Just In
- 1 hr ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- 1 hr ago ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
- 1 hr ago ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!
- 4 hrs ago Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
Don't Miss!
- News ಪ್ರಣಾಳಿಕೆಗಳಲ್ಲಿನ ಭರವಸೆ ಮತದಾರರಿಗೆ ಆಮಿಷಗಳಾಗದು- ಹೈಕೋರ್ಟ್ ಆದೇಶ
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕದ್ದ ಎಟಿಎಂ ಕಾರ್ಡ್ ಪಾಸ್ವರ್ಡ್ ಕೇಳಲು ಬಂದು ತಗ್ಲಾಕಿಕೊಂಡ ದರೋಡೆಕೋರರು
ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಇಬ್ಬರು ದರೋಡೆಕೋರರನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಈ ದರೋಡೆಕೊರರು ಪೊಲೀಸರಿಗೆ ಸಿಕ್ಕಿ ಬಿದ್ದ ರೀತಿ ಮಾತ್ರ ವಿಚಿತ್ರವಾಗಿದೆ.
ಈ ಘಟನೆ ಜುಲೈ 22 ರಂದು ನಡೆದಿದೆ. ನೋಯ್ಡಾದ ವ್ಯಕ್ತಿಯೊಬ್ಬರು ಊಟಕ್ಕೆ ಬಂದಿದ್ದಾರೆ. ಬೈಕಿನಲ್ಲಿ ಬಂದ ಈ ಇಬ್ಬರು ದರೋಡೆಕೋರರು ಆ ವ್ಯಕ್ತಿಯ ಸೆಲ್ಫೋನ್, ವಾಚ್ ಹಾಗೂ ಪರ್ಸ್ ಗಳನ್ನು ಕದ್ದು ಪರಾರಿಯಾಗಿದ್ದಾರೆ. ಕದ್ದ ಪರ್ಸ್ನಲ್ಲಿ ನಗದು, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಗಳಿದ್ದವು.
ಸ್ವಲ್ಪ ದೂರ ಹೋದ ನಂತರ ಆ ಇಬ್ಬರು ದರೋಡೆಕೋರರು ಮತ್ತೆ ವಾಪಸ್ ಆಗಿದ್ದಾರೆ. ಎಟಿಎಂ ಕಾರ್ಡ್ ಕಳೆದು ಕೊಂಡ ವ್ಯಕ್ತಿಯ ಬಳಿ ಪಾಸ್ವರ್ಡ್ ಕೇಳಲು ವಾಪಸ್ ಆಗಿದ್ದಾರೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ
ಆ ವ್ಯಕ್ತಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಆ ಇಬ್ಬರೂ ದರೋಡೆಕೋರರಿಗೆ ಬೈಕ್ ನಿಲ್ಲಿಸಲು ಹೇಳಿದ್ದಾರೆ. ಬೈಕ್ ನಿಲ್ಲಿಸುವ ಬದಲು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಅವರನ್ನು ಬೆನ್ನತ್ತಿದ ಪೊಲೀಸರು ತಮ್ಮ ರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಆ ಇಬ್ಬರೂ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಬಂಧಿತರನ್ನು ಗೌರವ್ ಸಿಂಗ್ ಹಾಗೂ ಸದಾನಂದ್ ಎಂದು ಗುರುತಿಸಲಾಗಿದೆ. ಕದ್ದ ಪರ್ಸ್, ರೂ.3,200 ನಗದು ಹಾಗೂ ಎಟಿಎಂ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಅವರ ಬಳಿಯಿದ್ದ 2 ನಾಡ ಪಿಸ್ತೂಲು ಹಾಗೂ ಬ್ಯಾಗ್ ಗಳನ್ನು ಸಹ ವಶಪಡಿಸಿ ಕೊಳ್ಳಲಾಗಿದೆ.
ದರೋಡೆ ನಡೆಸಲು ಬಳಸಲಾದ ಬೈಕ್ ಅವರಿಗೆ ಸೇರಿದ್ದೇ ಅಥವಾ ಕಳುವು ಮಾಡಲಾಗಿದ್ದೇ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಆದರೆ ಸಾಮಾನ್ಯವಾಗಿ ಸುಲಿಗೆಕೋರರು ಸರಗಳ್ಳತನ, ಕೊಲೆ ಹಾಗೂ ದರೋಡೆಯಂತಹ ಅಪರಾಧ ಪ್ರಕರಣಗಳಲ್ಲಿ ಕದ್ದ ಬೈಕುಗಳನ್ನೇ ಬಳಸುತ್ತಾರೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ
ಕದ್ದ ಬೈಕ್ಗಳಿಂದ ಸಿಕ್ಕಿ ಬೀಳುವುದಿಲ್ಲವೆಂಬ ಕಾರಣಕ್ಕೆ ಕದ್ದ ವಾಹನಗಳನ್ನೇ ಸುಲಿಗೆಕೋರರು ಬಳಸುತ್ತಾರೆ. ಈ ಕಾರಣಕ್ಕೆ ನಿಮ್ಮ ವಾಹನಗಳು ಕಳುವಾಗದಂತೆ ಎಚ್ಚರ ವಹಿಸುವುದು ಮುಖ್ಯ. ಕೆಲವರು ಮರೆತು ತಮ್ಮ ಬೈಕ್ ಕೀಗಳನ್ನು ಬೈಕ್ನಲ್ಲಿಯೇ ಬಿಡುತ್ತಾರೆ.
ಇದು ಕಳ್ಳರ ಕೆಲಸವನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಈ ರೀತಿಯ ಕೀಗಳನ್ನು ಹೊಂದಿರುವ ಬೈಕ್ಗಳು ಸುಲಿಗೆಕೋರರ ಮೊದಲ ಆಯ್ಕೆಯಾಗಿರುತ್ತವೆ. ಬೈಕುಗಳನ್ನು ಪಾರ್ಕ್ ಮಾಡಿದ ನಂತರ ಲಾಕ್ ಮಾಡಿ ಕೀಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.