Just In
- 5 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 8 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 8 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 9 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟರಿಂದ ಅಸಾಧ್ಯವಾದುದ್ಧನ್ನು ಸಾಧಿಸಿ ತೋರಿಸಿರುವ ಅಜಿತ್
ಇಡೀ ದೇಶದ ಚನಲಚಿತ್ರರಂಗವನ್ನು ತೆರೆದು ನೋಡಿದರೆ ಕಾರು, ಬೈಕ್ ಬಗ್ಗೆ ಅನೇಕ ನಟ ನಟಿಯರು ಅತ್ಯಂತ ಹೆಚ್ಚು ಕ್ರೇಜ್ ಹೊಂದಿದ್ದರೂ ನೈಜ ಪರಿಸ್ಥಿತಿಯಲ್ಲಿ ಸಾಹಸ ಪ್ರದರ್ಶನಕ್ಕಿಳಿಯಲು ಹಿಂಜರಿಯುತ್ತಾರೆ. ಚಿತ್ರಗಳಲ್ಲಿ ಡ್ಯೂಪ್ಗಳನ್ನು ಬಳಸುವ ಅಂತಹ ನಾಯಕ ನಟರು ಪರದೆ ಮುಂದೆ ದೊಡ್ಡ ಸ್ಟಾರ್ಗಳಾಗಿ ಹೊರಹೊಮ್ಮುತ್ತಾರೆ.
ಆದರೆ ಇವೆಲ್ಲದರಿಂದ ವಿಭಿನ್ನವಾಗಿರುವ ದಕ್ಷಿಣ ಭಾರತದ ಹೆಸರಾಂತ ನಟ ತಮಿಳಿನ ಅಜಿತ್, ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು, ಬಿಡುವಿನ ಸಂದರ್ಭದಲ್ಲಿ ಸಾಹಸ ಬೈಕ್ ಯಾತ್ರೆಯನ್ನು ಇಷ್ಟಪಡುತ್ತಾರೆ. ಸದ್ಯ ಮುಂಬೈನಲ್ಲಿ ಹೊಸ ಸಿನೆಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಅಜಿತ್, ಪುಣೆಯಿಂದ ಚೆನ್ನೈ ವರೆಗೆ ಬೈಕ್ ರೈಡಿಂಗ್ ನಡೆಸಿದ್ದರು.
ಸುರಕ್ಷಿತ ರಸ್ತೆ ಚಾಲನೆ ಸೇರಿದಂತೆ ರಸ್ತೆ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹದೊಂದು Rally ಹಮ್ಮಿಕೊಳ್ಳಲಾಗಿತ್ತು. ಅಂತಿಮವಾಗಿ ಇದನ್ನು ಯಶಸ್ವಿಯಾಗಿ ಪೂರೈಸುವಲ್ಲಿ 'ತಲ' ಖ್ಯಾತಿಯ ಅಜಿತ್ ಯಶಸ್ವಿಯಾಗಿದ್ದಾರೆ.
ಸದ್ಯ
ಕನ್ನಡ
ಅಭಿಮಾನಿಗಳು
ಚಾಲೆಂಜಿಂಗ್
ಸ್ಟಾರ್
ದರ್ಶನ್
ಅವರಿಂದಲೂ
ಇಂತಹದೊಂದು
ಸಾಧನೆಯನ್ನು
ನಿರೀಕ್ಷಿಸುತ್ತಿದ್ದಾರೆ.
ನಿಮಗೆಲ್ಲರಿಗೂ
ತಿಳಿರುವ
ಹಾಗೆಯೇ
ದರ್ಶನ್
ಸಹ
ಸಾಹಸ
ಬೈಕ್
ಪ್ರಿಯರಾಗಿದ್ದಾರೆ.
ಅಜಿತ್ ತಮ್ಮ ಈ ಸಾಹಸ ಯಾತ್ರೆಗೆ ಬಿಎಂಡಬ್ಲ್ಯು ಕೆ1300ಎಸ್ ದುಬಾರಿ ಬೈಕ್ ಬಳಕೆ ಮಾಡಿದ್ದರು. ಇದರ ಬೆಂಗಳೂರು ಆನ್ ರೋಡ್ ದರ ಬರೋಬ್ಬರಿ 25 ಲಕ್ಷ ರು.ಗಳ ಅಸುಪಾಸಿನಲ್ಲಿದೆ.
ಪುಣೆಯಿಂದ ಆರಂಭಿಸಿದ್ದ ಅಜಿತ್ ಬೈಕ್ ರಾಲಿಯು ಬೆಂಗಳೂರು ಹಾದಿಯಾಗಿ ಚೆನ್ನೈ ತಲುಪಿತ್ತು. ಈ ನಡುವೆ ಬೆಂಗಳೂರಿನಲ್ಲಿ ಮೂರು ತಾಸುಗಳಷ್ಟು ಹೊತ್ತುವಿಶ್ರಾಂತಿಯನ್ನು ಪಡೆದುಕೊಂಡಿದ್ದರು.
ಕೇವಲ 16 ಗಂಟೆಯೊಳಗೆ ತಮ್ಮ ಈ ಜಾಗೃತಿ ಪಯಣವನ್ನು ಅಜಿತ್ ಪೂರ್ಣಗೊಳಿಸಿದ್ದರು. ಈ ಮೂಲಕ ಒಟ್ಟು 1300 ಕೀ.ಮೀ. ಕ್ರಮಿಕರಿಸಿದ್ದರು.
ನಟ ಅಜಿತ್ಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದ್ದಲ್ಲಿ ತುರ್ತು ನೆರವು ನೀಡಲು ವೈದ್ಯಕೀಯ ತಂಡವೊಂದು ಹಿಂಬಾಲಿಸಿತ್ತು.
ಈ ಸಾಹಸಿಕ ಪ್ರದರ್ಶನದ ಇನ್ನೊಂದು ಪ್ರಮುಖ ಅಂಶವೆಂದರೆ ನಟ ಅಜಿತ್ ಎಲ್ಲ ರಸ್ತೆ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಬಂದಿರುವುದು. ಇದು ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಹಾಗೆಯೇ ರಸ್ತೆ ಬದಿಗಳಲ್ಲಿರುವ ದಾಬಾಗಳಲ್ಲಿ ಸಿಗುವ ರೋಟಿ ಮೂಲಕವೇ ತಮ್ಮ ಹಸಿವನ್ನು ನೀಗಿಸಿಕೊಂಡಿದ್ದರು.
ಯಶಸ್ವಿ ಪಯಣದ ಬಳಿಕ ಪ್ರತಿಕ್ರಿಯಿಸಿರುವ ಅಜಿತ್, ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಬೈಕ್ ಪಯಣ ನೆರವಾಗುತ್ತಿದ್ದು, ಇದು ಒಂಥರ ಧ್ಯಾನ ಮಾಡಿದ್ದಂತೆ ಎಂದಿದ್ದಾರೆ.
ಅಜಿತ್ ಅವರ ಈ ದುಬಾರಿ ಕೆ1300ಎಸ್ ಬೈಕ್ನಲ್ಲಿ ಬ್ಲೂಟೂತ್, ಕ್ಯಾಮೆರಾಗಳಂತಹ ಸೇವೆ ಲಭ್ಯವಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಜಿತ್ ಬೆಂಗಳೂರಿನಿಂದ ಚೆನ್ನೈ ವರೆಗೆ ಬೈಕ್ ರೈಡಿಂಗ್ ಹಮ್ಮಿಕೊಂಡಿದ್ದರು. ಸದ್ಯ ಅವರಿಗಂತೂ ಬೈಕ್ ರೈಡಿಂಗ್ ಹವ್ಯಾಸವಾಗಿಬಿಟ್ಟಿದೆ.
ಅತ್ಯುತ್ತಮ ಸ್ಪೋರ್ಟ್ಸ್ ಬೈಕ್ಗಳ ಪೈಕಿ ಒಂದಾಗಿರುವ ಬಿಎಂಡಬ್ಲ್ಯು ಕೆ ಸಿರೀಸ್, ಇನ್ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಜಾಗತಿಕವಾಗಿ ಹೆಚ್ಚು ಖ್ಯಾತಿ ಪಡೆದಿರುವ ಇದು ಫೇರ್ಡ್ ಬೈಕ್ ವಿಭಾಗದಲ್ಲಿ ಗುರುತಿಸಿಕೊಂಡಿದೆ. ಇದು ನಿರ್ವಹಣೆ, ಹ್ಯಾಂಡ್ಲಿಂಗ್ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.
ಅಂದ ಹಾಗೆ ತಿಂಗಳುಗಳ ಹಿಂದೆಯಷ್ಟೇ 25 ಲಕ್ಷ ರು. ಬೆಲೆಬಾಳುವ ದುಬಾರಿ ಎಪ್ರಿಲಿಯಾ ಬೈಕನ್ನು ಅಜಿತ್ ಖರೀದಿಸಿದ್ದರು.