Just In
- 15 min ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 23 min ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 35 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 2 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಭಾಗವಾಗುವ ವಿಮಾನ
ವಿಮಾನ ಪ್ರಯಾಣಿಕರ ಸುರಕ್ಷತೆಯಲ್ಲಿ ಮಗದೊಂದು ಮೈಲುಗಲ್ಲು ಎಂದೇ ವ್ಯಾಖ್ಯಾನಿಸಬೇಕಾದ ತಂತ್ರಜ್ಞಾನದ ಅವಿಷ್ಕಾರವೊಂದರಲ್ಲಿ ಉಕ್ರೇನ್ ಎಂಜಿನಿಯರ್ರೊಬ್ಬರು, ವಿಮಾನ ತುರ್ತು ಸಂದರ್ಭದಲ್ಲಿ ಕ್ಯಾಬಿನ್ ಇಬ್ಬಾಗವಾಗುವ ವಿನೂತನ ತಂತ್ರಜ್ಞಾನವೊಂದನ್ನು ಅವಿಷ್ಕರಿಸಿದ್ದಾರೆ.
Also Read: ಜಗತ್ತಿನ 20 ಸುರಕ್ಷಿತ ವಿಮಾನಯಾನ ಸಂಸ್ಥೆಗಳು
ಏನಿದು
ತಂತ್ರಜ್ಞಾನ?
ಸಾಮಾನ್ಯವಾಗಿ
ಗಗನದಲ್ಲಿ
ಹಾರುವ
ವಿಮಾನಕ್ಕೆ
ಬೆಂಕಿ
ತಗುಲಿದಾಗ
ಪ್ರಯಾಣಿಕರು
ಪಾರಾಗುವ
ಸಾಧ್ಯತೆ
ತುಂಬಾನೇ
ಕಡಿಮೆಯಾಗಿರುತ್ತದೆ.
ಜೀವ
ರಕ್ಷಕ
ಪ್ಯಾರಾಚೂಟ್ಗಳು
ಇಲ್ಲಿ
ನಿರ್ಣಾಯಕ
ಘಟಕವೆನಿಸುತ್ತದೆ.
ಆದರೆ ಉಕ್ರೇನ್ ಎಂಜಿನಿಯರ್ ಅವಿಷ್ಕರಿಸಿರುವ ಹೊಸ ತಂತ್ರಜ್ಞಾನ ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ತಗುಲಿದಾಗ ವಿಮಾನ ವಿಬ್ಬಾಗವಾಗಲಿದೆ. ಅಲ್ಲದೆ ಪ್ರಯಾಣಿಕರು ಸಂಚರಿಸುವ ಕ್ಯಾಬಿನ್ ವಿಭಾಗವು ಪ್ಯಾರಚೂಟ್ ತಂತ್ರಗಾರಿಕೆಯ ನೆರವಿನಿಂದ ಸುರಕ್ಷಿತವಾಗಿ ಭೂಮಿಯನ್ನು ತಲುಪಬಹುದಾಗಿದೆ.
ನೂತನ ವಿಮಾನ ಭದ್ರತಾ ತಂತ್ರಜ್ಞಾನವು ವಿಶ್ಲೇಷಕರಲ್ಲಿ ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಇದರ ನೆರವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.
ಟೇಕ್ ಆಫ್, ಲ್ಯಾಂಡಿಂಗ್ ಅಥವಾ ಹಾರಾಟ ನಡೆಸುವಾಗ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಬೇರ್ಪಟ್ಟ ಭಾಗವನ್ನು ನೆಲ ಹಾಗೂ ನೀರಿನ ಮೇಲೂ ಸುರಕ್ಷಿತವಾಗಿ ಇಳಿಸಬಹುದಾಗಿದೆ.
ವಿಮಾನ ಅಪಘಾತ ಸಂಭವಿಸಿದಾಗ ಇದರ ಕ್ಯಾಬಿನ್ ಬೇರ್ಪಡಲಿದೆ. ತದಾ ವೇಳೆ ಮೇಲ್ಗಡೆಯಿಂದ ಸ್ವಯಂಚಾಲಿತವಾಗಿ ಪ್ಯಾರಚೂಟ್ ತೆರೆದುಕೊಳ್ಳಲಿದ್ದು, ಸುರಕ್ಷಿತವಾಗಿ ನೆಲವನ್ನು ತಲುಪುವಂತೆ ನೆರವು ಮಾಡಲಿದೆ.
ಇನ್ನು ನೆಲ ಅಥವಾ ನೀರಿನ ಮೇಲೆ ಬೀಳುವಾಗ ಆಘಾತದ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ವಿಮಾನದ ಅಡಿಯಲ್ಲಿ ರಬ್ಬರ್ ಟ್ಯೂಬ್ ಗಳನ್ನು ಲಗ್ಗತ್ತಿಸಲಾಗುವುದು.
ತಾಜಾ ಅಧ್ಯಯನಗಳ ಪ್ರಕಾರ ವಿಮಾನಗಳ ಅಪಘಾತ ಪ್ರಸಂಗ ಹೆಚ್ಚಾಗುತ್ತಿದ್ದು, ಪಾರಾಗುವ ಪ್ರಯಾಣಿಕರ ಪ್ರಮಾಣ ಕೇವಲ 24% ಮಾತ್ರವಾಗಿದೆ.
2014ರಲ್ಲಿ ಮಾತ್ರವಾಗಿ 111 ವಿಮಾನ ಅವಘಡಗಳು ಘಟಿಸಿ ಹೋಗಿದ್ದವು. 2013ರಲ್ಲಿ ಇದು 138ರಷ್ಟಾಗಿತ್ತು.
ಅಲ್ಲದೆ ಪ್ರಯಾಣಿಕ ಕ್ಯಾಬಿನ್ ಅಡಿಯಲ್ಲಿ ಲಗ್ಗೇಜ್ ಜಾಗವನ್ನು ಕೊಡಲಾಗಿದ್ದು, ಇದರಿಂದ ದುರಂತ ಎದುರಾದ್ದಲ್ಲಿ ಯಾವುದೇ ಲಗ್ಗೇಜ್ ಮಿಸ್ ಆಗುವುದಿಲ್ಲ.
ಅಂದ ಹಾಗೆ ಪ್ರಸ್ತುತ ಯೋಜನೆಗೆ ವಿಮರ್ಶಕರಿಂದ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು, ಇದು ವಿಮಾನವನ್ನು ಬಲಪಡಿಸುವ ಬದಲು ಜೋಡಣೆ ಇರುವುದರಿಂದ ಒಟ್ಟಾರೆ ಮೈಕಟ್ಟನ್ನು ದುರ್ಬಲಪಡಿಸಲಿದೆ ಎಂದಿದ್ದಾರೆ.
ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ ಗೊತ್ತಾ ?