Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 11 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 12 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುರ್ತು ಸಂದರ್ಭಗಳಲ್ಲಿ ಇನ್ಮುಂದೆ ಹೆದ್ದಾರಿಗಳೇ ಫ್ಲೈಟ್ ರನ್ ವೇ..!
ಯುದ್ಧ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ವಾಯುಸೇನೆಯು ದೇಶದ ಪ್ರಮುಖ 12 ಹೆದ್ದಾರಿಗಳನ್ನು ತಾತ್ಕಾಲಿಕ 'ರನ್ ವೇ'ಗಳನ್ನಾಗಿ ಬಳಕೆ ಮಾಡಲಿದೆ.
ಯುದ್ಧ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ವಾಯುಸೇನೆಯು ದೇಶದ ಪ್ರಮುಖ 12 ಹೆದ್ದಾರಿಗಳನ್ನು ತಾತ್ಕಾಲಿಕ 'ರನ್ ವೇ'ಗಳನ್ನಾಗಿ ಬಳಕೆ ಮಾಡಲಿದೆ.
ವಿಪತ್ತು ನಿರ್ವಹಣೆ ಮತ್ತು ಯುದ್ಧ ಸಂದರ್ಭಗಳಲ್ಲಿ ತುರ್ತು ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತೀಯ ವಾಯುಸೇನಾ ಪಡೆಯು ಸೂಕ್ಷ್ಮ ಪ್ರದೇಶಗಳನ್ನು ಆಧರಿಸಿ ಪ್ರಮುಖ 12 ರಾಷ್ಟ್ರೀಯ ಹೆದ್ದಾರಿಗಳನ್ನು ರನ್ ವೇ ಆಗಿ ಬಳಕೆ ಮಾಡಲಿದೆ.
ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ತೊಂದರೆಯಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಮತ್ತು ವಿಪತ್ತು ಪ್ರದೇಶಗಳನ್ನು ತ್ವರಿತವಾಗಿ ತಲುಪುವ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ತಾತ್ಕಲಿಕ ರನ್ ವೇಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಿದೆ.
ದೆಹಲಿ ಟು ಆಗ್ರಾ,ಚೆನ್ನೈ ಟು ಪುದುಚೇರಿ, ಲಕ್ನೋ ಟು ಆಗ್ರಾ, ಜೆಮ್ಶೆಡ್ಪುರ್ ಟು ಬಾಲಾಸೊರೆ, ಚತ್ರಪುರ ಟು ದಿಗಾ, ಕ್ರಿಷ್ಣಾಗಾಂಜ್ ಟು ಇಸ್ಲಾಮಾಬಾದ್, ದೆಹಲಿ ಟು ಮೊರದಾಬಾದ್, ವಿಜಯವಾಡ್ ಟು ರಾಜಮಂಡ್ರಿ ಸೇರಿದಂತೆ ಒಟ್ಟು 12 ಹೆದ್ದಾರಿ ಮಾರ್ಗಗಳನ್ನು ಐಎಎಫ್ ಆಯ್ಕೆ ಮಾಡಿದೆ.
ಹೀಗಾಗಿ ಐಎಎಫ್ ಆಯ್ಕೆ ಮಾಡಿರುವ ಹೆದ್ದಾರಿ ಮಾರ್ಗಗಳನ್ನು ಮತ್ತಷ್ಟು ಆಧುನಿಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಾ ಸಮ್ಮತಿ ಸೂಚಿಸಿದ್ದು, ಅಂತರ್ರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಲಭ್ಯವಿರಲಿವೆ.
ಇನ್ನು ತುರ್ತು ಸಂದರ್ಭಗಳಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಹಕ್ಕು ಪಡೆದುಕೊಂಡಿರುವ ಐಎಎಫ್, ವಾಹನ ಸವಾರರಿಗೆ ತೊಂದರೆಯಾದಂತೆ ಪರ್ಯಾಯ ಮಾರ್ಗಗಳನ್ನು ಕೂಡಾ ಸೂಚಿಸಲಿದೆ.
ಈ ಯೋಜನೆಯಿಂದ ವಿಮಾನ ನಿಲ್ದಾಣಗಳ ಮೇಲಿನ ಅವಲಂಬನೆ ತಪ್ಪಲಿದ್ದು, ನೇರವಾಗಿ ವಿಪತ್ತು ಪೀಡಿತ ಪ್ರದೇಶಗಳಗೆ ಸಂಪರ್ಕ ಹೊಂದಲು ಸಾಧ್ಯವಾಗುವುದಲ್ಲದೇ ನಿರಾಶ್ರಿತರಿಗೆ ಆಶ್ರಯ ನೀಡಲು ಸಹಾಯವಾಗುವಂತೆ ಹೆದ್ದಾರಿಗಳನ್ನು ಮರು ನಿರ್ಮಾಣ ಮಾಡಲಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪರಿಸರ ವಿಕೋಪಗಳು ಮತ್ತು ಯುದ್ಧ ಸಂದರ್ಭಗಳಲ್ಲಿ ತುರ್ತು ಕಾರ್ಯಾಚರಣೆಗೆ ಇದು ಸಂಪೂರ್ಣ ಸಹಕಾರಿಯಾಗಲಿದ್ದು, ಐಎಎಫ್ ಕೈಗೊಂಡಿರುವ ನಿರ್ಧಾರ ಮಹತ್ವದ ಯೋಜನೆಯಾಗಿದೆ ಎಂದರೇ ತಪ್ಪಾಗಲಾರದು.