Just In
- 8 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 11 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
- 11 hrs ago ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮಾರ್ಪಾಡಾದ ಬಡವರ ಮಾರುತಿ ಆಲ್ಟೋ ಕಾರಿಗೆ ನೆಟ್ಟಿಗರು ಫಿದಾ
- 11 hrs ago ಈ ಕಾರಿನ ವಿಡಿಯೋ ಬಿಡುಗಡೆ ಮಾಡಿದ ಟೊಯೋಟಾ: ಫ್ರಾಂಕ್ಸ್ ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ!
Don't Miss!
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- News Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Finance ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿಎಂ ಕೇಜ್ರಿವಾಲ್
ದೆಹಲಿ ಸರ್ಕಾರವು ತನ್ನ ಕುಖ್ಯಾತ ಸಮ ಬೆಸ ನಿಯಮವನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. ವಾಯು ಮಾಲಿನ್ಯವು ರಾಜಧಾನಿಯಲ್ಲಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ, ವಾಯು ಮಾಲಿನ್ಯ ಪ್ರಮಾಣವನ್ನು ತಡೆಗಟ್ಟಲು ಈ ನಿರ್ಧಾರ ತೆಗೆದುಕೊಂಡಿದೆ.
ಈ ಸಮ ಬೆಸ ನಿಯಮವನ್ನು ನವೆಂಬರ್ 4ರಿಂದ 15ರವರೆಗಿನ ಅಲ್ಪ ಅವಧಿಗೆ ಜಾರಿಗೊಳಿಸಲಾಗುವುದು. ಈ ನಿಯಮದ ಪ್ರಕಾರ, ದೆಹಲಿಯ ಕಾರು ಚಾಲಕರು ದಿನ ಬಿಟ್ಟು ದಿನ ಬೆಸ ಹಾಗೂ ಸಮ ಸಂಖ್ಯೆಗಳೊಂದಿಗೆ ಕೊನೆಗೊಳ್ಳುವ ಕಾರುಗಳನ್ನು ಚಲಾಯಿಸಬೇಕಾಗುತ್ತದೆ. ಈ ಹಿಂದೆ ಈ ನಿಯಮವು ಅಲ್ಪ ಪ್ರಮಾಣದಲ್ಲಿ ಯಶಸ್ಸು ಕಂಡಿತ್ತು.
ಇದರಿಂದ ದೆಹಲಿಯ ಮಾಲಿನ್ಯ ಪ್ರಮಾಣವು ಗಮನಾರ್ಹವಾಗಿ ಇಳಿಕೆಯಾಗಿತ್ತು. ಸುರಕ್ಷತೆ ದೃಷ್ಟಿಯಿಂದ ತುರ್ತು ವಾಹನಗಳಿಗೆ ಹಾಗೂ ಮಹಿಳಾ ಚಾಲಕಿಯರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಬೆಸ ಸಮ ಯೋಜನೆಯನ್ನು ದೆಹಲಿಯಲ್ಲಿ 2016ರಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಯಿತು.
ಜಾರಿಯಾದಾಗಿನಿಂದ ಈ ಯೋಜನೆಯು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಾರಾಂತ್ಯದಲ್ಲಿ ಬೆಸ ಸಮ ನಿಯಮವು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಹೆಚ್ಚು ಅವಧಿಗೆ ಜಾರಿಗೊಳಿಸಿದರೆ ಅನಾನುಕೂಲವಾಗುವ ಕಾರಣಕ್ಕೆ ಬೆಸ ಸಮ ನಿಯಮವನ್ನು ಸೀಮಿತ ಸಮಯದ ಅವಧಿಗೆ ಮಾತ್ರ ಜಾರಿಗೊಳಿಸಲಾಗುವುದು. ಸಂಶೋಧನೆಯ ಪ್ರಕಾರ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ.
ವಾಹನಗಳು, ಕೈಗಾರಿಕೆಗಳು, ಕಸವನ್ನು ಸುಡುವುದರಿಂದ ಉಂಟಾಗುವ ಹೊಗೆ, ಹತ್ತಿರದ ಜಮೀನುಗಳಲ್ಲಿರುವ ಬೆಳೆ ಅವಶೇಷಗಳಿಂದ ವಾಯು ಮಾಲಿನ್ಯವು ಏರಿಕೆಯಾಗುತ್ತಿದೆ. ದೆಹಲಿ ಸರ್ಕಾರವು ವಾಯು ಮಾಲಿನ್ಯ ನಿಯಂತ್ರಣಕ್ಕೆ ಏಳು ಅಂಶಗಳ ಕ್ರಿಯಾ ಯೋಜನೆಯನ್ನು ಸಿದ್ದ ಪಡಿಸಿದೆ.
ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರು ಮಾಲಿನ್ಯವು 25%ನಷ್ಟು ಕಡಿಮೆಯಾಗಿದೆ. ವಾಯು ಮಾಲಿನ್ಯವು ಕಡಿಮೆಗೊಳಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗುತ್ತಿರುವ ಏಕೈಕ ರಾಜ್ಯ ದೆಹಲಿಯಾಗಿದೆ ಎಂದು ಹೇಳಿದರು.
MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?
ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿಯ ರಾಜ್ಯ ಸರ್ಕಾರವು 1,000 ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡುಗಡೆಗೊಳಿಸಿದೆ. ಈ ಬಸ್ಸುಗಳು ಪರಿಸರ ಸ್ನೇಹಿಯಾಗಿದ್ದು ಮಾಲಿನ್ಯವನ್ನು ಕಡಿಮೆ ಮಾಡಲಿವೆ. ಸಮ ಬೆಸ ನಿಯಮವನ್ನು ಮೊದಲ ಬಾರಿಗೆ 2014ರಲ್ಲಿ ರೋಮ್ನಲ್ಲಿ ಜಾರಿಗೊಳಿಸಲಾಗಿತ್ತು.
MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!
ರೋಮ್ ನಗರದಲ್ಲಿ ವಾಯು ಮಾಲಿನ್ಯವು ಯಾವ ಪ್ರಮಾಣದಲ್ಲಿ ಹದಗೆಟ್ಟಿತ್ತು ಎಂದರೆ ಅಲ್ಲಿನ ಸರ್ಕಾರವು ರಸ್ತೆಯಲ್ಲಿ ಕಾರುಗಳ ಸಂಚಾರನ್ನು ನಿಷೇಧಿಸಿತ್ತು. ಈ ನಿಯಮವನ್ನು ಅಲ್ಲಿ ಜಾರಿಗೊಳಿಸಿದ ನಂತರ ವಾಯು ಮಾಲಿನ್ಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗಿತ್ತು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಗಮನಿಸಬೇಕಾದ ಸಂಗತಿಯೆಂದರೆ, ದೆಹಲಿ ಸರ್ಕಾರವು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸದಂತೆ ದೆಹಲಿಯ ನಾಗರೀಕರನ್ನು ಒತ್ತಾಯಿಸಿದೆ. ಇದರ ಬದಲಿಗೆ ಸರ್ಕಾರದ ವತಿಯಿಂದ ಲೇಸರ್ ಶೋವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಕಳೆದ ಕೆಲ ವರ್ಷಗಳಿಂದ ಮಾಲಿನ್ಯ ಪ್ರಮಾಣವು ವಿಪರೀತವಾಗಿ ಏರಿಕೆಯಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸುವವರೆಗೆ ಸಮ ಬೆಸ ಯೋಜನೆಯು ತಾತ್ಕಾಲಿಕ ಪರಿಹಾರವಾಗಿರಲಿದೆ. ದೀಪಾವಳಿಯ ಪಟಾಕಿ ಸಂಬಂಧ ಮುಖ್ಯಮಂತ್ರಿ ಕೇಜ್ರಿವಾಲ್ರವರು ನೀಡಿರುವ ಹೇಳಿಕೆಯು ಹಾಸ್ಯಾಸ್ಪದವಾಗಿದೆ.