ತುರ್ತು ಸಂದರ್ಭಗಳಲ್ಲಿ ಇನ್ಮುಂದೆ ಹೆದ್ದಾರಿಗಳೇ ಫ್ಲೈಟ್ ರನ್ ವೇ..!
ಯುದ್ಧ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ವಾಯುಸೇನೆಯು ದೇಶದ ಪ್ರಮುಖ 12 ಹೆದ್ದಾರಿಗಳನ್ನು ತಾತ್ಕಾಲಿಕ 'ರನ್ ವೇ'ಗಳನ್ನಾಗಿ ಬಳಕೆ ಮಾಡಲಿದೆ.
ಯುದ್ಧ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ವಾಯುಸೇನೆಯು ದೇಶದ ಪ್ರಮುಖ 12 ಹೆದ್ದಾರಿಗಳನ್ನು ತಾತ್ಕಾಲಿಕ 'ರನ್ ವೇ'ಗಳನ್ನಾಗಿ ಬಳಕೆ ಮಾಡಲಿದೆ.

ವಿಪತ್ತು ನಿರ್ವಹಣೆ ಮತ್ತು ಯುದ್ಧ ಸಂದರ್ಭಗಳಲ್ಲಿ ತುರ್ತು ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತೀಯ ವಾಯುಸೇನಾ ಪಡೆಯು ಸೂಕ್ಷ್ಮ ಪ್ರದೇಶಗಳನ್ನು ಆಧರಿಸಿ ಪ್ರಮುಖ 12 ರಾಷ್ಟ್ರೀಯ ಹೆದ್ದಾರಿಗಳನ್ನು ರನ್ ವೇ ಆಗಿ ಬಳಕೆ ಮಾಡಲಿದೆ.

ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ತೊಂದರೆಯಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಮತ್ತು ವಿಪತ್ತು ಪ್ರದೇಶಗಳನ್ನು ತ್ವರಿತವಾಗಿ ತಲುಪುವ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ತಾತ್ಕಲಿಕ ರನ್ ವೇಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಿದೆ.

ದೆಹಲಿ ಟು ಆಗ್ರಾ,ಚೆನ್ನೈ ಟು ಪುದುಚೇರಿ, ಲಕ್ನೋ ಟು ಆಗ್ರಾ, ಜೆಮ್ಶೆಡ್ಪುರ್ ಟು ಬಾಲಾಸೊರೆ, ಚತ್ರಪುರ ಟು ದಿಗಾ, ಕ್ರಿಷ್ಣಾಗಾಂಜ್ ಟು ಇಸ್ಲಾಮಾಬಾದ್, ದೆಹಲಿ ಟು ಮೊರದಾಬಾದ್, ವಿಜಯವಾಡ್ ಟು ರಾಜಮಂಡ್ರಿ ಸೇರಿದಂತೆ ಒಟ್ಟು 12 ಹೆದ್ದಾರಿ ಮಾರ್ಗಗಳನ್ನು ಐಎಎಫ್ ಆಯ್ಕೆ ಮಾಡಿದೆ.

ಹೀಗಾಗಿ ಐಎಎಫ್ ಆಯ್ಕೆ ಮಾಡಿರುವ ಹೆದ್ದಾರಿ ಮಾರ್ಗಗಳನ್ನು ಮತ್ತಷ್ಟು ಆಧುನಿಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಾ ಸಮ್ಮತಿ ಸೂಚಿಸಿದ್ದು, ಅಂತರ್ರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಲಭ್ಯವಿರಲಿವೆ.

ಇನ್ನು ತುರ್ತು ಸಂದರ್ಭಗಳಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಹಕ್ಕು ಪಡೆದುಕೊಂಡಿರುವ ಐಎಎಫ್, ವಾಹನ ಸವಾರರಿಗೆ ತೊಂದರೆಯಾದಂತೆ ಪರ್ಯಾಯ ಮಾರ್ಗಗಳನ್ನು ಕೂಡಾ ಸೂಚಿಸಲಿದೆ.

ಈ ಯೋಜನೆಯಿಂದ ವಿಮಾನ ನಿಲ್ದಾಣಗಳ ಮೇಲಿನ ಅವಲಂಬನೆ ತಪ್ಪಲಿದ್ದು, ನೇರವಾಗಿ ವಿಪತ್ತು ಪೀಡಿತ ಪ್ರದೇಶಗಳಗೆ ಸಂಪರ್ಕ ಹೊಂದಲು ಸಾಧ್ಯವಾಗುವುದಲ್ಲದೇ ನಿರಾಶ್ರಿತರಿಗೆ ಆಶ್ರಯ ನೀಡಲು ಸಹಾಯವಾಗುವಂತೆ ಹೆದ್ದಾರಿಗಳನ್ನು ಮರು ನಿರ್ಮಾಣ ಮಾಡಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪರಿಸರ ವಿಕೋಪಗಳು ಮತ್ತು ಯುದ್ಧ ಸಂದರ್ಭಗಳಲ್ಲಿ ತುರ್ತು ಕಾರ್ಯಾಚರಣೆಗೆ ಇದು ಸಂಪೂರ್ಣ ಸಹಕಾರಿಯಾಗಲಿದ್ದು, ಐಎಎಫ್ ಕೈಗೊಂಡಿರುವ ನಿರ್ಧಾರ ಮಹತ್ವದ ಯೋಜನೆಯಾಗಿದೆ ಎಂದರೇ ತಪ್ಪಾಗಲಾರದು.


Click it and Unblock the Notifications








