Just In
- 18 min ago Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- 1 hr ago Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- 15 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 15 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
Don't Miss!
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- News Karnataka Lok Sabha Election 2024: ಮೊದಲ ದಿನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 'ಭಜರಂಗಿ ಸ್ಟಿಕರ್' ಕಾರಿನ ಮೇಲಿದ್ರೆ ಕಾರಿಗೆ ಏನು ಆಗಲ್ವಂತೆ, ಹಾಗಾದ್ರೆ ಈ ಸ್ಟಿಕರ್ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರು ವಾಹನಗಳ ಮೇಲೆ ಇತ್ತೀಚೆಗೆ ಈ ಹನುಮಾನ್ ಸ್ಟಿಕರ್ ಹೆಚ್ಚಿಗೆ ಕಾಣಿಸುತ್ತಿದೆ, ಬನ್ನಿ ಈ ಸ್ಟಿಕರ್ ಹಿಂದಿನ ಕತೆ ತಿಳಿದುಕೊಳ್ಳೋಣ.
ಬೆಂಗಳೂರು ಎಂದರೆ ತಟ್ಟನೆ ನೆನಪಾಗುವುದು ಟ್ರಾಫಿಕ್ ಎಂಬ ಮಾರಿಯ ಬಗ್ಗೆ, ಎಷ್ಟೋ ಮಂದಿ ತಮ್ಮ ಮನೆಯಲ್ಲಿ ಕಳೆಯುವ ಸಮಯಕ್ಕಿಂತ ರಸ್ತೆಯ ಮೇಲೆ ಹೆಚ್ಚು ಹೊತ್ತು ನಿಲ್ಲಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಹೀಗೆ ನಿಂತ ಸಮಯದಲ್ಲಿ ಅತ್ತಿತ್ತ ಕಣ್ಣು ಆಡಿಸಿದರೆ ವಾಹನಗಳ ಮೇಲೆ ನಿಮಗೆ ಕಾಣ ಸಿಗುವುದು ಈ ಭಜರಂಗಿ ಸ್ಟಿಕರ್.
ಹೌದು, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲೂ ಈ ಹನುಮಾನ್ ಸ್ಟಿಕ್ಕರ್ ರಾರಾಜಿಸುತ್ತಿದೆ. ಈ ಹನುಮಾನ್ ಸ್ಟಿಕರ್ ಎಂದಾಕ್ಷಣ ನಿಮ್ಮ ಮನದಲ್ಲಿ ಕೇಸರಿ ಬಣ್ಣ ಮೂಡುವುದಂತೂ ಖಂಡಿತ.
ಕಳೆದ ಬಾರಿ ದೇಶದೆಲ್ಲೆಡೆ ಬೀದಿ ಬೀದಿಗಳಲ್ಲಿ ಹಿಂದೂ ಕಾರ್ಯಕರ್ತರು ಪೆಂಡಾಲ್ ಹಾಕಿ ಗಣೇಶನನ್ನು ಪ್ರತಿಷ್ಟಾಪಿಸಿ ಅದ್ದೂರಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಹಿಂದೂಗಳ ಪ್ರತಿಷ್ಠೆಯ ಗಣಪತಿ ಹಬ್ಬ ಸಂದರ್ಭದಲ್ಲಿ ಹಿಂದುತ್ವವನ್ನು ನರನಾಡಿಗಳನ್ನು ಪ್ರವಹಿಸುವಂತೆ ಪ್ರೇರೇಪಿಸುತ್ತಿತ್ತು ಒಂದು ಚಿತ್ರ. ಅದೇ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಹನುಮಾನ್ ಸ್ಟಿಕ್ಕರ್.
ಕಾರು, ಬಸ್, ಬೈಕ್, ಲಾರಿ, ಅಂಗಡಿ-ಮುಂಗಟ್ಟುಗಳು ಯಾವುದನ್ನೂ ಈ ಸ್ಟಿಕ್ಕರ್ ಬಿಟ್ಟಿಲ್ಲ. ಅದಕ್ಕಿಂತಲೂ ಕೆಲವರ ವಾಟ್ಸಾಪ್ ಡಿಪಿಯಲ್ಲಿಯೂ ಈ ಭಜರಂಗಿ ಕಾಣಿಸಿಕೊಳ್ಳತೊಡಗಿದ್ದಾನೆ ಅಂದರೆ ಅದು ಯಾವ ರೀತಿ ಯುವ ಜನತೆಯಲ್ಲಿ ಕ್ರೇಜ್ ಹುಟ್ಟಿಸಿದೆ ಎನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ.
ನಿಮಗೆ ಈ ಬಗ್ಗೆ ತಿಳಿದಿಲ್ಲ ಎಂದರೆ ಖಂಡಿತ ಒಮ್ಮೆ ಬೆಂಗಳೂರಿನ ಕಾರುಗಳ ಕಡೆ ಕಣ್ಣು ಹಾಯಿಸಿ ನೋಡಿ, ಅಬ್ಬಾ !! ಅನ್ನುವ ಉದ್ಘಾರವೊಂದು ನಮಗರಿವಿಲ್ಲದೆ ಹೊರಹೊಮ್ಮುವುದಂತೂ ನಿಶ್ಚಿತ.
ಯಾಕಪ್ಪ ಹೇಗೆ ಎಲ್ಲೇ ಈ ಸ್ಟಿಕರ್ ನೋಡಿದರೂ ಮನಸ್ಸು ಹೀಗೆ ಸ್ಟಿಕರ್ ಕಡೆ ವಾಲುತ್ತದೆ ಎನ್ನುವುದಕ್ಕೆ ಮುಖ್ಯ ಕಾರಣ 'ಕರಣ್ ಆಚಾರ್ಯ' ಸಿದ್ಧಪಡಿಸಿರುವ ಅರ್ಧ ಮುಖದ ಭಜರಂಗಿ ಸ್ಟಿಕ್ಕರ್.
ಸದ್ಯ ರಾಷ್ಟ್ರಮಟ್ಟದಲ್ಲಿ ಐಕಾನ್ ಆಗ ಹೊರಹೊಮ್ಮಿರುವ ಈ ಸ್ಟಿಕರ್ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳಲ್ಲಿ ಅಷ್ಟೇ ಅಲ್ಲ ಬೇರೆ, ಬೇರೆ ರಾಜ್ಯಗಳಿಗೂ ಇದು ಹರಡಿದೆ.
ಯಾರಪ್ಪ ಈ ಸ್ಟಿಕರ್ ತಯಾರಿಸಿದ್ದು ?
ಕಾಸರಗೋಡು ಮೂಲದ ಕರಣ್ ಆಚಾರ್ಯ ಈ ಸ್ಟಿಕ್ಕರ್ ನಿರ್ಮಾಣದ ರೂವಾರಿ. ಚಿಕ್ಕಂದಿನಿಂದಲೇ ಚಿತ್ರಕಲೆ ಹಾಗೂ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ಈ ಯುವಕ ಕಲೆಯಲ್ಲಿಯೇ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದಾರೆ.
2ಡಿ ಹಾಗೂ 3ಡಿ ಅನಿಮೇಶನ್ ನಲ್ಲಿ ಪ್ರಾವೀಣ್ಯತೆ ಪಡೆದಿರುವ ಕರಣ್ ಹೇಳುವಂತೆ, ಈ ಅರ್ಧ ಮುಖದ ಹನುಮಂತ ಚಿತ್ರ ಜನರಲ್ಲಿ ಇಷ್ಟೊಂದು ಕ್ರೇಜ್ ಹುಟ್ಟಿಸಬಹುದೆಂಬುದನ್ನು ಅವರು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲವಂತೆ.
ಕಳೆದ ಬಾರಿಯ ಹಬ್ಬದ ಪ್ರಯುಕ್ತ ಲಾಂಛನಕ್ಕೆ ಬಳಸಲು ಕಾಸರಗೋಡಿನ ಕುಂಬ್ಳೆ ಪ್ರದೇಶದ ಹಿಂದೂ ಯುವಕರ ಕೋರಿಕೆ ಮೇಲೆ ಸಿದ್ಧಪಡಿಸಲಾದ ಈ ಸ್ಟಿಕರ್ ನಂತರದ ದಿನಗಳಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿತು.
"ಲಾಂಛನದಲ್ಲಿ ಬಳಸಲು ಮೊದಲು ಹುನುಮಾನ ಮುಖ ಮಾತ್ರ ಬಿಡಿಸಿ ಸ್ವಲ್ಪ ದಿನಗಳ ನಂತರ ಬಜರಂಗಿಗೆ ಪೂರ್ಣರೂಪ ನೀಡಿದೆ" ಎನ್ನುತ್ತಾರೆ ಕರಣ್.
ಕಾಸರಗೋಡು ಮೂಲದ ಕರಣ್ ಆಚಾರ್ಯ ಅವರ ಕಲೆಗೆ ಪ್ರೋತ್ಸಾಹ ನೀಡಿ ಚಿಕ್ಕಂದಿನಿಂದಲೂ ನೀರೆರೆಯುತ್ತಿರುವುದು ಅವರ ತಾಯಿ ಹಾಗೂ ಕುಟುಂಬಸ್ತರು.
ಕರಣ್ ಆಚಾರ್ಯ ಅವರ ಭಜರಂಗಿ ಸ್ಟಿಕರ್ ಐಕಾನ್ ಆಗಿ ಸುದ್ದಿ ಮಾಡುತ್ತಿದ್ದು, ಸ್ನೇಹಿತರಿಗೋಸ್ಕರ ಮಾಡಿದ ಈ ಸ್ಟಿಕರ್ ಸದ್ಯ ವಾಹನದ ಮೇಲೆ ಅಂಟಿಸಿದರೆ ದೈವ ಬಲ ಹೆಚ್ಚಿಗೆ ಸಿಗುತ್ತದೆ ಎಂಬೆಲ್ಲಾ ನಂಬಿಕೆ ಹುಟ್ಟಿಕೊಂಡಿದ್ದು, ಒಟ್ಟಿನಲ್ಲಿ ಜನತೆಯ ನೆಚ್ಚಿನ ಸ್ಟಿಕರ್ ಬೇರೆ ಬೇರೆ ರೂಪ ಪಡೆದು ಪ್ರಖ್ಯಾತಿ ಪಡೆಯುತ್ತಿದೆ.
ಸದ್ಯ ಹನುಮಾನ್ ಸರಣಿಯ ಕಾಮಿಕ್ ಪುಸ್ತಕ ಹೊರತರುವ ನಿಟ್ಟಿನಲ್ಲಿ ಪ್ರಯತ್ನದಲ್ಲಿರುವ ಕರುಣ್ ಆಚಾರ್ಯ ಅವರ ಕಲೆಗಳು ನಿಜಕ್ಕೂ ಅಭೂತಪೂರ್ವ ಎನ್ನಬಹುದು.
ಈಗಷ್ಟೇ ಎಲ್ಲರ ಮನಗೆಲ್ಲುತ್ತಿರುವ ಅವರ ಕಲೆ ಪ್ರಪಂಚದಾದ್ಯಂತ ಹರಡಿ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ಸಿಗಲಿ. ಮರೆಯಿಂದ ಸರಿದು ತೆರೆಯ ಮೇಲೆ ಬರಲಿ. ಕರಣ್ ಆಚಾರ್ಯ ಹೆಸರು ಜನಜನಿತವಾಗಲಿ ಎಂಬುದೇ ಡ್ರೈವ್ ಸ್ಪಾರ್ಕ್ ಕನ್ನಡದ ಆಶಯ.