Just In
- 6 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 7 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 7 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 7 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್
ದೇಶದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ, ಗಣ್ಯರು, ಜನಪ್ರತಿನಿಧಿಗಳು ತಮ್ಮ ಕಾರುಗಳ ಮೇಲೆ ಮನಸ್ವೇಚ್ಛೆ ಕೆಂಪು ದೀಪ ಆಳವಡಿಕೆ ಹಾಗೂ ಸೈರನ್ ಬಳಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಇದೀಗ ಸುಪ್ರೀಂ ಆದೇಶವನ್ನು ಪಾಲಿಸುವಲ್ಲಿ ಕಟುಬದ್ಧವಾಗಿರುವ ರಾಜ್ಯದ ನೂತನ ಸಿಎಂ ಸಿದ್ಧರಾಮಯ್ಯ, ಕೆಂಪು ದೀಪದ ಇಂತಹ ಕಾರುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಸಾರ್ವಜನಿಕರ ನಿರಾತಂಕ ಸಂಚಾರದ ಹಕ್ಕಿಗೆ ಚ್ಯುತಿ ತರುಹ ಇಂತಹ ಪಯಣ ಕಾನೂನುಬಾಹಿರ. ಇದರಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಕಳೆದ
ವಾರ
ಸಚಿವ
ಸಂಪುಟ
ಸಭೆ
ನಡೆಸಿರುವ
ಸಿಎಂ
ಸಿದ್ಧರಾಮಯ್ಯ,
ಮಂತ್ರಿಗಳು
ಹಾಗೂ
ನ್ಯಾಯಾಧೀಶರು
ಮಾತ್ರ
ಕಾರಿನ
ಮೇಲೆ
ಕೆಂಪು
ದೀಪ
ಹಾಕಿಕೊಳ್ಳಬಹುದು
ಎಂಬ
ತೀರ್ಮಾನಕ್ಕೆ
ಬಂದಿದ್ದಾರೆ.
ಈ
ಆದೇಶವನ್ನು
ಮೀರಿ
ಧಾರ್ಮಿಕ
ಹಾಗೂ
ವಿವಿಧ
ಸಂಘಟನೆಗಳ
ಮುಖಂಡರು,
ಕೆಂಪು,
ಹಸಿರು
ಮುಂತಾದ
ದೀಪಗಳನ್ನು
ವಾಹನಗಳ
ಮೇಲೆ
ಬಳಸಿಕೊಂಡರೆ
ಅಂತವರ
ವಿರುದ್ಧ
ಕಠಿಣ
ಕ್ರಮ
ಕೈಗೊಳ್ಳುವುದಾಗಿ
ಎಚ್ಚರಿಕೆ
ನೀಡಿದೆ.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯ ಸಾಂವಿಧಾನಿಕ ಮುಖ್ಯಸ್ಥರ ವಾಹನಗಳಿಗಷ್ಟೇ ಕೆಂಪು ದೀಪವನ್ನು ಆಳವಡಿಸುವ ಅನುಮತಿಯಿದೆ.
ಇನ್ನುಳಿದಂತೆ ಪೊಲೀಸ್, ಅಂಬುಲೆನ್ಸ್, ಅಗ್ನಿಶಾಮಕ, ಸೇನೆಯ ವಾಹನಗಳು ಹಾಗೂ ಮೋಟಾರ್ ವಾಹನ ಕಾಯ್ದೆಯ ವಾಹನಗಳನ್ನು ಹೊರತುಪಡಿಸಿ ಇತರ ಯಾವುದೇ ಗಣ್ಯರ ವಾಹನಗಳಲ್ಲಿ ಕೆಂಪು ದೀಪ ಆಳವಡಿಸಬಾರದು.
ಈ ಹಿಂದೆಲ್ಲ ರಾಜ್ಯ ಸರಕಾರಗಳು ಮನಸ್ಸಿಗೆ ಬಂದಂತೆ ಕೆಂಪು ದೀಪ ಹಾಕಿಕೊಳ್ಳಲು ಅನುಮತಿ ನೀಡುತ್ತಿದ್ದವು. ಇದರಿಂದ ಜನ ಸಾಮಾನ್ಯರ ಹಕ್ಕಿಗೆ ಧಕ್ಕೆಯುಂಟಾಗಿತ್ತು.
ಪ್ರಕರಣವನ್ನು ಇನ್ನು ಆಳವಾಗಿ ಪರಿಗಣಿಸಿದರೆ ಕೆಂಪು ದೀಪ ಹಾಗೂ ಸರ್ಕಾರಿ ವಾಹನ ಫಲಕಗಳನ್ನು ಮರೆಮಾಚದೆ ಅವರ ಮಕ್ಕಳು, ಕುಟಂಬ ವರ್ಗ ತಮ್ಮ ಖಾಸಗಿ ಅಗತ್ಯಗಳಿಗಾಗಿ ಬಳಸುತ್ತಿರುವುದನ್ನು ನಾವು ಕಂಡಿರುತ್ತೇವೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಕೆಂಪು ದೀಪದ ಕಾರುಗಳಿಗೆ ಕಡಿವಾಣ ಬೀಳಲಿದ್ದು, ಈ ಸಂಬಂಧ ಸಿಎಂ ಸಿದ್ದು ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ 1998ರ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಆಗಬೇಕಾಗಿರುವುದು ಅಗತ್ಯವೆನಿಸಿದೆ.