Just In
- 9 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 11 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 12 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 13 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಲ್ಮೆಟ್ ಕಡ್ದಾಯ ಮಾಡಿದ ಪೊಲೀಸರ ವಿರುದ್ದ ತಿರುಗಿಬಿದ್ದ ಬೈಕ್ ಸವಾರರು
ಟ್ರಾಫಿಕ್ ನಿಯಮಗಳಲ್ಲಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಕಡ್ಡಾಯ. ಹೀಗಾಗಿ ಮಾರುಕಟ್ಟೆಯಲ್ಲಿ ರೂ. 300 ರಿಂದ ಲಕ್ಷದ ವರೆಗು ಉತ್ತಮ ಗುಣಮಟ್ಟದ ಹೆಲ್ಮೆಟ್ಗಳು ಲಭ್ಯವಿದೆ. ಹೀಗಿರುವಾಗ ಬೈಕ್ ಸವಾರರು ಪೊಲೀಸರ ವಿರುದ್ದವೆ ತಿರುಗಿಬಿದ್ದಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ದಿನಕ್ಕೆ ದೇಶದಲ್ಲಿ ನೂರಾರು ಮಂದಿ ಹೆಲ್ಮೆಟ್ ರಹಿತ ಚಾಲನೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪುಣೆ ಜನರು ಮಾತ್ರ ಕಡ್ಡಾಯ ಹೆಲ್ಮೆಟ್ ನಿಯಮ ಮಾಡಿದ ಟ್ರಾಫಿಕ್ ಪೊಲೀಸರ ವಿರುದ್ದವೆ ಪ್ರತಿಭಟನೆಗೆ ಇಳಿದಿದ್ದಾರೆ.
ಹೌದು, ಈ ಘಟನೆಯು ಕಳೆದ ವಾರ ಪುಣೆ ನಗರದಲ್ಲಿ ನಡೆದಿದ್ದು, ಪುಣೆ ನಗರದ ಪೊಲೀಸ್ ಕಮಿಷನರ್ ಕೆ.ವೆಂಕಟಾಚಲಂ ಅವರು ಜನವರಿ 1, 2018 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂದು ಆದೇಶಿಸಿದ್ದಾರೆ. ಇದರಿಂದ ವಾಹನ ಸವಾರರು ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ.
ಪೊಲೀಸ್ ಕಮಿಷನರ್ ಕೆ.ವೆಂಕಟಾಚಲಂ ಅವರ ಈ ಆದೇಶವನ್ನು ತಿರಸ್ಕರಿಸಿ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪ್ರತಿನಿಧಿಗಳು, ಉದ್ಯಮಿಗಳು, 'ಎನ್ಜಿಒ'ಗಳು ಮತ್ತು ಆರ್ಟಿಐ ಕಾರ್ಯಕರ್ತರನ್ನು ಒಳಗೊಂಡಂತೆ ಪ್ರತಿಭಟಿಸುತ್ತಿದ್ದು, ಯಾವುದೇ ಕಾರಣಕ್ಕು ಹೆಲ್ಮೆಟ್ ಕಡ್ದಾಯ ಬೇಡ ಎನ್ನುತ್ತಿದ್ದಾರೆ.
ಈ ಬಗ್ಗೆಪುಣೆ ಮಿರರ್ನೊಂದಿಗೆಮಾತನಾಡಿದ ಎನ್ಸಿಪಿ ಮುಖಂಡ ಮತ್ತು ಸಲಹಾ ಸಮಿತಿಯ ಸದಸ್ಯರಾದ ಅಂಕುಶ್ರವರು 'ನಾವು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬ ಆದೇಶವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಏಕೆಂದರೆ ಇದು ಬೈಕ್ ಸವಾರರಿಗೆ ಭಾರೀ ಅನಾನುಕೂಲತೆಯನ್ನು ಉಂಟು ಮಾಡುತ್ತದೆ. ಮತ್ತು ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗವು 20-25 ಕಿ.ಮೀ ಗಿಂತಾ ಹೆಚ್ಚಾಗದಿದ್ದಾಗ ಹೆಲ್ಮೆಟ್ನ ಅಗತ್ಯವೇನು.?'
ಈ ಆದೇಶವನ್ನು ಹಿಂಪಡೆಯಲು ನಾವು ಆಯುಕ್ತರನ್ನು ಕೇಳಿಕೊಳ್ಳುತ್ತಿದ್ದೇವೆ. ಅವರು ಇದಕ್ಕೆ ಸಮ್ಮತಿಸದಿದ್ದರೆ, ಇದರ ವಿರುದ್ಧ ಮತ್ತಷ್ಟು ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
'ನಗರಕ್ಕೆ ಬರುವ ಪ್ರತಿಯೊಬ್ಬ ಪೊಲೀಸ್ ಕಮಿಷನರ್ ಒಂದೊಂದು ಹೊಸ ರೂಲ್ಸ್ ತರುತ್ತಿದ್ದಾರೆ. ಇಲ್ಲಿಯವರೆಗೆ ಇದು ಐದನೆಯ ಬಾರಿ ಇಂತಹ ಹಠಾತ್ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಬೈಕ್ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎನ್ನುವುದು ಅಲ್ಲಿನ ನಾಗರೀಕರ ಅಳಲು.
ಇದಲ್ಲದೇ ಪುಣೆ ನಗರದಲ್ಲಿ ಟ್ರಾಫಿಕ್ ಸಮಸ್ಯೆಯು ಹೆಚ್ಚಾಗಿಯೆ ಇದೆ. ಜೊತೆಗೆ ಕಿರಿದಾದ ರಸ್ತೆಯಲ್ಲಿ ಚಲಿಸುವ ಕಾರಣ ಹೆಲ್ಮೆಟ್ ನಮಗೆ ಬೇಕಾಗಿಲ್ಲ. ಆದ್ದರಿಂದ ಮೊದಲು ಮೂಲಭೂತ ಸಂಚಾರ ಸಮಸ್ಯೆಗಳನ್ನು ಪರಿಹರಿಸಿ' ಎಂದು ಆರ್ಟಿಐ ಕಾರ್ಯಕರ್ತ ಮತ್ತು ಸಜಗ್ ನಾಗರೀಕ್ ಮಂಚ್ ಅಧ್ಯಕ್ಷ ವಿವೇಕ್ ವೇಲಂಕರ್ ಅವರು ಹೇಳಿಕೊಂಡಿದ್ದಾರೆ.
'ನಾವು ಹೆದ್ದಾರಿಗಳಲ್ಲಿ ಹೆಲ್ಮೆಟ್ ರಹಿತ ಚಾಲನೆಯನ್ನು ವಿರೋಧಿಸುತ್ತೇವೆ ಆದರೆ ನಗರ ಪ್ರದೇಶಗಳಲ್ಲಿ ನಾಗರೀಕರು ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವುದರಿಂದ ಅದರ ಭಾರದಿಂದ ಸ್ಪೊಂಡಿಲಿಸ್ಟ್ಸ್ ಎಂಬ ಖಾಯಿಲೆಗೆ ಗುರಿಯಾಗುತ್ತಾರೆ ಮತ್ತು ಅದರಿಂದ ಅವರಿಗೆ ಕೇಳಲು ಕಷ್ಟವಾಗುತ್ತದೆ' ಎಂದು ಕ್ರಿಯೇಟಿವ್ ಫೌಂಡೇಷನ್ನ ಸಂದೀಪ್ ಖರ್ಡೆಕರ್ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಯಾರೇನೆ ಹೇಳಿದರು 'ಈ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು 200ಕ್ಕು ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸಿದರೆ ಅದು ನಮಗೆ ಒಳ್ಳೆಯದು. ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರ ಬಗ್ಗೆ ಪ್ರತಿಭಟನಾಕಾರರು ಒಂದು ಬಾರಿ ಯೋಚಿಸುವುದು ಒಳಿತು.
ನಾವು ಈ ವರೆಗು ನಾಗರೀಕರ ವಿರುದ್ಧವಾಗಿ ಯಾವುದೇ ಆದೇಶವನ್ನು ನೀಡಲಿಲ್ಲ, ಹೆಲ್ಮೆಟ್ ವಾಹನ ಚಾಲನೆ ವೇಳೆ ನಮ್ಮ ಶಿರವನ್ನು ಕಾಪಾಡುತ್ತದೆ ಎಂದು ಹೇಳಿರುವ ಪುಣೆ ಪೊಲೀಸ್ ಕಮಿಷನರ್ ಕೆ.ವೆಂಕಟೇಶ್ ಅವರು ವಾಹನ ಸವಾರರ ಸಲುವಾಗಿ ಇಂತಹ ಕಾಯಿದೆಯನ್ನು ತರುವುದು ತಪ್ಪೇನಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.