Just In
- 6 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 7 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 8 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 8 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೆಹಲಿಯ ದಟ್ಟವಾದ ಮಂಜಿಗೆ ಆಸ್ಟ್ರೇಲಿಯನ್ ರಾಯಲ್ ಎನ್ಫೀಲ್ಡ್ ಬೈಕ್ ಸವಾರ ಬಲಿ
ದಟ್ಟವಾದ ಮಂಜು, ಹೊಗೆ ಮತ್ತು ದೂಳು ದೆಹಲಿಯ ಜನತೆಯನ್ನು ತತ್ತರಿಸುವಂತೆ ಮಾಡಿದೆ. ದಿನವಿಡೀ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಂದ ಬೆಳಕಿನಿಂದಾಗಿ ವಾಹನ ಚಾಲನೆ ಕಷ್ಟವಾಗಿದೆ.
ದಟ್ಟವಾದ ಮಂಜು, ಹೊಗೆ ಮತ್ತು ದೂಳು ದೆಹಲಿಯ ಜನತೆಯನ್ನು ತತ್ತರಿಸುವಂತೆ ಮಾಡಿದೆ. ದಿನವಿಡೀ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಂದ ಬೆಳಕಿನಿಂದಾಗಿ ವಾಹನ ಚಾಲನೆ ಕಷ್ಟವಾಗಿದೆ.
ಆದ್ರೆ, ಇಷ್ಟೇ ಆಗಿದ್ದರೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲವೇನೋ !! ಆದರೆ, ಈ ಮಂಜು ನೂರಾರು ಜನರ ಪ್ರಾಣ ತೆಗೆದುಕೊಂಡಿರುವುದು ಸದ್ಯ ಎಲ್ಲರಿಗೂ ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತೆ ಮಾಡಿರುವುದಂತೂ ಖಂಡಿತ.
ಈಗ ಈ ದಟ್ಟವಾದ ಮಂಜು ಮತ್ತೊಂದು ಪ್ರಾಣವನ್ನು ಬಲಿತೆಗೆದುಕೊಂಡಿದೆ. ಹೌದು, 26 ವರ್ಷದ ಆಸ್ಟ್ರೇಲಿಯನ್ ರಾಯಲ್ ಎನ್ಫೀಲ್ಡ್ ಬೈಕ್ ಸವಾರನೊಬ್ಬ ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ಟ್ರಕ್ ಒಂದು ಮ್ಯಾಥ್ಯೂ ಆಂಟಿಯಾರ್ಡಲ್ ಅವರಿಗೆ ಬಂದು ಅಪ್ಪಳಿಸಿದ್ದು, ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬೆನೆಟ್ ಕೊವಾಲ್ಟ್ ಮತ್ತು ಇಯಾನ್ ಬೋರ್ಗ್ ಎಂಬ ಹೆಸರಿನ ಇನ್ನೆರಡು ಸಹ ಸವಾರರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಈ ಘಟನೆಯು ದೆಹಲಿ ಆಗ್ರಾ ಎಕ್ಸ್ಪ್ರೆಸ್ ಹೆದ್ದಾರಿಯ ಡನ್ಕೌರ್ ಗ್ರಾಮದ ಸಮೀಪದಲ್ಲಿ ಸಂಭವಿಸಿದೆ. ಎಲ್ಲಾ ರಾಯಲ್ ಎನ್ಫೀಲ್ಡ್ ಬೈಕ್ ಸವಾರರೂ ಸಹ ಆಗ್ರಾ ಕಡೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಅಪಘಾತದಲ್ಲಿ ಗಾಯಗೊಂಡ ಸಹ ಸವಾರರಾದ ಬೆನೆಟ್ ಕೊವಾಲ್ಟ್ ಮತ್ತು ಇಯಾನ್ ಬೋರ್ಗ್, ಬಸ್ ಚಾಲಕ ಧರ್ಮೇಂದ್ರ, ಕಂಡಕ್ಟರ್ ಪುಷ್ಪೇಂದ್ರ ಮತ್ತು ಪ್ರಯಾಣಿಕ ರಾಜ್ವತಿ ಎಂಬುವವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಹಿಮವು, ಭಾರತದ ಉತ್ತರದ ರಾಜ್ಯಗಳಲ್ಲಿ, ವಿಶೇಷವಾಗಿ ನವೆಂಬರ್ ಮತ್ತು ಫೆಬ್ರವರಿಯ ಚಳಿಗಾಲದಲ್ಲಿ ಅಪಘಾತಗಳಿಗೆ ಪ್ರಮುಖ ಕಾರಣ. ಈ ತೊಂದರೆಯಿಂದ ದೂರವಿರಲು ಕೆಲವು ಟಿಪ್ಸ್ಗಳನ್ನು ಕೆಳಗೆ ನೀಡಲಾಗಿದೆ :
1. ತುರ್ತುಸ್ಥಿತಿಯ ಹೊರತು ಬೇರೆ ಸಮಯದಲ್ಲಿ ಹೊರಗಡೆ ಹೋಗುವುದನ್ನು ಕಡಿಮೆ ಮಾಡಿಕೊಳ್ಳಿ.
2. ಪ್ರಯಾಣ ಬೆಳಸಬೇಕಾದ ಸಂದರ್ಭ ಬಂದ ಸಂದರ್ಭದಲ್ಲಿ ಆದಷ್ಟು ನಿಧಾನವಾಗಿ ವಾಹನ ಚಾಲನೆ ಮಾಡಿ.
3 ಬೆಳಗಿನ ಹೊತ್ತು ಸಂಚಾರಕ್ಕೆ ಸೂಕ್ತ ಸಮಯವಾಗಿದೆ.
4 ಸಂಚಾರಿಸುವಾಗ, ಮಂಜು ದೀಪಗಳು ಮರೆಯದೆ ಚಾಲನೆ ಸ್ಥಿತಿಯಲ್ಲಿಟ್ಟಿರಿ.
5 ಲೇನ್ ಗುರುತುಗಳನ್ನು ಮರೆಯದೆ ಅನುಸರಿಸಿ.