ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗದ ಭಾಗವು ಗುಜರಾತ್‌ನಲ್ಲಿ ಕೆಲವು ಎಮ್ಮೆಗಳಿಗೆ ಬಡಿದು ಹಾನಿಗೊಳಗಾಗಿತ್ತು, ಇದನ್ನು ರೈಲ್ವೆ ಇಲಾಖೆ ಕೇವಲ 24 ಗಂಟೆಗಳಲ್ಲಿ ದುರಸ್ತಿ ಮಾಡಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗವು ಗುರುವಾರ ಬೆಳಿಗ್ಗೆ 11.15 ರ ಸುಮಾರಿಗೆ ಅಹಮದಾಬಾದ್ ಬಳಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಹಾನಿಯಾಗಿತ್ತು. ಆ ಸಮಯದಲ್ಲಿ ರೈಲು ಗಾಂಧಿನಗರಕ್ಕೆ ಹೊರಟಿತ್ತು. ಘಟನೆಯು ಅಹಮದಾಬಾದ್‌ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಸಂಭವಿಸಿದೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಆದರೆ ಗುರುವಾರ ರೈಲು ಗಾಂಧಿನಗರ ಕ್ಯಾಪಿಟಲ್ ನಿಲ್ದಾಣಕ್ಕೆ ಮತ್ತು ಮುಂಬೈ ಸೆಂಟ್ರಲ್‌ಗೆ ಪ್ಯಾನೆಲ್ ಇಲ್ಲದೆ ಪ್ರಯಾಣಿಸಿತ್ತು. "ರೈಲಿನ ಡ್ರೈವರ್ ಕೋಚ್‌ನ ಮುಂಭಾಗದ ಕೋನ್ ಕವರ್ ಹಾಗೂ ಮೋಲ್ಡೆಡ್ ಬ್ರಾಕೆಟ್‌ಗಳು ಹಾನಿಗೊಳಗಾಗಿತ್ತು. ಈ ಘಟನೆಯಲ್ಲಿ ರೈಲಿನ ಪ್ರಮುಖ ಭಾಗಗಳಿಗೆ ಯಾವುದೇ ಹಾನಿಯಾಗಿರಲಿಲ್ಲ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಡ್ಯಾಮೇಜ್ ಆದ ಮುಂಭಾಗದ ಕೋನ್ ಅನ್ನು ಮುಂಬೈನ ಕೋಚ್ ಕೇರ್ ಸೆಂಟರ್‌ನಲ್ಲಿ ಬದಲಾಯಿಸಲಾಗಿದೆ ಎಂದು ಸೆಂಟ್ರಲ್ "ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದರು."ನಿರ್ವಹಣೆಯ ಸಮಯದಲ್ಲಿ ಮುಂಬೈ ಸೆಂಟ್ರಲ್ ಡಿಪೋದಲ್ಲಿ ಹಾನಿಗೊಳಗಾದ ನೋಸ್ ಕೋನ್ ಅನ್ನು ಹೊಸದಕ್ಕೆ ಬದಲಾಯಿಸಲಾಯಿತು. ಯಾವುದೇ ಹೆಚ್ಚುವರಿ ಅಳವಡಿಕೆಯಿಲ್ಲದೇ ರೈಲನ್ನು ಮತ್ತೆ ಸೇವೆಗೆ ತರಲಾಗಿದೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಯಾಗದಂತೆ ರೈಲು ಇಂದು ಮುಂಬೈನಿಂದ ಹೊರಟಿದೆ ಎಂದರು."

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪಶ್ಚಿಮ ರೈಲ್ವೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಸ್ವದೇಶಿ ವಿನ್ಯಾಸ ಮತ್ತು ನಿರ್ಮಾಣದ ಸೆಮಿ-ಹೈ-ಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧಿನಗರ ಕ್ಯಾಪಿಟಲ್‌ನಿಂದ ಚಾಲನೆ ನೀಡಿದ್ದರು. ಅದರ ಮರುದಿನದಿಂದಲೇ ಪ್ರಯಾಣಿಕರ ಸೇವೆಗೆ ಪ್ರಸ್ತುತಪಡಿಸಲಾಗಿತ್ತು.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯ

ಟಾಟಾ, ಸ್ಟೀಲ್ ಟು ಸಾಲ್ಟ್ ಸಮೂಹ ಸಂಸ್ಥೆಯು 2030 ರ ವೇಳೆಗೆ ಜಾಗತಿಕ ಉಕ್ಕು ಉದ್ಯಮದಲ್ಲಿ ಟಾಪ್ 5 ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ. ಇದಕ್ಕನುಗುಣವಾಗಿ ಇತ್ತೀಚೆಗೆ ಟಾಟಾ ಸ್ಟೀಲ್‌ನ ಕಾಂಪೋಸಿಟ್ಸ್ ವಿಭಾಗವು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆಸನ ವ್ಯವಸ್ಥೆಗಳಿಗಾಗಿ 145 ಕೋಟಿ ರೂ.ನ ಬೃಹತ್ ಆರ್ಡರ್ ಪಡೆದುಕೊಂಡಿತ್ತು.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಇನ್ನು ಹೊಸ ವಂದೇ ಭಾರತ್ ಪ್ರತಿ ರೈಲು ಸೆಟ್‌ನಲ್ಲಿ 16 ಕೋಚ್‌ಗಳಿರಲಿದ್ದು, ಇಂತಹ 22 ರೈಲು ಸೆಟ್‌ಗಳಿಗೆ ಟಾಟಾ ಸಂಪೂರ್ಣ ಆಸನ ವ್ಯವಸ್ಥೆಗಳ ಪೂರೈಕೆ ಮಾಡಲಿದೆ. "ಇವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಸನಗಳಾಗಿದ್ದು, ಇವುಗಳು 180 ಡಿಗ್ರಿ ತಿರುಗಬಲ್ಲವು ಮತ್ತು ವಿಮಾನ ಮಾದರಿಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರಲಿವೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಭಾರತೀಯ ರೈಲ್ವೆಯನ್ನು ಅತ್ಯಾಧುನಿಕಗೊಳಿಸಲು ಟಾಟಾ ಯೋಜಿಸಿದ್ದು, ಇಂತಹ ಆಸನ ವ್ಯವಸ್ಥೆಯು ಭಾರತದಲ್ಲಿಯೇ ಮೊದಲ ಬಾರಿಗೆ ಮಾಡಲಾಗುತ್ತಿದೆ. ಇದನ್ನು ಸೆಪ್ಟೆಂಬರ್ 2022 ರಿಂದ 12 ತಿಂಗಳುಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಟಾಟಾ ಸ್ಟೀಲ್‌ನ ತಂತ್ರಜ್ಞಾನ ಮತ್ತು ಹೊಸ ಮೆಟೀರಿಯಲ್ಸ್ ಬ್ಯುಸಿನೆಸ್‌ನ ಉಪಾಧ್ಯಕ್ಷ ದೇಬಾಶಿಶ್ ಭಟ್ಟಾಚಾರ್ಜಿ ಈ ಹಿಂದೆ ಹೇಳಿದ್ದರು.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಆಸನಗಳಲ್ಲಿ ಬಳಸಲಾಗುವ ಎಫ್‌ಆರ್‌ಪಿ ಹೆಚ್ಚಿನ ತುಕ್ಕು ನಿರೋಧಕತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತದೆ. ಇದಲ್ಲದೆ, ಇದು ಯುರೋಪಿಯನ್ ಗುಣಮಟ್ಟದ ಅಗ್ನಿಶಾಮಕ ಆಸ್ತಿಗೆ ಅನುಗುಣವಾಗಿರುತ್ತದೆ. ಪ್ರಯಾಣಿಕರಿಗೆ ಸುಧಾರಿತ ಸುರಕ್ಷತೆ ಮತ್ತು ಸೌಕರ್ಯವನ್ನು ನೀಡುತ್ತದೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಟಾಟಾ ಸ್ಟೀಲ್ ಮಹಾರಾಷ್ಟ್ರದ ಖೋಪೋಲಿಯಲ್ಲಿ ನೆದರ್‌ಲ್ಯಾಂಡ್‌ನ ತಂತ್ರಜ್ಞಾನ ಪಾಲುದಾರರ ಸಹಯೋಗದೊಂದಿಗೆ ಗ್ರೀನ್‌ಫೀಲ್ಡ್ ಸೌಲಭ್ಯವನ್ನು ಸ್ಥಾಪಿಸುತ್ತಿದೆ ಎಂದು ಭಟ್ಟಾಚಾರ್ಜಿ ಹೇಳಿದರು. ಈ ಸೌಲಭ್ಯವು ಅಲ್ಯೂಮಿನಿಯಂ ಹನಿಕೋಂಬ್ ಕೋರ್ಡ್ ಸ್ಯಾಂಡ್‌ವಿಚ್ ಪ್ಯಾನೆಲ್‌ಗಳನ್ನು ತಯಾರಿಸುತ್ತದೆ, ಇದನ್ನು ಮುಖ್ಯವಾಗಿ ರೈಲು ಮತ್ತು ಮೆಟ್ರೋ ಕೋಚ್‌ಗಳ ಒಳಾಂಗಣಕ್ಕೆ ಬಳಸಲಾಗುತ್ತದೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಜಾಗತಿಕ ಮೆಟ್ರೋ ಮತ್ತು ರೈಲ್ ಕೋಚ್ ಒಇಎಂಗಳು ಮತ್ತು ಭಾರತೀಯ ರೈಲ್ವೆ ಟಾಟಾ ನೂತನ ಘಟಕದ ಪ್ರಮುಖ ಗ್ರಾಹಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶಿ ಗ್ರಾಹಕರು ಹೆಚ್ಚಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನಲಾಗಿದೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಆಗಸ್ಟ್ 15, 2023 ರೊಳಗೆ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ. ಒಟ್ಟು 75 ರೈಲುಗಳನ್ನು ಉತ್ಪಾದಿಸಲಾಗುವುದು. ಈ ಹೊಸ ರೈಲುಗಳು ಹಳೆಯ ಮಾದರಿಗಳಿಗಿಂತ ಉತ್ತಮವಾದ ಸುಧಾರಿತ ಆವೃತ್ತಿಯಾಗಿರುತ್ತವೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಂದೇ ಭಾರತ್ ರೈಲು ಅಪಘಾತ: ಕೇವಲ 24 ಗಂಟೆಗಳಲ್ಲಿ ರೈಲು ದುರಸ್ತಿ, ಮರುದಿನವೆ ಸೇವೆಗೆ ಹಾಜರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2019ರಲ್ಲಿ ಪರಿಚಯಿಸಲಾದ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲುಗಳು ಮೂಲತಃ ಟ್ರೈನ್ 18 ಎಂದು ಕರೆಯಲ್ಪಡುತ್ತವೆ. ಪ್ರಸ್ತುತ ದೆಹಲಿ-ವಾರಣಾಸಿ ಮತ್ತು ದೆಹಲಿ-ಕರ್ತಾ ಮಾರ್ಗಗಳಲ್ಲಿ ಈ ರೈಲುಗಳು ಓಡುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.

More from DriveSpark

Article Published On: Friday, October 7, 2022, 13:32 [IST]
English summary
Vande Bharat train accident Repair in just 24 hours next day service
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+