Just In
- 7 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 8 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 8 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 10 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಗೇರಿಯಲ್ಲಿರುವ ಈ ಹೋಂಡಾ ಷೋ ರೂಂ ಹೇಗೆ ಮೋಸ ಮಾಡ್ತಿದೆ ಗೊತ್ತಾ ?
ವಾಹನ ನೋಂದಣಿ ವಿಚಾರದಲ್ಲಿ ಬೈಕ್ ಷೋ ರೂಂ ಮಾಲೀಕನೊಂದಿಗೆ ಜಗಳ ಮಾಡಿಕೊಂಡ ಮಾಜಿ ಸೈನಿಕರೊಬ್ಬರು ಗುಂಡು ಹಾರಿಸಿ ಬೆದರಿಸಿದ ಘಟನೆ ಶನಿವಾರ ಸಂಜೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿಮಗೆ ಯಾವಾದರೂ ವ್ಯಕ್ತಿ ಅತ್ವ ಸಂಸ್ಥೆ ಮೋಸ ಮಾಡಿದರೆ ಅಬ್ಬಬ್ಬಾ ಅಂದ್ರೆ ಏನ್ ಮಾಡ್ತೀರಾ ? ಅವರ ಹತ್ರ ಹೋಗಿ ಕೂಗಾಡ್ತೀರಾ, ಇನ್ನು ಹೆಚ್ಚು ಅಂದ್ರೆ ಆಗಿರೋ ಮೋಸಕ್ಕೆ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಂಟ್ ಕೊಡ್ತೀರಾ...
ಆದ್ರೆ, ಬೆಂಗಳೂರಿನ ಕೆಂಗೇರಿಯ ಹೊರವಲಯದಲ್ಲಿರುವ ಮೋಟಾರ್ಸೈಕಲ್ ಷೋ ರೂಂ ಒಂದು ಮೋಸ ಮಾಡಿದೆ ಎಂಬ ಕಾರಣಕ್ಕೆ ಮಾಜಿ ಸೈನಿಕರೊಬ್ಬರು ಷೋರೂಂಗೆ ಗನ್ ತೆಗೆದುಕೊಂಡು ಬಂದು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನೆಡೆದಿದೆ.
ವಾಹನ ನೋಂದಣಿ ವಿಚಾರದಲ್ಲಿ ಬೈಕ್ ಷೋ ರೂಂ ಮಾಲೀಕನೊಂದಿಗೆ ಜಗಳ ಮಾಡಿಕೊಂಡ ಮಾಜಿ ಸೈನಿಕರೊಬ್ಬರು ಗುಂಡು ಹಾರಿಸಿ ಬೆದರಿಸಿದ ಘಟನೆ ಶನಿವಾರ ಸಂಜೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನೆಡೆದಿದ್ದು, ಜಗದೀಶ್ 32 ಎಂಎಂ ಪಿಸ್ತೂಲ್ ಮೂಲಕ ಕೊಠಡಿಯ ಮೇಲ್ಛಾವಣೆಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಕೆಂಗೇರಿಯ ಷೋ ರೂಂ ಏಪ್ರಿಲ್ 1ರಿಂದ ನಿಷೇಧಿಸಲ್ಪಟ್ಟ ಬಿಎಸ್ III ಎಂಜಿನ್ ಹೊಂದಿರುವ 48 ಬೈಕುಗಳನ್ನು ಮಾರಾಟ ಮಾಡಿತ್ತು, ಆದರೆ ಸುಪ್ರೀಂ ಕೋರ್ಟ್ ಬಿಎಸ್ III ದ್ವಿಚಕ್ರ ವಾಹನಗಳ ಮಾರಾಟವನ್ನು ನಿಷೇಧಿಸಿದ್ದರೂ ಸಹ ಈ ಷೋ ರೂಂ ಅನಧಿಕೃತವಾಗಿ ಮಾರಾಟ ಮಾಡಿದ್ದೇ ಇಷ್ಟೆಲ್ಲಾ ತೊಂದರೆಗೆ ಕಾರಣ.
ಸ್ಯಾಟಲೈಟ್ ಮೋಟಾರ್ಸ್ ಎಂಬ ಹೆಸರಿನ ಹೋಂಡಾ ಅಧಿಕೃತ ಮಾರಾಟ ಷೋ ರೂಂ ಒಂದು ಬಿಎಸ್ III ದ್ವಿಚಕ್ರದ ವಾಹನಗಳನ್ನು ತಾತ್ಕಾಲಿಕ ನೋಂದಣಿ ಮಾಡಿ ಗ್ರಾಹಕರನ್ನು ವಂಚಿಸುತ್ತಿತ್ತು ಎಂದು ಗ್ರಾಹಕರು ಆರೋಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರ ಬಳಿ ಈ ಬಗ್ಗೆ ವಿಚಾರಿಸಿದ್ದು, ಈ ದ್ವಿಚಕ್ರ ವಾಹನಗಳು ಇಲ್ಲಿಯವರೆಗೂ ನೋಂದಾಯಿಸಲ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಮಾಜಿ ಸೈನಿಕ ಜಗದೀಶ್ (35) ರನ್ನು ಗಸ್ತಿನಲ್ಲಿದ್ದ ಮುಖ್ಯಪೇದೆ ಚಂದ್ರಪ್ಪ ಬಂಧಿಸಿದ್ದಾರೆ. ಜತೆಗೆ ಜಗದೀಶ್ ಬಳಿಯಿದ್ದ ಪರವಾನಿಗೆ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.