ರಸ್ಥೆ ಅಪಘಾತದಿಂದ ಪಾರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ..
ದಿನದಿಂದ ದಿನಕ್ಕೆ ರಸ್ಥೆ ಅಪಘಾತಗಳು ಸಾಂಭವಿಸುತಿದ್ದು, ದಿನಕ್ಕೆ ಬರೊಬ್ಬರಿ ನೂರಕ್ಕು ಹೆಚ್ಚು ರಸ್ಥೆ ಅಪಘಾತಗಳು ನಡೆಯುತ್ತಲೆಯಿವೆ.
ದಿನದಿಂದ ದಿನಕ್ಕೆ ರಸ್ಥೆ ಅಪಘಾತಗಳು ಸಾಂಭವಿಸುತಿದ್ದು, ದಿನಕ್ಕೆ ಬರೊಬ್ಬರಿ ನೂರಕ್ಕು ಹೆಚ್ಚು ರಸ್ಥೆ ಅಪಘಾತಗಳು ನಡೆಯುತ್ತಲೆಯಿವೆ. ಇದೀಗ ಉತ್ತರ ಕರ್ನಾಟಕದ ವಾಣಿಜ್ಯೋದ್ಯಮ ಹಾಗ ಕೆಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆಯವರ ಬೆಂಗಾವಲು ಕಾರು ಅಪಘಾತಕ್ಕೆ ಈಡಾಗಿದೆ.

ನಿನ್ನೆ ರಾತ್ರಿ (ಏಪ್ರಿಲ್ 17) ರ ಸಮಯದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಲಗೇರಿ ಬಳಿ ಅನಂತ್ ಕುಮಾರ್ ಹೆಗಡೆಯವರು ಕಾರಿನಲ್ಲಿ ಚಲಿಸುತ್ತಿದ್ದಾಗ, ಟ್ರಕ್ ಒಂದು ಅವರ ಕಾರನ್ನು ಗುದ್ದಲ್ಲು ಪ್ರಯತ್ನಿಸಿತ್ತು. ಅವರಿದ್ದ ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಸಚಿವರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ.

ಅನಂತ್ ಕುಮಾರ್ ಹೆಗಡೆಯವರಿದ್ದ ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಸಚಿವರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಅವರ ಹಿಂದೆಯೆ ಚಲಿಸುತ್ತಿದ್ದ ಅವರ ಬೊಂಗಾವಲಿನ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲಿದ್ದ ಸಹಾಯಕ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ.

ಈ ಕುರಿತು ಅನಂತ್ ಕುಮಾರ್ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಇದು ನನ್ನನ್ನು ಕೊಲೆ ಮಾಡಲು ಬೇಕೆಂದೇ ಮಾಡಿದ ಪಿತೂರಿ. ನಮ್ಮ ಸಹಾಯಕ ಸಿಬ್ಬಂದಿಯೊಬ್ಬರು ಈ ಅಪಘಾತದಿಂದ ಘಂಬೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಗಂಭೀರ ತನಿಕೆ ನಡೆಯಲೇಬೇಕು ಎಂದು ಹೇಳಿಕೊಂಡಿದ್ದಾರೆ.

ಘಟನೆಗೆ ಸಂಭಂದಿಸಿದಂತೆ ಪೋಳೀಸರು ನಾಸಿರ್ ಎಂಬ ಟ್ರಕ್ ಚಾಲಕನನ್ನು ಈಗಾಗಲೆ ಬಂಧಿಸಿದ್ದು, ಘಟನೆಗು ಮುನ್ನ ಆತ ಯಾವುದೇ ರೀತಿಯಾದ ಮಧ್ಯಸೇವನೆ ಮಾಡಿರಲಿಲ್ಲ ಎಂಬುದು ದೃಢವಾಗಿದೆ ಎನ್ನಲಾಗಿದೆ.

ಟ್ರಕ್ ಡ್ರೈವರ್ ರಸ್ಥೆಯ ನಿಯಮಗಳನ್ನು ತಪ್ಪಾಗಿ ಪಾಲಿಸಿದ್ದಲ್ಲದೆ ತಪ್ಪು ದಾರಿಯಲ್ಲಿ ಟ್ರಕ್ ಅನ್ನು ಚಲಾಯಿಸಿದ್ದಾನೆ. ಸ್ಥಳಿಯರ ಕೈಗೆ ಸಿಕ್ಕ ಟ್ರಕ್ ಡ್ರೈವರ್ ನಾಸಿರ್ ಈಗ ಪೋಲೀಸರ ವಶದಲ್ಲಿದ್ದಾನೆ.
ಇನ್ನೇನು ಚುನಾವಣ ದಿನಾಂಕ ಹತ್ತಿರ ಬರುತ್ತಿರುವುದರಿಂದ ಅನಂತ್ ಕುಮಾರ್ ಹೆಗಡೆಯವರ ಮೇಲೆ ಈ ರೀತಿಯ ಕೊಲೆಯ ಪಿತ್ತೂರಿ ನಡೆದಿದೆ. ಇದು ನಿಜಕ್ಕು ಕೊಲೆಯ ಪಿತೂರಿಯೆ ಅಥವ ಸಾದಾರಣ ರಸ್ಥೆ ಅಪಘಾತವೆ ಎಂದು ಇನ್ನು ಕೆಲವೆ ದಿನಗಳಲ್ಲಿ ತಿಳಿಯಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್ಗಳನ್ನು ತಪ್ಪದೇ ಪಾಲಿಸಿ...
ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..
ಕಾರಿನ ಫ್ಯೂಲ್ ಟ್ಯಾಂಕ್ನಲ್ಲಿ ನೀರು ಹೋದ್ರೆ ಏನ್ ಮಾಡೋದು?
ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್ ಮೆಡ್ 1000 ಸಿಸಿ ಬೈಕ್ ಇದು...


Click it and Unblock the Notifications








