ಐಎನ್ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ
ಭಾರತೀಯ ನೌಕಾದಳ ಮಗದೊಂದು ಮೈಲುಗಲ್ಲನ್ನು ಸಾಧಿಸಿದ್ದು, ಐಎನ್ಎಸ್ ಕೋಲ್ಕತ್ತಾ ಯುದ್ಧ ಹಡಗಿನ ಮೇಲಿಂದ ಗಾಳಿಯಲ್ಲೇ ಶತ್ರುವಿನ ದಾಳಿಯನ್ನು ಹೊಡೆದುರುಳಿಸಲು ಸಾಮರ್ಥ್ಯವುಳ್ಳ ಅತ್ಯಾಧುನಿಕ ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ.
ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ನೆಲದಿಂದ ದೂರ ವ್ಯಾಪ್ತಿ ಏರ್ ಮಿಸೈಲ್ (ಎಲ್ಆರ್ ಎಸ್ಎಎಂ) ಪಶ್ಚಿಮ ಬಂದಿರನಲ್ಲಿ ಯಶಸ್ವಿ ಪ್ರಯೋಗ ನಡೆಸಲಾಯಿತು. ಇದರೊಂದಿಗೆ ಭಾರತೀಯ ನೌಕಾ ಪಡೆಗೆ ಆನೆ ಬಲ ಬಂದಂತಾಗಿದೆ.

ಇದು ಕೇವಲ ಮಿಸೈಲ್ ಮಾತ್ರವಲ್ಲದೆ ಬಹು ಕ್ರಿಯಾತ್ಮಕ ಕಣ್ಗಾವಲು ವ್ಯವಸ್ಥೆ, ಪತ್ತೆ ಹಚ್ಚುವಿಕೆಗಾಗಿ ಅಪಾಯ ಎಚ್ಚರಿಕೆ ರಾಡಾರ್ (ಎಂಎಫ್ ಸ್ಟಾರ್), ಮಿಸೈಲ್ ಟ್ರ್ಯಾಂಕಿಗ್ ಮತ್ತು ಮಾರ್ಗದರ್ಶಿ ವ್ಯವಸ್ಥೆಗಳು ಇದರಲ್ಲಿರಲಿದೆ.

ಪ್ರಸ್ತುತ ಕ್ಷಿಪಣಿ ಪರೀಕ್ಷೆಯನ್ನು ಭಾರತೀಯ ನೌಕಾದಳ, ಡಿಆರ್ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಆಯೋಜಿಸಿದೆ.

ವರ್ಷಗಳಿಂದಲೂ ಹೈದರಾಬಾದ್ ಡಿಆರ್ಡಿಒ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ ನಡೆಸಿಕೊಂಡು ಬರುತ್ತಿದ್ದ ಅವಿರತ ಪ್ರಯತ್ನದ ಫಲವೇ ಇದಾಗಿದೆ.

ಭಾರತದಲ್ಲಿ ಎಲ್ಆರ್ ಸ್ಯಾಮ್ ಕ್ಷಿಪಣಿಯನ್ನು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನಿರ್ಮಿಸಿದೆ.

ಭಾರತೀಯ ನೌಕಾದಳದ ಭವಿಷ್ಯದ ಯುದ್ಧ ನೌಕೆಗಳಲ್ಲಿ ಕ್ಷಿಪಣಿಗಳು ಪ್ರಮುಖ ಅಸ್ತ್ರವಾಗಿ ಮಾರ್ಪಾಡುಗೊಳ್ಳಲಿದೆ. ಇದು ದೂರಗಾಮಿ ವಾಯು ದಾಳಿಯನ್ನು ಹೊಡೆದುರುಳಿಸುವಷ್ಟು ಸಾಮರ್ಥ್ಯ ಹೊಂದಿದೆ.


Click it and Unblock the Notifications








