್ ಪಂಡಿತ್ ಎಂಬ ವ್ಯಕ್ತಿಯು ಮದ್ಯದ ದಾಸನಾಗಿದ್ದ ಎಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಶನಿವಾರ ರಾತ್ರಿ ತಮ್ಮ ಮನೆ ಹತ್ತಿರದಲ್ಲಿ ಕಾರು ನಿಲ್ಲಿಸಿ ಅಲ್ಲೇ ಅವರು ಕಾರಿನೊಳಗೆ ಮಲಗಿದ್ದರು.
MOST READ: ಐಷಾರಾಮಿ ಫೋಕ್ಸ್ವ್ಯಾಗನ್ ಎಸ್ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಮರುದಿನ ಬೆಳಿಗ್ಗೆ ಪಂಡಿತ್ ಅವರ ಸಹೋದರನು ಕಾರಿನಲ್ಲಿ ಪ್ರಜ್ಞಾಹೀನನಾಗಿರುವುದನ್ನು ಕಂಡು ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆ ಸೇರಿಸಿದರೂ ಪ್ರಯೋಜವಾಗಿರಲಿಲ್ಲ. ಅವರು ಆಸ್ಪೆತೆಯಲ್ಲೇ ಪ್ರಾಣಬಿಟ್ಟಿದ್ದಾರೆ.

ನಂತರ ಅವರ ಕುಟುಂಬ ಸದಸ್ಯರು ಶವವನ್ನು ಅಂತ್ಯಸಂಸ್ಕಾರ ಮಾಡಿ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅವರು ಕುಡಿತದ ಅಮಲಿನಿಂದ ಆದ ಅನಾಹುತದಿಂದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿಲ್ಲ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆದರೂ ಪೊಲೀಸರ್ ಸ್ಥಳಕ್ಕೆ ಧಾವಿಸಿ ಮೂಲ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಪೊಲೀಸರು ಪ್ರಕಣವನ್ನು ದಾಖಲಿಸಿ ತನಿಖೆ ನಡಿಸಿದರೂ ಅವರ ಕುಡಿತದಿಂದ ಆದ ಅನಾಹುತವಾಗಿರುವುದರಿಂದ ಆ ಸಾವಿಗೆ ಇತರರನ್ನು ಹೊಣೆ ಮಾಡಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಪ್ರತಿಯೊಬ್ಬರು ಎಚ್ಚರಿಕೆಯನ್ನು ವಹಿಸಬೇಕು. ಎಸಿ ಕಾರಿನಲ್ಲಿ ಉಸಿರುಗಟ್ಟಿ ಈಗಾಗಲೇ ಹಲವಾರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ಹೆಚ್ಚು ಮಕ್ಕಳೇ ಬಲಿಯಾಗಿರುವುದರಿಂದ ಪೋಷಕರು ತಮ್ಮ ಪುಟ್ಟ ಮಕ್ಕಳ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ.


Click it and Unblock the Notifications