ಬಾತುಕೋಳಿಯಿಂದ ಸಾಧ್ಯವಾದ್ದಲ್ಲಿ ನಮ್ಮಿಂದ ಏಕೆ ಸಾಧ್ಯವಿಲ್ಲ?
ಸಂಚಾರ ನಿಯಮ ಪಾಲಿಸಿ, ಲೇನ್ ತಪ್ಪದೇ ವಾಹನ ಚಲಾಯಿಸಿ ಎಂಬುದನ್ನು ಪದೇ ಪದೇ ಒತ್ತಿ ಒತ್ತಿ ಹೇಳಲಾಗುತ್ತಿದೆಯಾದರೂ ವಾಹನ ಸವಾರರು ಮಾತ್ರ ಕಿಂಚಿತ್ತು ಗಮನ ಕೊಡುವುವಿಲ್ಲ. ಪರಿಣಾಮ ಯಾರೋ ಮಾಡಿದ ತಪ್ಪಿಗಾಗಿ ಅಪಘಾತ ಪ್ರಕರಣಗಳು ನಡೆಯುತ್ತಲೇ ಇದೆ.
Also Read: ಬೆಂಗ್ಳೂಗರಿಗರೇ ಎಚ್ಚರ; ನಿಮ್ಮ ಡಿಎಲ್ ರದ್ದು ಆದಿತು?
ಈ ನಿಟ್ಟಿನಲ್ಲಿ ವಾಹನ ಸವಾರರನ್ನು ಎಚ್ಚರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿನೂತನ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಅದೇನಂತೀರಾ ? ಬನ್ನಿ ಚಿತ್ರಪುಟದಲ್ಲಿ ಈ ಬಗ್ಗೆ ವಿವರಣೆ ಕೊಡುತ್ತೇವೆ.

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಎಲ್ಲರ ಗಮನ ಸೆಳೆಯಲು ಬಾತುಕೋಳಿಗಳನ್ನು ರಸ್ತೆಗಿಳಿಸಿತ್ತು.

ಹಿಂಡು ಹಿಂಡಾಗಿ ಸಾಗುವ ಬಾತುಕೋಳಿಗಳು ಯಾವತ್ತೂ ಸಾಲನ್ನು ಮುರಿಯುದಿಲ್ಲ. ಇದರಿಂದಲೇ ಸ್ಪೂರ್ತಿ ಪಡೆದಿರುವ ಸಂಚಾರ ಇಲಾಖೆಯು ಇಂತಹದೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ನಮ್ಮ ದೈನಂದಿನ ವಾಹನ ಸವಾರಿಯಲ್ಲಿ ಸಂಭವಿಸುವ ತಪ್ಪುಗಳು ಇದಾಗಿದ್ದು, ಪ್ರತಿಯೊಬ್ಬರು ಬೇಗನೇ ಗುರಿ ಮುಟ್ಟುವ ಅವಸರದಲ್ಲಿ ಶಿಸ್ತುಬದ್ಧ ಸಂಚಾರ ನಿಮಯಗಳನ್ನು ಪಾಲಿಸುವಲ್ಲಿ ವಿಫಲವಾಗುತ್ತಾರೆ.

ಇನ್ನೊಂದೆಡೆ ಬಾತುಕೋಳಿಗಳು ನಮಗೆಲ್ಲರಿಗೂ ಮಾದರಿಯಾಗಿದ್ದು, ಸಂಯಮದಿಂದ ಸಂಚಾರ ನಿಯಮ ಹೇಗೆ ಪಾಲಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದೆ. ಇಲ್ಲಿ ರಸ್ತೆ ದಾಟಲು ಮರಿ ಬಾತುಕೋಳಿಗಳನ್ನು ಬಳಕೆ ಮಾಡಿರುವುದು ಅಷ್ಟೇ ಗಮನಾರ್ಹವೆನಿಸುತ್ತದೆ.

ಒಟ್ಟಿನಲ್ಲಿ ಮೂಡುವ ಪ್ರಶ್ನೆ, ಬಾತುಕೋಳಿಗಳಿಂದ ಸಾಧ್ಯವಾದ್ದಲ್ಲಿ ಸಂಚಾರ ನಿಮಯಗಳನ್ನು ಪಾಲಿಸಲು ನಮ್ಮಿಂದ ಏಕೆ ಸಾಧ್ಯವಿಲ್ಲ ? ಇದಕ್ಕೆ ಕೆಳಗಡೆ ಕೊಟ್ಟಿರುವ ಕಾಮೆಂಟ್ ಬಾಕ್ಸ್ ನಲ್ಲಿ ನೀವೇ ಉತ್ತರಿಸಿ.

ಬೆಂಗಳೂರು ನಗರ ಮಧ್ಯೆ ದೈತ್ಯ ಅನಕೊಂಡ; ಬೆಚ್ಚಿಬಿದ್ದ ಜನ! ಮುಂದಕ್ಕೆ ಓದಿ
Source: TIMES NOW


Click it and Unblock the Notifications








