ಬಜೆಟ್ ಮಂಡಿಸಿದ್ದೆ ಶೆಟ್ರ ಸಾಧನೆ ಅಂತೀರಾ?

By Nagaraja

ತೀವ್ರ ಒತ್ತಡದ ನಡುವೆ ರಾಜ್ಯಕ್ಕೆ 2012-13ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಯಶಸ್ವಿಯಾಗಿ ಮಂಡಿಸಿದ್ದಾರೆ. ಮತ್ತೊಂದೆಡೆ ಬಜೆಟ್ ಲಾಭ-ನಷ್ಟಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಶೆಟ್ಟರ್ ಬಜೆಟ್ ಮಂಡಿಸಿರುವುದೇ ದೊಡ್ಡ ವಿಷಯ ಎಂದು ವಿಪಕ್ಷಗಳು ಲೇವಡಿ ಮಾಡುತ್ತಿವೆ.

ಒಟ್ಟು 1,17,000 ಕೋಟಿ ರು.ಗಳ ಬೃಹತ್ ಯೋಜನಾ ಗಾತ್ರದ ಬಜೆಟ್ ಅನ್ನು ಶೆಟ್ಟರ್ ರಾಜ್ಯದ ಮುಂದಿಟ್ಟಿದ್ದರು. ಕಳೆದ ವರ್ಷ ಈ ಮೊತ್ತ ರೂ 1,02,742 ಕೋಟಿ ಇತ್ತು. ಅಂದರೆ ಬಜೆಟ್ ಗಾತ್ರದಲ್ಲಿ ಶೇಕಡ 13.88 ರಷ್ಟು ಹೆಚ್ಚಳವಾಗಿದೆ. ಹಾಗೆಯೇ 22,310 ಕೋಟಿ ರು.ಗಳ ಕೃಷಿ ಬಜೆಟ್ ಕೂಡಾ ಮಂಡಿಸಿದ್ದರು.

ಅಂದ ಹಾಗೆ ಬಜೆಟ್‌ನಲ್ಲಿ ವಾಹನಗಳಿಗೆ ಸಂಬಂಧಿಸಿದ ವಿಷಯಗಳನ್ನು ನಾವಿಂದು ಚರ್ಚಿಸಲಿದ್ದೇವೆ.

ಡೀಸೆಲ್ ತೆರಿಗೆ ಇಳಿಕೆ
ಮೊದಲೆಯನೆಯದಾಗಿ ಡೀಸೆಲ್ ತೆರಿಗೆ ಇಳಿಸುವ ಮೂಲಕ ಶೆಟ್ಟರ್ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಡೀಸೆಲ್ ತೆರಿಗೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ ಮಾಡಲಾಗಿದೆ.

ಹೊಸ ಬಸ್ ಖರೀದಿ
ಹಾಗೆಯೇ 10,220 ಹೊಸ ಬಸ್ ಖರೀದಿಗೆ ನಿರ್ಧರಿಸಲಾಗಿದೆ. ಈ ಮೂಲಕ ಯಾತ್ರಾ ಕ್ಲೇಷ ಕಡಿಮೆಯಾಗಲಿದೆ. ಈ ಪೈಕಿ 123 ಬಸ್ ನಿಲ್ದಾಣಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ಹಾಗೆಯೇ ಶಿವಮೊಗ್ಗ ಅಯನೂರಿನಲ್ಲಿ 3 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕೂಡಾ ಸ್ಥಾಪಿಸಲಾಗುವುದು.

ನಮ್ಮ ಮೆಟ್ರೋ ಯೋಜನೆ
ಹಾಗೆಯೇ ಬೆಂಗಳೂರಿನ ಕೈಗನ್ನಡಿಯಾಗಿರುವ ನಮ್ಮ ಮೆಟ್ರೋ ಯೋಜನೆಗೆ 8,969 ಕೋಟಿ ರುಪಾಯಿ ಮೀಸಲಿಡಲಾಗಿದೆ.

ಪೊಲೀಸ್ ಇಲಾಖೆಗೆ ನೆರವು
ಈ ನಡುವೆ 1000 ಹೊಸ ಪೊಲೀಸ್ ವಾಹನಗಳನ್ನು ಘೋಷಿಸುವ ಮೂಲಕ ರಾಜ್ಯ ಭದ್ರತೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಪ್ರಯತ್ನವನ್ನು ಸಿಎಂ ಶೆಟ್ಟರ್ ಮಾಡಿದ್ದಾರೆ.

ಒಟ್ಟಿನಲ್ಲಿ ಸಿಎಂ ಶೆಟ್ಟರ್ ಮಂಡಿಸಿರುವ ಬಜೆಟ್ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ...

Most Read Articles

Kannada
English summary
2013-14 Karnataka Budget presented by Chief Minister Jagadish shettar. please respond your response with comment box given below.
Story first published: Saturday, February 9, 2013, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X