Just In
- 49 min ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 2 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 15 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 15 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
Don't Miss!
- News ಅಚ್ಚೇದಿನಗಳಲ್ಲ-ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Movies ಪಶ್ಚಾತಾಪದ ಅಗ್ನಿಕುಂಡದಲ್ಲಿ ಪರಿಣಿತಿ ಚೋಪ್ರಾ ; ನನ್ನೆಲ್ಲ ಸೋಲುಗಳಿಗೆ ಆ ವ್ಯಕ್ತಿಗಳೇ ಕಾರಣ ಎಂದ ನಟಿ..!
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ್ಯಾಲಿ- ಪ್ರಶಸ್ತಿಗಾಗಿ ಅಂತಿಮ ಹಂತದಲ್ಲಿ ರೋಚಕ ಹಣಾಹಣಿ
ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ನಾಲ್ಕನೇ ದಿನ ನಡೆದ ಮೋಟಾರ್ ಸ್ಪರ್ಧೆಯ ಮಹತ್ವದ ಮಾಹಿತಿ ಇಲ್ಲಿದೆ.
ಮೊಬಿಲ್ ಒನ್ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿರುವ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ನಾಲ್ಕನೇ ದಿನ ನಡೆದ ಮೋಟಾರ್ ಸ್ಪರ್ಧೆಯ ಮಹತ್ವದ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ಆರಂಭವಾಗಿರುವ 15ನೇ ಆವೃತ್ತಿಯ ದಕ್ಷಿಣ ಡೇರ್ ಮೋಟಾರ್ ರ್ಯಾಲಿಯು ಐದನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ಕನೇ ದಿನ ಅಂತ್ಯಕ್ಕೆ ಸೂಪರ್ ಸ್ಪೆಷಲ್ ಸ್ಪೇಜ್ ವಿಭಾಗದಲ್ಲಿ ನಡೆದ ಸ್ಪರ್ಧೆಗಳು ಭಾರೀ
ರೊಚಕತೆಯಿಂದ ಕೂಡಿದ್ದವು.
ಈ ಮೂಲಕ ಕರ್ನಾಟಕ ಗಡಿದಾಟಿರುವ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳು ಸದ್ಯ ಮಹಾರಾಷ್ಟ್ರದ ಕೊಲ್ಲಾಪುರ ತಲುಪಿದ್ದು, ಕುದುರೆಮಾಣಿಯಲ್ಲಿ ನಡೆದ ಕೆಸರು ಸ್ಪರ್ಧೆಗಳು ಮೋಟಾರ್ ರೇಸ್ ಸ್ಪರ್ಧಿಗಳಿಗೆ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.
ಅಲ್ಟಿಮೆಟ್ ಕಾರು ರೇಸ್ ವಿಭಾಗ ಮತ್ತು ಅಲ್ಟಿಮೆಟ್ ಬೈಕ್ ರೇಸ್ ವಿಭಾಗಗಳಲ್ಲಿ ಸ್ಪರ್ಧೆಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ನಾಲ್ಕನೇ ದಿನದ ಅಂತ್ಯಕ್ಕೆ ಒಟ್ಟು 329 ಕಿಮಿ ದೂರವನ್ನು ಕ್ರಮಿಸಿರುವ ರ್ಯಾಲಿಯು ಇಂದು ನಿಗದಿತ ಗುರಿ ತಲುಪಲಿದೆ.
ಅಲ್ಟಿಮೇಟ್ ಕಾರುಗಳು ವಿಭಾಗದಲ್ಲಿ ಮಾರುತಿ ಸುಜುಕಿ ತಂಡದ ಸುರೇಶ್ ರಾಣಾ, ಅಶ್ವಿನ್ ನಾಯ್ಕ್ ಪ್ರಥಮ ಸ್ಥಾನದಲ್ಲೇ ಮುನ್ನಡೆ ಕಾಯ್ದುಕೊಂಡಿದ್ದು, ಎನ್ಎಸ್ ನಿಜಾಮಿ, ಸಮರ್ಥ್ ಯಾದವ್ ಎರಡನೇ ಸ್ಥಾನಕ್ಕೆ ಮತ್ತು ಸಂದೀಪ್ ಶರ್ಮಾ, ಕರಣ್ ಆಚಾರ್ಯ ಮೂರನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅದೇ ರೀತಿಯಾಗಿ ಅಲ್ಟಿಮೆಟ್ ಬೈಕ್ ವಿಭಾಗದಲ್ಲಿ ಆರ್.ನಟರಾಜ್ ಪ್ರಥಮ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಸ್ಥಾನದಲ್ಲಿ ಅಬ್ದುಲ್ ವಾಹೀದ್ ಮತ್ತು ಮೂರನೇ ಸ್ಥಾನದಲ್ಲಿ ಸಂಜಯ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಹತ್ತು ಹಲವು ಕಸರತ್ತುಗಳ ಮೂಲಕ ಸ್ಪರ್ಧೆಯ ಆರಂಭದ ಸ್ಥಳದಿಂದ 2 ಸಾವಿರ ಕಿ.ಮಿ ಸಾಗಿರುವ ಮೋಟಾರ್ ಸ್ಪರ್ಧಿಗಳು ಇಂದು ಅಂತಿಮ ಹಂತವನ್ನು ತಲುಪಲಿದ್ದು, ದಿನದ ಅಂತ್ಯಕ್ಕೆ ಮಹತ್ವದ ಫಲೀತಾಂಶ ಹೊರಬಿಳಲಿದೆ.